ಹೊಸದಿಲ್ಲಿ: ಪುಲ್ವಾಮ ಉಗ್ರ ದಾಳಿ ಪ್ರಕರಣದಲ್ಲಿ ಗುಪ್ತಚರ ವೈಫಲ್ಯ ಆಗಿಲ್ಲ ಎಂದು ಸರಕಾರ ಸಂಸತ್ತಿನಲ್ಲಿ ಬುಧವಾರ ಸಮರ್ಥನೆ ನೀಡಿದೆ. ''ಎಲ್ಲಾ ಗುಪ್ತಚರ ಸಂಸ್ಥೆಗಳು ಉತ್ತಮ ಸಮನ್ವಯದೊಂದಿಗೆ ಕೆಲಸ ಮಾಡುತ್ತ ಬಂದಿವೆ. ಲಭ್ಯ ಮಾಹಿತಿಯನ್ನು ಆ ಕ್ಷಣವೇ ಪರಸ್ಪರ ಹಂಚಿಕೊಂಡು ಭದ್ರತೆಗೆ ಸಹಕಾರಿಸುತ್ತಿವೆ. ಜಮ್ಮು-ಕಾಶ್ಮೀರವು ಪ್ರಾಯೋಜಿತ ಭಯೋತ್ಪಾದನೆಯಿಂದ ಬಾಧಿತಗೊಂಡಿದೆ. ಕಳೆದ ಮೂರು ದಶಕಗಳಿಂದ ಅಲ್ಲಿನ ಉಗ್ರ ಚಟುವಟಿಕೆಗೆ ಗಡಿಯಾಚೆಯಿಂದ ಕುಮ್ಮಕ್ಕು ಲಭಿಸುತ್ತ ಬಂದಿದೆ. ಈ ಎಲ್ಲ ವಿಧ್ವಂಸಗಳನ್ನು ಹತ್ತಿಕ್ಕುವ ದಿಸೆಯಲ್ಲಿ ನಮ್ಮ ಭದ್ರತಾ ಪಡೆಗಳು ಸಾಕಷ್ಟು ಯಶಸ್ವಿಯಾಗಿವೆ. ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆಯಲ್ಲಿ ರಾಜಿ ಇಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಉಗ್ರರನ್ನು ಮಟ್ಟಹಾಕಲಾಗಿದೆ,'' ಎಂದು ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್ ರೆಡ್ಡಿ ರಾಜ್ಯಸಭೆಗೆ ತಿಳಿಸಿದರು.
ಪುಲ್ವಾಮ ದಾಳಿಯಲ್ಲಿ ಗುಪ್ತಚರ ಲೋಪ ಇಲ್ಲ
ಎಲ್ಲಾ ಗುಪ್ತಚರ ಸಂಸ್ಥೆಗಳು ಉತ್ತಮ ಸಮನ್ವಯದೊಂದಿಗೆ ಕೆಲಸ ಮಾಡುತ್ತ ಬಂದಿವೆ. ಲಭ್ಯ ಮಾಹಿತಿಯನ್ನು ಆ ಕ್ಷಣವೇ ಪರಸ್ಪರ ಹಂಚಿಕೊಂಡು ಭದ್ರತೆಗೆ ಸಹಕಾರಿಸುತ್ತಿವೆ ಎಂದು ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್ ರೆಡ್ಡಿ ರಾಜ್ಯಸಭೆಗೆ ತಿಳಿಸಿದರು.
PTI 27 Jun 2019, 5:00 am