ಆ್ಯಪ್ನಗರ

ಪ್ರತಿಭಟನೆಯಲ್ಲಿ ಭಾಗವಹಿಸಿದ ಕ್ರೈಸ್ತ ಸನ್ಯಾಸಿನಿಯ ಚರ್ಚ್‌ ಕೆಲಸಕ್ಕೆ ನಿರ್ಬಂಧ

ಅತ್ಯಾಚಾರ ಆರೋಪಿ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ಬಂಧನ ಆಗ್ರಹಿಸಿ ಕೊಚ್ಚಿಯಲ್ಲಿ ನಡೆದ ಕ್ರೈಸ್ತ ಸನ್ಯಾಸಿನಿಯರ ಪ್ರತಿಭಟನೆಯಲ್ಲಿ ಭಾಗವಹಿಸಿದ ಭಗಿನಿಯೊಬ್ಬರಿಗೆ ಚರ್ಚ್‌ ಕರ್ತವ್ಯದಿಂದ ದೂರವಿರುವಂತೆ ಸೂಚಿಸಿದ್ದು ಆಕ್ಷೇಪಕ್ಕೆ ಕಾರಣವಾಗಿದೆ.

Vijaya Karnataka 24 Sep 2018, 9:36 am
ವಯನಾಡ್‌: ಅತ್ಯಾಚಾರ ಆರೋಪಿ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ಬಂಧನ ಆಗ್ರಹಿಸಿ ಕೊಚ್ಚಿಯಲ್ಲಿ ನಡೆದ ಕ್ರೈಸ್ತ ಸನ್ಯಾಸಿನಿಯರ ಪ್ರತಿಭಟನೆಯಲ್ಲಿ ಭಾಗವಹಿಸಿದ ಭಗಿನಿಯೊಬ್ಬರಿಗೆ ಚರ್ಚ್‌ ಕರ್ತವ್ಯದಿಂದ ದೂರವಿರುವಂತೆ ಸೂಚಿಸಿದ್ದು ಆಕ್ಷೇಪಕ್ಕೆ ಕಾರಣವಾಗಿದೆ.

ವಯನಾಡಿನ ಸಿರೋ ಮಲಬಾರ್‌ ಕ್ಯಾಥೊಲಿಕ್‌ ಚರ್ಚ್‌ಗೆ ಸೇರಿದ ಲೂಸಿ ಕಲಪುರ ಅವರಿಗೆ ಮದರ್‌ ಸುಪೀರಿಯರ್‌ ಅವರು ಮೌಖಿಕ ಆದೇಶ ನೀಡಿ, ಪ್ರಾರ್ಥನೆ, ತರಗತಿ ಸೇರಿದಂತೆ ಚರ್ಚ್‌ ಸಂಬಂಧಿ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಚಿಸಿದ್ದಾರೆ. ಆದರೆ, ಏಕೆ ಕರ್ತವ್ಯದಿಂದ ದೂರ ಇರಬೇಕು ಎಂಬ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.

ಈ ನಡುವೆ, ಸಿಸ್ಟರ್‌ ಲೂಸಿ ಅವರ ವಿರುದ್ಧ ಮೂರು ತಿಂಗಳ ಹಿಂದೆಯೇ ಶಿಸ್ತುಕ್ರಮಕ್ಕೆ ಮಾನಂತವಾಡಿ ಧರ್ಮಕ್ಷೇತ್ರ ಶಿಫಾರಸು ಮಾಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಸಾಲ ಮಾಡಿ ಕಾರು ಖರೀದಿ, ಕ್ರೈಸ್ತ ಸನ್ಯಾನಿಸಿಯರ ಸಮವಸ್ತ್ರ ಧರಿಸದೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಚರ್ಚ್‌ ವಿರುದ್ಧ ಹೇಳಿಕೆ ನೀಡಿದ್ದರಿಂದ ಆಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಲೂಸಿ ಈ ಆರೋಪಗಳನ್ನು ನಿರಾಕರಿಸಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇ ಆದೇಶಕ್ಕೆ ಕಾರಣ ಎಂದಿದ್ದಾರೆ.

ಅಪರಾಧ ಕೃತ್ಯದ ಮರುಸೃಷ್ಟಿ

ಎರಡು ದಿನಗಳ ಅವಧಿಗಾಗಿ ಪೊಲೀಸ್‌ ಕಸ್ಟಡಿಯಲ್ಲಿರುವ ಬಂಧಿತ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ಅವರನ್ನು 'ಅಪರಾಧ ಕೃತ್ಯದ ಮರು ಸೃಷ್ಟಿಗಾಗಿ' ಭಾನುವಾರ ಕುರವಿಲಂಗಾಡುವಿನ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಇನ್ನೂ ತಪ್ಪೊಪ್ಪಿಗೆ ಹೇಳಿಕೆ ನೀಡದಿರುವ ಮುಳಕ್ಕಲ್‌ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡುವಂತೆ ಪೊಲೀಸರು ಕೋರ್ಟ್‌ ಮೊರೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ