ಆ್ಯಪ್ನಗರ

ಬಾಲಕಿಯರ ರೇಪ್ ಮಾಡಿ ಕೊಲ್ಲೋದೇ ಕೆಲಸ..! ವಿಕೃತ ಕಾಮಿಗೆ ಗಲ್ಲು ಶಿಕ್ಷೆಯಾದಾಗ ನಿಟ್ಟುಸಿರಿಟ್ಟ ಆತ್ಮಗಳು..!

ಆತನ ಹೆಸರು ಮರ್ರಿ ಶ್ರೀನಿವಾಸ ರೆಡ್ಡಿ. ವಿಕೃತ ಕಾಮಿ. ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದ. ಆದ್ರೆ, ಅತ್ಯಾಚಾರಗೈದು ಕೊಲೆ ಮಾಡೋದೇ ಆತನ ಪ್ರವೃತ್ತಿ. ಅದೂ ಕೂಡಾ ಬಾಲಕಿಯರೇ ಆತನ ಟಾರ್ಗೆಟ್..!

TIMESOFINDIA.COM 7 Feb 2020, 3:33 pm
ನಲ್ಲೊಂಡ (ತೆಲಂಗಾಣ): ಕೋರ್ಟ್‌ ಆವರಣದಲ್ಲಿ ನೀರವ ಮೌನ ಆವರಿಸಿತ್ತು. ಮುದ್ದು ಮಗಳನ್ನು ಕಳೆದುಕೊಂಡ ಹೆತ್ತವರು ಕಣ್ಣೀರಿಡುತ್ತಾ ಕಾದು ಕುಳಿತಿದ್ದರು. ಆದ್ರೆ, ಅವರ ಕಣ್ಣೀರಿಗೆ, ಬಿಸಿ ಉಸಿರಿಗೆ ನ್ಯಾಯಾಲಯ ಮೋಸ ಮಾಡಲಿಲ್ಲ. ಆತನಿಗೆ ಗಲ್ಲು ಶಿಕ್ಷೆ ಆಗಲೇಬೇಕಿತ್ತು. ತೀರ್ಪು ಕೂಡಾ ಗಲ್ಲು ಶಿಕ್ಷೆಗೆ ಪರವಾಗಿಯೇ ಬಂದಿತ್ತು..!
Vijaya Karnataka Web rape
ಬಾಲಕಿಯರ ರೇಪ್ ಮಾಡಿ ಕೊಲ್ಲೋದೇ ಕೆಲಸ..! ವಿಕೃತ ಕಾಮಿಗೆ ಗಲ್ಲು ಶಿಕ್ಷೆಯಾದಾಗ ನಿಟ್ಟುಸಿರಿಟ್ಟ ಆತ್ಮಗಳು..!


ಆತನೊಬ್ಬ ವಿಕೃತ ಕಾಮಿ..!

ಆತನ ಹೆಸರು ಮರ್ರಿ ಶ್ರೀನಿವಾಸ ರೆಡ್ಡಿ. ವಿಕೃತ ಕಾಮಿ. ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದ. ಆದ್ರೆ, ಅತ್ಯಾಚಾರಗೈದು ಕೊಲೆ ಮಾಡೋದೇ ಆತನ ಪ್ರವೃತ್ತಿ. ಅದೂ ಕೂಡಾ ಬಾಲಕಿಯರೇ ಆತನ ಟಾರ್ಗೆಟ್..!

11 ವರ್ಷ, 14 ವರ್ಷ ಹಾಗೂ 17 ವರ್ಷದ ಮೂವರು ಬಾಲಕಿಯರು ನಾಲ್ಕು ವರ್ಷದ ಹಿಂದೆ ನಾಪತ್ತೆಯಾಗಿದ್ದರು. ಅವರ ಶವಗಳು ಗ್ರಾಮದ ಸಮೀಪದ ಕೃಷಿ ಹೊಂಡದಲ್ಲಿ ತೇಲುತ್ತಿದ್ದವು..! ಒಂದು ಮೃತದೇಹವಂತೂ ಅಸ್ತಿ ಪಂಜರವಾಗಿತ್ತು. ಈ ಕೃತ್ಯವನ್ನು ಎಸಗಿದ್ದು ಶ್ರೀನಿವಾಸ ರೆಡ್ಡಿಯೇ ಅನ್ನೋದಕ್ಕೆ ಸಾಕ್ಷ್ಯಗಳೂ ಸಿಕ್ಕಿದ್ದವು. ಶ್ರೀನಿವಾಸ ರೆಡ್ಡಿಯ ವೀರ್ಯ, ಘಟನೆ ನಡೆದ ವೇಳೆ ಆತನ ಮೊಬೈಲ್ ಇದ್ದ ಸ್ಥಳ, ಆರೋಪಿಯ ತಪ್ಪೊಪ್ಪಿಗೆ.. ಎಲ್ಲವೂ ಕೂಡಾ ಶ್ರೀನಿವಾಸರೆಡ್ಡಿಯ ಕೈವಾಡವನ್ನು ಸಾರಿ ಸಾರಿ ಹೇಳುತ್ತಿದ್ದವು.

ಮಗಳ ಮೇಲೆ ಅತ್ಯಾಚಾರ ಮಾಡಲು ಫ್ರೆಂಡ್‌ಗೆ ಅನುಮತಿ ಕೊಟ್ಟಿದ್ದ ಮಹಾತಾಯಿ..! 14 ವರ್ಷದ ಬಾಲಕಿ ಈಗ ಗರ್ಭಿಣಿ

ವಾದ-ವಿವಾದಗಳೆಲ್ಲಾ ಮುಗಿದ ಮೇಲೆ ಶ್ರೀನಿವಾಸ ರೆಡ್ಡಿಯನ್ನು ಅಪರಾಧಿ ಎಂದು ಘೋಷಿಸಲಾಗಿತ್ತು. ಆತನಿಗೆ ಶಿಕ್ಷೆ ಪ್ರಮಾಣ ಪ್ರಕಟಿಸುವಾಗ ಇಡೀ ಕೋರ್ಟ್‌ ಆವರಣದಲ್ಲಿ ನೀರವ ಮೌನ. ಒಟ್ಟು ಮೂರು ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟಿಸಿದ ನ್ಯಾಯಮೂರ್ತಿಗಳು ಒಂದು ಪ್ರಕರಣದಲ್ಲಿ ಮರಣದಂಡನೆ, ಮತ್ತೊಂದು ಪ್ರಕರಣದಲ್ಲಿ 20 ವರ್ಷ ಜೈಲು, ಮಗದೊಂದು ಪ್ರಕರಣದಲ್ಲಿ 10 ವರ್ಷ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಮಹಿಳೆ ಶೌಚಗೃಹದಲ್ಲಿದ್ದಾಗ ಇಣುಕಿ ನೋಡಿ ಮೊಬೈಲ್‌ನಲ್ಲಿ ದೃಶ್ಯಾವಳಿ ಸೆರೆ ಹಿಡಿದ ಕಾಮುಕ..!

ನಲ್ಗೊಂಡ ಕೋರ್ಟ್‌ನಲ್ಲಿ ಗಲ್ಲು ಶಿಕ್ಷೆ ತೀರ್ಪು ಹೊರಬಿದ್ದ ಕೂಡಲೇ ಮಗಳನ್ನು ಕಳೆದುಕೊಂಡ ಹೆತ್ತವರು ಕಣ್ಣೀರಿಟ್ಟರು. ಅದು ಆನಂದ ಭಾಷ್ಪವಂತೂ ಖಂಡಿತಾ ಅಲ್ಲ. ಅಪರಾಧಿಗೆ ಏನು ಶಿಕ್ಷೆ ಕೊಟ್ಟರೆ ಏನು? ಮಗಳು ವಾಪಸ್ ಬರುವಳೆ ಅನ್ನೋದು ಹೆತ್ತವರ ಪ್ರಶ್ನೆ. ಈ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ. ಆದ್ರೆ, ವಿಕೃತಕಾಮಿ ಶ್ರೀನಿವಾಸ ರೆಡ್ಡಿಯಿಂದ ಹಿಂಸೆ ಅನುಭವಿಸಿ ಜೀವಬಿಟ್ಟ ಎಳೆಯ ಆತ್ಮಗಳು ಮಾತ್ರ ಗೋರಿಯಲ್ಲೇ ನಿಟ್ಟುಸಿರು ಬಿಟ್ಟವೇನೋ..

ಡೇಟಿಂಗ್ ಹೆಸರಲ್ಲಿ ಮನಸ್ಸಲ್ಲೇ ಮಂಡಿಗೆ ತಿನ್ನಿಸಿ ಟೆಕ್ಕಿಗೆ 4 ಲಕ್ಷ ರೂ. ಬ್ಲೇಡ್‌! ಎರಡೆರಡು ಸಲ ಮೋಸ ಹೋದ ಭೂಪ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ