ಆ್ಯಪ್ನಗರ

ಕನ್ಹಯ್ಯ ವಾಹನದ ಮೇಲೆ ದಾಳಿ

ಬೆಗುಸರಾಯ್‌ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಕನ್ಹಯ್ಯ ಮತ್ತು ಅವರ ಸಂಗಡಿಗರು ಪ್ರಯಾಣಿಸುತ್ತಿದ್ದ ಕಾರು ದಹಿಯಾ ಗ್ರಾಮ ಪ್ರವೇಶಿಸಿದಾಗ ದಾಳಿ ನಡೆದಿದೆ. ವಾಹನದಲ್ಲಿದ್ದ ಕೆಲವರು ಗಾಯಗೊಂಡಿದ್ದಾರೆ.

Vijaya Karnataka Web 16 Oct 2018, 10:13 pm
ಪಟನಾ: ಹೊಸದಿಲ್ಲಿಯ ಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಘಟನೆ ಬಿಹಾರದಲ್ಲಿ ಮಂಗಳವಾರ ನಡೆದಿದೆ.
Vijaya Karnataka Web kanhaiya


ಬೆಗುಸರಾಯ್‌ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಕನ್ಹಯ್ಯ ಮತ್ತು ಅವರ ಸಂಗಡಿಗರು ಪ್ರಯಾಣಿಸುತ್ತಿದ್ದ ಕಾರು ದಹಿಯಾ ಗ್ರಾಮ ಪ್ರವೇಶಿಸಿದಾಗ ದಾಳಿ ನಡೆದಿದೆ. ವಾಹನದಲ್ಲಿದ್ದ ಕೆಲವರು ಗಾಯಗೊಂಡಿದ್ದಾರೆ.

ಪಟನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌)ಯ ಕಿರಿಯ ವೈದ್ಯರೊಂದಿಗೆ ಕೈಕೈ ಮಿಲಾಯಿಸಿದ ಕಾರಣ ಕನ್ಹಯ್ಯ ಮತ್ತು ಆತನ ಬೆಂಬಲಿಗರ ವಿರುದ್ಧ ಫುಲ್ವಾರಿ ಷರೀಫ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.

31 ರ ಹರೆಯದ ಕನ್ಹಯ್ಯ ಅವರು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಗುಸರಾಯ್‌ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ