ಆ್ಯಪ್ನಗರ

ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಸಿನಿಮೀಯ ಶೈಲಿ ಕಾರು ಚೇಸ್‌: 3.6 ಕೋಟಿ ರೂ. ದರೋಡೆ

Pune-Solapur Highway Robbery: ಪುಣೆ ಸಮೀಪದ ಇಂದಾಪುರ ಬಳಿ ಕಾರನ್ನು ತಡೆಯಲು ನಾಲ್ವರು ಕಳ್ಳರು ಯತ್ನಿಸಿದರು. ರೋಡ್‌ ಹಂಪ್‌ ಬಳಿ ಕಾರು ನಿಧಾನ ಮಾಡಿದ ಚಾಲಕ ಬಳಿಕ ಶರವೇಗದಲ್ಲಿಅಲ್ಲಿಂದ ಕಾರು ಚಲಾಯಿಸಿಕೊಂಡು ಮುಂದೆ ಸಾಗಿದ್ದ. ಕೂಡಲೇ ಎರಡು ಕಾರು, ಎರಡು ಬೈಕ್‌ನಲ್ಲಿ ಹೊರಟ ದರೋಡೆಕೋರರು ಹಣ ಇದ್ದ ಕಾರನ್ನು ಸಿನಿಮೀಯ ಶೈಲಿಯಲ್ಲಿ ಚೇಸ್‌ ಮಾಡಿದರು. ಬೈಕ್‌ನಲ್ಲಿದ್ದ ಲೂಟಿಕೋರರು ಕಾರಿನ ಮೇಲೆ ಗಂಡು ಹಾರಿಸಿ ತಡೆದರು. ಬಳಿಕ ಕಾರಲ್ಲಿದ್ದ ಇಬ್ಬರನ್ನು ಥಳಿಸಿ, ಅವರ ಬಳಿಯಿದ್ದ 3.60 ಕೋಟಿ ನಗದು ಕಸಿದುಕೊಂಡು ಕತ್ತಲಲ್ಲಿಮಾಯವಾಗಿದ್ದಾರೆ.

Edited byಹೇಮಂತ್ ಕುಮಾರ್ ಎಸ್ | Vijaya Karnataka 27 Aug 2022, 11:57 pm

ಹೈಲೈಟ್ಸ್‌:

  • ನಾಲ್ವರು ಹೆದ್ದಾರಿ ದರೋಡೆಕೋರರು ಲೂಟಿಗೆ ಸ್ಕೆಚ್‌
  • ರೋಡ್‌ ಹಂಪ್‌ ಬಳಿ ಕಾರು ನಿಧಾನ ಮಾಡಿದ ಚಾಲಕ ಬಳಿಕ ಶರವೇಗದಲ್ಲಿ ಅಲ್ಲಿಂದ ಕಾರು ಚಲಾಯಿಸಿಕೊಂಡು ಮುಂದೆ
  • ಎರಡು ಕಾರು, ಎರಡು ಬೈಕ್‌ನಲ್ಲಿ ಹೊರಟ ದರೋಡೆಕೋರರು
  • ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web robbery
ಪ್ರಾತಿನಿಧಿಕ ಚಿತ್ರ
ಮುಂಬಯಿ: ದಾರಿ ಹೋಕರನ್ನು ಸಿನಿಮೀಯ ಶೈಲಿಯಲ್ಲಿ ಚೇಸ್‌ ಮಾಡಿದ ದರೋಡೆಕೋರರು 3 ಕೋಟಿ 60 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಪುಣೆ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಭವೇಶ್‌ ಕುಮಾರ್‌ ಪಟೇಲ್‌ ಹಾಗೂ ವಿಜಯ್‌ಭಾಯ್‌ ಎಂಬಿಬ್ಬರು 3.60 ಕೋಟಿ ರೂ. ಹಣ ತೆಗೆದುಕೊಂಡು ಕಾರಿನಲ್ಲಿ ಹೊರಟಿದ್ದರು. ದುಡ್ಡು ತೆಗೆದುಕೊಂಡು ಹೊರಟಿರೋ ವಿಷಯ ತಿಳಿದ ನಾಲ್ವರು ಹೆದ್ದಾರಿ ದರೋಡೆಕೋರರು ಲೂಟಿಗೆ ಸ್ಕೆಚ್‌ ಹಾಕಿದರು.
17 ಲಕ್ಷದ ಚಾಕಲೇಟ್‌ ಹೊತ್ತೊಯ್ದ ಕಳ್ಳರು: ಸಿಸಿಟಿವಿಯೂ ಮಂಗಮಾಯ
ಪುಣೆ ಸಮೀಪದ ಇಂದಾಪುರ ಬಳಿ ಕಾರನ್ನು ತಡೆಯಲು ನಾಲ್ವರು ಕಳ್ಳರು ಯತ್ನಿಸಿದರು. ರೋಡ್‌ ಹಂಪ್‌ ಬಳಿ ಕಾರು ನಿಧಾನ ಮಾಡಿದ ಚಾಲಕ ಬಳಿಕ ಶರವೇಗದಲ್ಲಿ ಅಲ್ಲಿಂದ ಕಾರು ಚಲಾಯಿಸಿಕೊಂಡು ಮುಂದೆ ಸಾಗಿದ್ದ. ಕೂಡಲೇ ಎರಡು ಕಾರು, ಎರಡು ಬೈಕ್‌ನಲ್ಲಿ ಹೊರಟ ದರೋಡೆಕೋರರು ಹಣ ಇದ್ದ ಕಾರನ್ನು ಸಿನಿಮೀಯ ಶೈಲಿಯಲ್ಲಿ ಚೇಸ್‌ ಮಾಡಿದರು.

ಬೈಕ್‌ನಲ್ಲಿದ್ದ ಲೂಟಿಕೋರರು ಕಾರಿನ ಮೇಲೆ ಗಂಡು ಹಾರಿಸಿ ತಡೆದರು. ಬಳಿಕ ಕಾರಲ್ಲಿದ್ದ ಇಬ್ಬರನ್ನು ಥಳಿಸಿ, ಅವರ ಬಳಿಯಿದ್ದ 3.60 ಕೋಟಿ ನಗದು ಕಸಿದುಕೊಂಡು ಕತ್ತಲಲ್ಲಿಮಾಯವಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಶ್ರೀಮಂತರ ಮನೆಗಳನ್ನೇ ಗುರಿಯಾಗಿಸಿ ಕಳವು ಮಾಡುತ್ತಿದ್ದಾತನ ಬಂಧನ: ₹37 ಲಕ್ಷ ಮೌಲ್ಯದ ಆಭರಣ ಜಪ್ತಿ
ರೈಲು ಚಾಲಕ ಸಮಯ ಪ್ರಜ್ಞೆಯಿಂದ 12 ಆನೆಗಳ ಜೀವ ರಕ್ಷಣೆ

ಮೆದಿನಿನಗರ: ಇಬ್ಬರು ಲೋಕೋ ಪೈಲಟ್‌ಗಳ ಸಮಯೋಚಿತ ನಡೆಯಿಂದ ಜಾರ್ಖಂಡ್‌ ರಾಜ್ಯದ ಪಾಲಾಮು ಅಭಯಾರಣ್ಯ ಪ್ರದೇಶದಲ್ಲಿಮರಿಗಳು ಸೇರಿ 12 ಆನೆಗಳ ಜೀವ ಉಳಿದಿದೆ.

ಪಶ್ಚಿಮ ಬಂಗಾಳಕ್ಕೆ ಹೊರಟಿದ್ದ ಹೌರ-ಜಬ್ಬಲ್‌ಪುರ್‌ ಶಕ್ತಿಪುಂಜ್‌ ಎಕ್ಸ್‌ಪ್ರೆಸ್‌ ರೈಲು ಶುಕ್ರವಾರ ಸಂಜೆ 6.30ರ ಸುಮಾರಿಗೆ ಪಾಲಾಮು ರಕ್ಷಿತಾರಣ್ಯದ ದಟ್ಟ ಕಾನನ ಪ್ರವೇಶ ಮಾಡಿತ್ತು.
ವಿಜಯಪುರ: 125 ಗ್ರಾಂ ಚಿನ್ನಾಭರಣ, ₹1 ಲಕ್ಷ ನಗದು ಜೊತೆಗೆ ಕಾರನ್ನೂ ಹೊತ್ತೊಯ್ದ ಕಳ್ಳರು!
ಸುಮಾರು 70 ಕಿ.ಲೋ ಮೀಟರ್‌ ವೇಗದಲ್ಲಿ ರೈಲು ಸಂಚರಸುತ್ತಿದ್ದ ವೇಳೆ ಲೋಕೋ ಪೈಲಟ್‌ಗಳಿಗೆ ದೂರದಲ್ಲಿಆನೆಗಳ ಹಿಂಡು ಹಳಿ ದಾಟುತ್ತಿರುವ ದೃಶ್ಯ ಕಂಡು ಬಂದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಚಾಲಕ ಎಕೆ ವಿದ್ಯಾರ್ಥಿ, ರೈಲಿನ ತುರ್ತು ಬ್ರೇಕ್‌ ಒತ್ತಿದ್ದರು. ಸುಮಾರು 500 ಮೀಟರ್‌ ಚಲಿಸಿದ ರೈಲು ಆನೆಗಳು ಹಳಿ ದಾಟುತ್ತಿದ್ದ ಪ್ರದೇಶದಿಂದ ಅನತಿ ದೂರದಲ್ಲಿಬಂದು ನಿಂತುಕೊಂಡಿತು. ಪೈಲಟ್‌ಗಳ ಸಮಯ ಪ್ರಜ್ಞೆಯಿಂದ 12 ಆನೆಗಳು ಪ್ರಾಣಾಪಾಯದಿಂದ ಪಾರಾಗಿವೆ.

1 ಲಕ್ಷ 12 ಸಾವಿರ ಚದರ ಕಿ.ಲೋ ಮೀಟರ್‌ ವಿಸ್ತೀರ್ಣದ ಅಭಯಾರಣ್ಯದಲ್ಲಿ11 ಕಿ.ಲೋ ಮೀಟರ್‌ ಡಬಲ್‌ ಲೈನ್‌ ರೈಲ್ವೆ ಲೈನ್‌ ಹಾದು ಹೋಗಿದೆ. ವನ್ಯ ಜೀವಿಗಳ ಸಂಚಾರಕ್ಕೆ ಯಾವುದೇ ಕಾರಿಡಾರ್‌ ವ್ಯವಸ್ಥೆ ಮಾಡದ ಕಾರಣ ಪ್ರಾಣಿಗಳು ಹಳಿ ದಾಟಿಕೊಂಡೇ ಸಂಚಾರ ಮಾಡುತ್ತಿವೆ. ಹಲವು ಬಾರಿ ರೈಲಿಗೆ ಸಿಲುಕಿ ಅನೇಕ ಮೂಕ ಪ್ರಾಣಿಕಗಳು ಜೀವ ಕಳೆದುಕೊಂಡಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ