ಆ್ಯಪ್ನಗರ

ಪಲ್ಸರ್‌ ಸುನಿ ವಿಚಾರಣೆ ತೀವ್ರ

ಚಿತ್ರನಟಿಯ ಅಪಹರಣ ಹಾಗೂ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ ಪ್ರಮುಖ ಆರೋಪಿ ಪಲ್ಸರ್‌ ಸುನಿಯನ್ನು ಹೆಚ್ಚಿನ ತನಿಖೆಗಾಗಿ ಕೊಯಮತ್ತೂರಿಗೆ ಕರೆತರಲಾಗಿದೆ.

ಏಜೆನ್ಸೀಸ್ 27 Feb 2017, 4:37 pm
ಕೊಯಮತ್ತೂರು: ಚಿತ್ರನಟಿಯ ಅಪಹರಣ ಹಾಗೂ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ ಪ್ರಮುಖ ಆರೋಪಿ ಪಲ್ಸರ್‌ ಸುನಿಯನ್ನು ಹೆಚ್ಚಿನ ತನಿಖೆಗಾಗಿ ಕೊಯಮತ್ತೂರಿಗೆ ಕರೆತರಲಾಗಿದೆ.
Vijaya Karnataka Web pulsar suni police enquiry
ಪಲ್ಸರ್‌ ಸುನಿ ವಿಚಾರಣೆ ತೀವ್ರ


ಕಳೆದ ಫೆ.17ರಂದು ರಾತ್ರಿ ಚಿತ್ರೀಕರಣ ಮುಗಿಸಿ ವಾಪಸ್‌ ತೆರಳುತ್ತಿದ್ದಾಗ ಕೊಚ್ಚಿ ಬಳಿ ಚಿತ್ರನಟಿಯನ್ನು ಅಪಹರಿಸಿ ದೌರ್ಜನ್ಯ ಎಸಗಿದ ಬಳಿಕ ಸುನಿ ಹಾಗೂ ಸಹಚರ ವಿ.ಪಿ. ವೀಗೀಶ್‌ ಇಲ್ಲಿನ ಪೀಲಮೇಡು ಮತ್ತು ಶ್ರೀರಾಮಪುರದಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಭಾನುವಾರ ಬೆಳಿಗ್ಗೆ ಇಲ್ಲಿಗೆ ಕರೆತರಲಾಗಿದೆ. ಅವರು ತಂಗಿದ್ದ ಮನೆ ಮಾಲೀಕರನ್ನು ವಿಚಾರಣೆಗೆ ಒಳಪಡಿಸುವುದು ಪೊಲೀಸರ ಉದ್ದೇಶವಾಗಿದೆ.

ಪಲ್ಸರ್‌ ಸುನಿ ಬಳಸುತ್ತಿದ್ದ ದ್ವಿಚಕ್ರ ವಾಹನದ ಮಾಲೀಕನನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ, ತಮ್ಮ ಬೈಕ್‌ ಕಳವಾಗಿದೆ ಎಂದು ಈಗಾಗಲೇ ಅವರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಗೇಶ್‌ ಜತೆ ರೂಮ್‌ನಲ್ಲಿದ್ದ ಯುವಕನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಅಲುವಾ ಮತ್ತು ಎರ್ನಾಕುಲಂನ ಪೊಲೀಸರ ತಂಡ ಇಲ್ಲಿಗೆ ಆಗಮಿಸಿತ್ತು. ಚಿತ್ರನಟಿ ಅಪಹರಣ ಪ್ರಕರಣದ ಹಿಂದೆ ಯಾವುದೇ ಸಂಚಿನ ಸುಳಿವು ಇಲ್ಲ ಎಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಹೇಳಿಕೆಯನ್ನು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಖಂಡಿಸಿದ್ದಾರೆ.

ಕೊಚ್ಚಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೆನ್ನಿತ್ತಲ, ಈ ಪ್ರಕರಣದಲ್ಲಿ ಯಾವುದೇ ಸಂಚು ನಡೆದಿಲ್ಲ ಎಂದು ಹೇಳುವ ಮೂಲಕ ಗೃಹ ಸಚಿವರೂ ಆಗಿರುವ ವಿಜಯನ್‌ ಅವರು ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ