ಚಂಡಿಗಢ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸಣ್ಣ ಮತ್ತು ಮಧ್ಯಮ ವರ್ಗದ ( (5 ಎಕರೆ ವರೆಗೆ) ರೈತರಿಗೆ ರೂ.2 ಲಕ್ಷದ ವರೆಗೆ ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಿದ್ದಾರೆ. ಸಾಲದ ಮೊತ್ತದ ಲೆಕ್ಕಕ್ಕೆ ಹೊರತಾಗಿ ಇತರೆ ಎಲ್ಲ ಮಧ್ಯಮ ವರ್ಗದ ರೈತರಿಗೆ ರೂ.2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ರೈತರ ಸಾಲಮನ್ನಾ ಮಾಡುತ್ತಿರುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ ಅವರು ತಮ್ಮ ಈ ನಿರ್ಧಾರದಿಂದ ಪಂಜಾಬ್ನ 5 ಎಕರೆ ಜಮೀನುಳ್ಳ 8.75 ಲಕ್ಷ ರೈತರು ಸೇರಿದಂತೆ 10.25 ಲಕ್ಷ ರೈತರಿಗೆ ಲಾಭವಾಗಲಿದೆ ಎಂದಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರగಳು ಘೋಷಿಸಿದ ಪರಿಹಾರ ಮೊತ್ತಕ್ಕಿಂತలూ ಇದು ದುಪ್ಪಟ್ಟು ಎಂದಿದ್ದಾರೆ ಅಮರಿಂದರ್. ತಮ್ಮ ಈ ನಿರ್ಧಾರವು ಖ್ಯಾತ ಆರ್ಥಶಾಸ್ತ್ರಜ್ಞ ಟಿ.ಹಕ್ ಅವರ 'ಎಕ್ಸ್ಪರ್ಟ್ ಗ್ರೂಪ್'ನ ಮಧ್ಯಂತರ ವರದಿಯನ್ನು ಆಧರಿಸಿದೆ ಎಂದಿದ್ದಾರೆ ಅಮರಿಂದರ್.
ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರೂ.3ಲಕ್ಷಕ್ಕೆ ಬದಲಾಗಿ ರೂ.5 ಲಕ್ಷ ಪರಿಹಾರ ಧನ ನೀಡುವುದಾಗಿಯೂ ಘೋಷಿಸಿದ್ದಾರೆ. ರೈತರ ಸಾಲಮನ್ನಾ ಹಣವನ್ನು ಸಾಂಸ್ಥಿಕ ಸಂಪನ್ಮೂಲಗಳಿಂದ ಭರಿಸಲಾಗುತ್ತದೆ ಎಂದಿದ್ದಾರೆ.
ಪಂಜಾಬ್ನಲ್ಲಿ 18.5 ಲಕ್ಷ ಮಂದಿ ರೈತ ಕುಟುಂಬಗಳಿದ್ದು, ಅವರಲ್ಲಿ ಶೇ.65ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು. ಇವರಲ್ಲಿ ಶೇ.70ರಷ್ಟು ಮಂದಿಗೆ ಸಾಂಸ್ಥಿಕ ಸಂಪನ್ಮೂಲಗಳಿಂದ ಆರ್ಥಿಕ ಸಹಕಾರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ಇನ್ನಷ್ಟು ಯೋಜನೆಗಳನ್ನು ಘೋಷಿಸುವುದಾಗಿ ಹೇಳಿದ್ದಾರೆ ಅಮರಿಂದರ್ ಸಿಂಗ್.
Punjab Chief Minister Captain Amarinder Singh on Monday announced total waiver of entire crop loans up to Rs 2 lakh for small and marginal farmers (up to 5 acres), and a flat Rs 2 lakh relief for all other marginal farmers, irrespective of their loan amount.
ರೈತರ ಸಾಲಮನ್ನಾ ಮಾಡುತ್ತಿರುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ ಅವರು ತಮ್ಮ ಈ ನಿರ್ಧಾರದಿಂದ ಪಂಜಾಬ್ನ 5 ಎಕರೆ ಜಮೀನುಳ್ಳ 8.75 ಲಕ್ಷ ರೈತರು ಸೇರಿದಂತೆ 10.25 ಲಕ್ಷ ರೈತರಿಗೆ ಲಾಭವಾಗಲಿದೆ ಎಂದಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರగಳು ಘೋಷಿಸಿದ ಪರಿಹಾರ ಮೊತ್ತಕ್ಕಿಂತలూ ಇದು ದುಪ್ಪಟ್ಟು ಎಂದಿದ್ದಾರೆ ಅಮರಿಂದರ್. ತಮ್ಮ ಈ ನಿರ್ಧಾರವು ಖ್ಯಾತ ಆರ್ಥಶಾಸ್ತ್ರಜ್ಞ ಟಿ.ಹಕ್ ಅವರ 'ಎಕ್ಸ್ಪರ್ಟ್ ಗ್ರೂಪ್'ನ ಮಧ್ಯಂತರ ವರದಿಯನ್ನು ಆಧರಿಸಿದೆ ಎಂದಿದ್ದಾರೆ ಅಮರಿಂದರ್.
ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರೂ.3ಲಕ್ಷಕ್ಕೆ ಬದಲಾಗಿ ರೂ.5 ಲಕ್ಷ ಪರಿಹಾರ ಧನ ನೀಡುವುದಾಗಿಯೂ ಘೋಷಿಸಿದ್ದಾರೆ. ರೈತರ ಸಾಲಮನ್ನಾ ಹಣವನ್ನು ಸಾಂಸ್ಥಿಕ ಸಂಪನ್ಮೂಲಗಳಿಂದ ಭರಿಸಲಾಗುತ್ತದೆ ಎಂದಿದ್ದಾರೆ.
ಪಂಜಾಬ್ನಲ್ಲಿ 18.5 ಲಕ್ಷ ಮಂದಿ ರೈತ ಕುಟುಂಬಗಳಿದ್ದು, ಅವರಲ್ಲಿ ಶೇ.65ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು. ಇವರಲ್ಲಿ ಶೇ.70ರಷ್ಟು ಮಂದಿಗೆ ಸಾಂಸ್ಥಿಕ ಸಂಪನ್ಮೂಲಗಳಿಂದ ಆರ್ಥಿಕ ಸಹಕಾರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ಇನ್ನಷ್ಟು ಯೋಜನೆಗಳನ್ನು ಘೋಷಿಸುವುದಾಗಿ ಹೇಳಿದ್ದಾರೆ ಅಮರಿಂದರ್ ಸಿಂಗ್.
Punjab Chief Minister Captain Amarinder Singh on Monday announced total waiver of entire crop loans up to Rs 2 lakh for small and marginal farmers (up to 5 acres), and a flat Rs 2 lakh relief for all other marginal farmers, irrespective of their loan amount.