ಆ್ಯಪ್ನಗರ

ಬದುಕಿದ್ದಾಗ ಕೊರೊನಾ ನೆಗೆಟಿವ್, ಸತ್ತಾಗ ಪಾಸಿಟಿವ್: ಮೂಕ ವಿಸ್ಮಿತರಾದ ವೈದ್ಯರು!

ಬದುಕಿದ್ದಾಗ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಪಡೆದಿದ್ದ ವೃದ್ಧೆಯೋರ್ವಳು ಕೇವಲ ಮೂರು ದಿನದಲ್ಲಿ ಸಾವನ್ನಪ್ಪಿದ್ದು, ಆಶ್ವರ್ಯವೆಂಬಂತೆ ಸತ್ತ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಆಕೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಫಲಿತಾಂಶ ಬಂದಿದೆ.

Vijaya Karnataka Web 6 Apr 2020, 1:47 pm
ಪುಣೆ: ದೇಶದಲ್ಲಿ ಕೊರೊನಾ ವೈರಸ್ ಸಂಬಂಧಿತ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವು ಸಾವಿನ ಪ್ರಕರಣಗಳು ವೈದ್ಯರನ್ನು ಚಿಂತೆಗೀಡು ಮಾಡುವಂತೆ ಮಾಡಿವೆ.
Vijaya Karnataka Web coronavirus
ಸಂಗ್ರಹ ಚಿತ್ರ


ಅದರಂತೆ ಮಹಾರಾಷ್ಟ್ರದ ಪುಣೆಯಲ್ಲಿ 60 ವರ್ಷದ ವೃದ್ಧೆಯೋರ್ವಳು ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದು, ಆಶ್ವರ್ಯಕರ ಸಂಗತಿ ಎಂದರೆ ಬದುಕಿದ್ದಾಗ ಆಕೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿತ್ತು.

ಹೌದು, ಕಳೆದ ಏ.1ರಂದು ನಗರದ ನಾಯ್ಡು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯನ್ನು ಕೊರೊನಾ ವೈರಸ್ ಪರೀಕ್ಷೆಗೆ ಗುರಿಪಡಿಸಿದಾಗ ನೆಗೆಟಿವ್ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

6 ನಿಮಿಷ ಅಂತರದಲ್ಲಿ ವೃದ್ಧ ದಂಪತಿಯನ್ನು ಬಲಿ ಪಡೆಯಿತು ಕೊರೊನಾ!

ಆದರೆ ಕೇವಲ ಮೂರು ದಿನಗಳ ಬಳಿಕ ಅಂದರೆ ಏ.4ರಂದು ಮತ್ತೆ ಅನಾರೋಗ್ಯಕ್ಕೆ ತುತ್ತಾದ ವೃದ್ಧೆಯನ್ನು ನಗರದ ಸಸ್ಸೂನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಮೃತಪಟ್ಟರು.

ಮೃತ ವೃದ್ಧೆಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಗುರಿಪಡಿಸಿದಾಗ ಕೊರೊನಾ ವೈರಸ್ ಪಾಸಿಟವ್ ಫಲಿತಾಂಶ ಬಂದಿದೆ. ಬದುಕಿದ್ದಾಗ ವೈರಸ್ ನೆಗೆಟಿವ್ ಫಲಿತಾಂಶ ಹಾಗೂ ಸತ್ತ ಬಳಿಕ ವೈರಸ್ ಪಾಸಿಟಿವ್ ಫಲಿತಾಂಶ ಹೇಗೆ ಸಾಧ್ಯ ಎಂದು ವೈದ್ಯರು ಇದೀಗ ತಲೆಕೆಡಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪುಣೆಯ ವೀಭಾಗೀಯ ಆಯುಕ್ತ ದೀಪಕ್ ಮಾಯೈಸೇಕರ್, ಇದೊಂದು ಅಪರೂಪದ ಪ್ರಕರಣವಾಗಿದ್ದು, ವೈದ್ಯ ಸಿಬ್ಬಂದಿ ಇದರ ಅಧ್ಯಯನ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವೈದ್ಯೆ ನೀಲಂ ಸಿಂಗ್, ಕೊರೊನಾ ವೈರಸ್ ಭಿನ್ನ ವ್ಯಕ್ತಿಗಳಲ್ಲಿ ಭಿನ್ನವಾಗಿ ವರ್ತಿಸುತ್ತದೆ. ಅದರಂತೆ ವೃದ್ಧೆ ಬದುಕಿದ್ದಾಗ ಪತ್ತೆಯಾಗದ ವೈರಸ್ ಆಕೆ ಸತ್ತ ಬಳಿಕ ಪತ್ತೆಯಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಯುವ ಸೋಂಕಿತರಿಗೆ ವೆಂಟಿಲೇಟರ್ ಕೊಟ್ಟು ಕೊರೊನಾದಿಂದ ಪ್ರಾಣ ಬಿಟ್ಟ 90ರ ವೃದ್ಧೆ!

ಒಟ್ಟಿನಲ್ಲಿ ದೇಶದಲ್ಲೇ ಅಪರೂಪ ಎನ್ನಬಹುದಾದ ಈ ಪಕ್ರರಣ ವೈದ್ಯ ಲೋಕವನ್ನು ಅಚ್ಚರಿಗೆ ದೂಡಿದ್ದು, ಈ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ