ಆ್ಯಪ್ನಗರ

ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲಿಗೆ ಗ್ರೀನ್ ಸಿಗ್ನಲ್

ಇಂದು ಮೆಟ್ರೋ ಗ್ರೀನ್ ಲೈನ್ ಚಾಲನೆಯಾಗುತ್ತಿರುವ ಬೆನ್ನಲ್ಲೇ ಇದೀಗ ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಮಾರ್ಗ ನಿರ್ಮಿಸಲು ಜಪಾನ್ ಆಸಕ್ತಿ ತೋರಿಸಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಮಟ್ಸು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ವಿಕ ಸುದ್ದಿಲೋಕ 18 Jun 2017, 1:12 pm
ಬೆಂಗಳೂರು: ಇಂದು ಮೆಟ್ರೋ ಗ್ರೀನ್ ಲೈನ್ ಚಾಲನೆಯಾಗುತ್ತಿರುವ ಬೆನ್ನಲ್ಲೇ ಇದೀಗ ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಮಾರ್ಗ ನಿರ್ಮಿಸಲು ಜಪಾನ್ ಆಸಕ್ತಿ ತೋರಿಸಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಮಟ್ಸು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
Vijaya Karnataka Web proposal for bengaluru chennai high speed rail
ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲಿಗೆ ಗ್ರೀನ್ ಸಿಗ್ನಲ್


ಕೆಂಜಿ ಹಿರಮಟ್ಸು ಅವರು ಮುಖ್ಯಮಂತ್ರಿಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಭೇಟಿಯಾಗಿದ್ದರು. ನಮ್ಮ ಮೆಟ್ರೋ ಮೊದಲ ಹಂತದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿರುವ ಹಿರಮಟ್ಸು ಅವರನ್ನು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವಿಧ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಜಪಾನ್ ಹಣಕಾಸು ಸಂಸ್ಥೆ ನೆರವಿನೊಂದಿಗೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ವಿವಿಧ ಕಾಮಗಾರಿಗಳ ಬಗ್ಗೆ ಹಿರಮಟ್ಸು ಅವರು ಚರ್ಚೆ ನಡೆಸಿದರು. ಬೆಂಗಳೂರಿನ ಫೆರಿಪೆರಲ್ ರಸ್ತೆ, ಕೆ.ಸಿ. ಕಣಿವೆ, ಹೈಬ್ರಿಡ್ ಕಾರು, ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಮತ್ತಿತರ ವಿಚಾರಗಳ ಬಗ್ಗೆ ಮಾತುಕತೆ ನಡೆಯಿತು.

ಇದೇ ಸಂದರ್ಭದಲ್ಲಿ ಹಿರಮಟ್ಸು ಅವರು ಹೈಸ್ಪೀಡ್ ರೈಲು ಮಾರ್ಗದ ವಿಚಾರದ ಬಗ್ಗೆ ಮುಖ್ಯಮಂತ್ರಿಯವರು ಗಮನ ಸೆಳೆದರು.
ಆಗ ಮುಖ್ಯಮಂತ್ರಿಯವರು ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ತುಷಾರ್ ಗಿರಿನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಏನಿದು ಹೈಸ್ಪೀಡ್ ರೈಲು?
ಒಂದು ನಗರದಿಂದ ಮತ್ತೊಂದು ನಗರಕ್ಕೆ ಅತಿ ಕಡಿಮೆ ಸಮಯದಲ್ಲಿ ಪ್ರಯಾಣ ಸಾಧ್ಯವಾಗಿಸುವಂಥ ಯೋಜನೆಯ ಪ್ರಸ್ತಾವನೆಯನ್ನು ಅಮೆರಿಕ ಮೂಲದ ಕಂಪನಿ ಮುಂದಿಟ್ಟಿದೆ. ಕಾಂಕ್ರೀಟ್‌ ಪಿಲ್ಲರ್‌ಗಳ ಮೇಲೆ ನಿರ್ಮಿಸುವ ಸುರಂಗದೊಳಗೆ ಗಂಟೆಗೆ 1,200 ಕಿ.ಮೀ. ವೇಗ ಸಾಧಿಸಬಹುದು. ಸುರಂಗದೊಳಗಿನ ನಿರ್ವಾತ ಪ್ರದೇಶದಲ್ಲಿ ತೇಲುವ ಕಾರಣ ಪಾಡ್‌ ಅಥವಾ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ.



ಒಂದು ವೇಳೆ ಈ ಪ್ರಸ್ತಾವನೆ ಕಾರ್ಯಗತಗೊಂಡರೆ, ಕೇವಲ 30 ನಿಮಿಷದೊಳಗೆ ಬೆಂಗಳೂರಿನಿಂದ ಚೆನ್ನೈ ತಲುಪಬಹುದು. ಒಂದೂವರೆ ಗಂಟೆಯೊಳಗೆ ಮುಂಬಯಿ ತಲುಪಬಹುದು. ಬಸ್‌ ಟಿಕೆಟ್‌ ದರದಲ್ಲೇ ಜನ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸಬಹುದು. ಪ್ರಯಾಣದ ಅವಧಿಗೆ ಶುಲ್ಕ ವಿಧಿಸಲಾಗುವುದು, ಪ್ರಯಾಣಕ್ಕೆ ಅಲ್ಲ ಎಂದು ಹೈಪರ್‌ಲೂಪ್‌ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಪಿಲ್ಲರ್‌ಗಳ ಮೇಲೆ ಪ್ರಿಫ್ಯಾಬ್ರಿಕೇಟೆಡ್‌ ಟ್ಯೂಬ್‌ಗಳನ್ನು ಅಳವಡಿಸುವುದರಿಂದ ನಿರ್ಮಾಣದ ಸಮಯ ಹಾಗೂ ವೆಚ್ಚ ತಗ್ಗಿಸಬಹುದು ಎಂದಿದೆ. ಟ್ಯೂಬ್‌ ಮೇಲೆ ಅಳವಡಿಸುವ ಸೌರ ಫಲಕಗಳು ಹಾಗೂ ಪಿಲ್ಲರ್‌ ಮೇಲಿನ ಗಾಳಿ ಯಂತ್ರಗಳು ನೆರವಿನಿಂದ ಕಾರ್ಯನಿರ್ವಹಣೆ ವೆಚ್ಚವೂ ತಗ್ಗುವುದು ಎಂದು ಹೇಳಲಾಗಿದೆ. ಆಯಸ್ಕಾಂತೀಯ ವ್ಯವಸ್ಥೆಯಿಂದ ಪಾಡ್‌ ಚಲಿಸುವುದು

ಮುಂದಿನ 5 ವರ್ಷಗಳಲ್ಲಿ ದುಬೈ ಹಾಗೂ ಅಬು ಧಾಬಿ ನಡುವಿನ ವಿಶ್ವದ ಮೊದಲ ಪಥ ನಿರ್ಮಾಣವಾಗುವ ನಿರೀಕ್ಷೆ ಇದೆ. ಇದರಿಂದ 90 ನಿಮಿಷಗಳ ಪ್ರಯಾಣದ ಅವಧಿ 12 ನಿಮಿಷಗಳಿಗೆ ಇಳಿಯಲಿದೆ.

ಒಂದು ಕಿ.ಮೀ. ಹೈಸ್ಪೀಡ್‌ ಲೇನ್‌ ನಿರ್ಮಿಸಲು 300 ಕೋಟಿ ರೂ. ಬೇಕಾಗುವುದು. ಆದರೆ, ಪಾಡ್‌ನ ಒಂದು ಕಿ.ಮೀ ಪಥ ನಿರ್ಮಾಣಕ್ಕೆ 72 ಕೋಟಿ ಬೇಕಾಗುವುದು ಎಂದು ಹೈಪರ್‌ ಲೂಪ್‌ ಹೇಳಿದೆ. [ ಬೆಂಗಳೂರು-ಚೆನ್ನೈ ರಸ್ತೆ ಪ್ರಯಾಣ 30 ನಿಮಿಷ !]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ