ಆ್ಯಪ್ನಗರ

ಪೌರತ್ವ ಕಾಯ್ದೆ ಪರ-ವಿರೋಧ ಧ್ವನಿ: ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರತಿಧ್ವನಿ..!

ದೇಶಾದ್ಯಂತ ಈಗ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ ಮಾತು. ಕೆಲವರು ಕಾಯ್ದೆಯ ಪರ, ಮತ್ತೆ ಕೆಲವರು ಕಾಯ್ದೆಯ ವಿರೋಧ! ದೇಶಾದ್ಯಂತ ಈ ಪ್ರತಿಭಟನೆಗಳು ಕಾವು ಪಡೆದುಕೊಂಡಿವೆ. ಪರ-ವಿರೋಧ ಧ್ವನಿ ಇದೀಗ ಕಹಳೆಯ ರೂಪ ಪಡೆದುಕೊಂಡಿದೆ! ಬೆಂಗಳೂರು ಸೇರಿದಂತೆ ದೇಶಾದ್ಯಂತ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಇಡೀ ದೇಶದ ಚಿತ್ರಣವನ್ನು ನಿಮ್ಮ ಮುಂದೆ ಇಡುವ ಪ್ರಯತ್ನವಿದು.

Vijaya Karnataka Web 23 Dec 2019, 4:56 pm
ದೇಶಾದ್ಯಂತ ಈಗ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ ಮಾತು. ಕೆಲವರು ಕಾಯ್ದೆಯ ಪರ, ಮತ್ತೆ ಕೆಲವರು ಕಾಯ್ದೆಯ ವಿರೋಧ! ದೇಶಾದ್ಯಂತ ಈ ಪ್ರತಿಭಟನೆಗಳು ಕಾವು ಪಡೆದುಕೊಂಡಿವೆ. ಪರ-ವಿರೋಧ ಧ್ವನಿ ಇದೀಗ ಕಹಳೆಯ ರೂಪ ಪಡೆದುಕೊಂಡಿದೆ! ಬೆಂಗಳೂರು ಸೇರಿದಂತೆ ದೇಶಾದ್ಯಂತ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಇಡೀ ದೇಶದ ಚಿತ್ರಣವನ್ನು ನಿಮ್ಮ ಮುಂದೆ ಇಡುವ ಪ್ರಯತ್ನವಿದು.
Vijaya Karnataka Web protest against citizenship amendment act
ಪೌರತ್ವ ಕಾಯ್ದೆ ಪರ-ವಿರೋಧ ಧ್ವನಿ: ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರತಿಧ್ವನಿ..!


500 ವರ್ಷದ ದಾಖಲೆ ಬಾಬ್ರಿ ಮಸೀದಿಯನ್ನೇ ಉಳಿಸಲಿಲ್ಲ, ನಾವೆಲ್ಲಿಂದ ಪೌರತ್ವದ ದಾಖಲೆ ಕೊಡೋದು?

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಬೆಂಗಳೂರಿನ ಕಂಟೋನ್ಮೆಂಟ್‌ ಬಳಿಯಿರುವ ಖುದ್ದೂಸ್‌ ಸಾಬ್‌ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದ ಬೃಹತ್‌ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಮೌಲಾನಾ ಜುಲ್ಫಿಕರ್‌ ನೂರಿ, 500 ವರ್ಷದ ಕಾಗದಗಳು ಬಾಬ್ರಿ ಮಸೀದಿಯನ್ನು ಉಳಿಸಿಲ್ಲ. ಇನ್ನು ಪೌರತ್ವಕ್ಕೆ ದಾಖಲೆಗಳನ್ನು ಕೊಡುವುದು ಎಲ್ಲಿಂದ ಎಂದು ಖಾರವಾಗಿ ಪ್ರಶ್ನಿಸಿದರು. ಪ್ರತಿಭಟನೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರು. ಹೀಗಾಗಿ, ಮೇಕ್ರಿ ವೃತ್ತದಿಂದ ಕಂಟೋನ್ಮೆಂಟ್ ನಿಲ್ದಾಣದವರೆಗಿನ ರಸ್ತೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶೇಕಡಾ 10ರಷ್ಟು ಮುಸ್ಲಿಮರು ಹೊರ ಬಂದಿದ್ದಕ್ಕೇ ದೇಶ ಹೊತ್ತಿ ಉರಿಯುತ್ತಿದೆ. ಇನ್ನು ಎಲ್ಲಾ ಮುಸ್ಲಿಮರೂ ಹೊರ ಬಂದ್ರೆ ಏನಾಗುತ್ತೋ ಗೊತ್ತಿಲ್ಲ. ಇದು ಬಿಜೆಪಿಯ ಅಪ್ಪನವರ ದೇಶವಲ್ಲ, ಗಾಂಧಿಯ ದೇಶವಿದು ಎಂದು ಮೌಲಾನಾ ಜುಲ್ಫಿಕರ್ ನೂರಿ ಆಕ್ರೋಶ ವ್ಯಕ್ತಪಡಿಸಿದರು.

Video-ವಿಡಿಯೋ: ದೇಶಾದ್ಯಂತ ಕಾವು ಪಡೆದಕೊಂಡ ಪೌರತ್ವ ಕಾಯ್ದೆ ಪರ-ವಿರೋಧದ ಪ್ರತಿಭಟನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ