ಆ್ಯಪ್ನಗರ

ನಾನು ಭಾರತೀಯನೆಂದ ಅಫ್ಜಲ್‌ ಗುರು ಪುತ್ರ

ತಾತ ಗುಲಾಂ ಮೊಹಮ್ಮದ್‌ ಮತ್ತು ತಾಯಿ ತಬಸುಮ್‌ ಜತೆ ವಾಸಿಸುತ್ತಿರುವ ಗಾಲಿಬ್‌ ಬರುವ ಮೇ 5ರಂದು ನಡೆಯಲಿರುವ ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನೆ.

Vijaya Karnataka 6 Mar 2019, 5:00 am
ಬಾರಾಮುಲ್ಲಾ: 2001ರ ಸಂಸತ್‌ ಮೇಲಿನ ಉಗ್ರ ದಾಳಿ ಪ್ರಕರಣದಲ್ಲಿ ನೇಣುಗಂಬವೇರಿದ ಅಫ್ಜಲ್‌ ಗುರು ಮಗ ಗಾಲಿಬ್‌ ಆಧಾರ್‌ ಕಾರ್ಡ್‌ ಪಡೆದಿದ್ದಾನೆ. ಇದರಿಂದ ಭಾರಿ ಖುಷಿಯಲ್ಲಿರುವ ಗಾಲಿಬ್‌, ''ಈಗ ಭಾರತ ಪ್ರಜೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್‌ ಪಡೆಯುವ ಭರವಸೆ ಇದೆ,'' ಎಂದಿದ್ದಾನೆ.
Vijaya Karnataka Web galib


ತಾತ ಗುಲಾಂ ಮೊಹಮ್ಮದ್‌ ಮತ್ತು ತಾಯಿ ತಬಸುಮ್‌ ಜತೆ ವಾಸಿಸುತ್ತಿರುವ ಗಾಲಿಬ್‌ ಬರುವ ಮೇ 5ರಂದು ನಡೆಯಲಿರುವ ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನೆ. ''ನನ್ನ ತಂದೆಗೆ ತಾವು ವೈದ್ಯರಾಗಬೇಕೆಂಬ ಕನಸಿತ್ತು. ಅದು ಈಡೇರಲಿಲ್ಲ. ನಾನೀಗ ಎಂಬಿಬಿಎಸ್‌ ಮಾಡಲು ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಒಂದೊಮ್ಮೆ ಇಲ್ಲಿ ಕಾಲೇಜುಗಳಲ್ಲಿ ಸೀಟು ಸಿಗದಿದ್ದರೆ ಟರ್ಕಿಗೆ ಹೋಗಿ ಸ್ಕಾಲರ್‌ಶಿಪ್‌ ಮೇಲೆ ಎಂಬಿಬಿಎಸ್‌ ಮಾಡುವ ಆಸೆ ಹೊಂದಿದ್ದೇನೆ. ಹೀಗಾಗಿ ಭಾರತ ಪಾಸ್‌ಪೋರ್ಟ್‌ಗಾಗಿ ಎದುರು ನೋಡುತ್ತಿದ್ದೇನೆ,'' ಎಂದು ಗಾಲಿಬ್‌ ಹೇಳಿದ್ದಾನೆ.

''ನಾನು ಈ ಮಟ್ಟಕ್ಕೆ ಸಾಧನೆ ಮಾಡಲು ನನ್ನ ತಾಯಿ ಕಾರಣ. 5ನೇ ತರಗತಿಯಿಂದಲೂ ಆಕೆ ಉಗ್ರವಾದದ ಕಿಡಿಗಳು ತಾಗದಂತೆ ನನ್ನನ್ನು ಜೋಪಾನದಿಂದ ನೋಡಿಕೊಂಡಿದ್ದಾಳೆ,'' ಎಂದೂ ಗಾಲಿಬ್‌ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ