ಆ್ಯಪ್ನಗರ

Punjab Election Results 2022: ಫಲಿತಾಂಶಕ್ಕೆ ಮುನ್ನವೇ ಎಎಪಿ ಸಿಎಂ ಅಭ್ಯರ್ಥಿ ಮನೆಯಲ್ಲಿ ಜಿಲೇಬಿ ಕಾರ್ಖಾನೆ!

ಪಂಜಾಬ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಮೊದಲ ಹಂತಗಳಲ್ಲಿ ಎಎಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಮೂಲಕ ಅಧಿಕಾರ ಹಿಡಿಯುವ ಸೂಚನೆ ನೀಡಿದೆ. ಮತ ಎಣಿಕೆ ಆರಂಭಕ್ಕು ಮುನ್ನವೇ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮನ್ ಅವರ ಮನೆಯಲ್ಲಿ ಭರ್ಜರಿ ಜಿಲೇಬಿ ತಯಾರಿಕೆ ನಡೆದಿದೆ.

Vijaya Karnataka Web 10 Mar 2022, 9:56 am
ಚಂಡೀಗಡ: ಪಂಜಾಬ್‌ನಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಅವರ ಮನೆಯಲ್ಲಿ ಈಗಾಗಲೇ ಸಂಭ್ರಮಾಚರಣೆ ಶುರುವಾಗಿದೆ. ಎಎಪಿ ಸುಲಭವಾಗಿ ಬಹುಮತ ಪಡೆದು ಅಧಿಕಾರಕ್ಕೆ ಏರಲಿದೆ ಎಂದು ಎಲ್ಲ ಎಕ್ಸಿಟ್‌ ಪೋಲ್‌ಗಳೂ ಭವಿಷ್ಯ ನುಡಿದಿವೆ. ಗುರುವಾರ ಆರಂಭವಾದ ಮತ ಎಣಿಕೆಯ ಸುತ್ತುಗಳಲ್ಲಿ ಎಎಪಿ ಗಣನೀಯ ಮುನ್ನಡೆ ಸಾಧಿಸಿರುವುದು ಎಕ್ಸಿಟ್ ಪೋಲ್‌ಗಳನ್ನು ನಿಜ ಮಾಡುವ ಸೂಚನೆ ನೀಡಿವೆ.
Vijaya Karnataka Web punjab assembly elections results 2022 jilebi coocked in aap cm candidate bhagwant manns house
Punjab Election Results 2022: ಫಲಿತಾಂಶಕ್ಕೆ ಮುನ್ನವೇ ಎಎಪಿ ಸಿಎಂ ಅಭ್ಯರ್ಥಿ ಮನೆಯಲ್ಲಿ ಜಿಲೇಬಿ ಕಾರ್ಖಾನೆ!


ಮತ ಎಣಿಕೆ ಆರಂಭಕ್ಕೆ ಮುನ್ನವೇ ಭಗವಂತ್ ಮನ್ ಅವರ ಮನೆಯಲ್ಲಿ ಜಿಲೇಬಿ ತಯಾರಿಕೆ ನಡೆದಿದೆ. ಬೃಹತ್ ಪಾತ್ರೆಗಳಲ್ಲಿ ಜಿಲೇಬಿಗಳನ್ನು ತಯಾರಿಸಿ ರಾಶಿ ರಾಶಿ ಪೇರಿಸಲಾಗುತ್ತಿದೆ. ಬೆಳ್ಳಂಬೆಳಿಗ್ಗೆ ಸಂಗ್ರೂರ್‌ನಲ್ಲಿನ ಗುರುದ್ವಾರ ಗುರುಸಾಗರ್ ಮಸ್ತೌನಾ ಸಾಹಿಬ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮನ್ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಎಎಪಿ ಗೆಲುವಿನ ನಿರೀಕ್ಷೆಯೊಂದಿಗೆ, ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಭಗವಂತ್ ಮನ್ ಅವರ ಮನೆಯಲ್ಲಿ ಭರ್ಜರಿ ಸಿಹಿ ತಿಂಡಿಗಳ ತಯಾರಿ ನಡೆಯುತ್ತಿದೆ. ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸಂಗ್ರೂರ್‌ನಲ್ಲಿ ಜಿಲೇಬಿ ವಿತರಣೆ ಜೋರಾಗಿ ನಡೆಯಲಿದೆ.


"ಸಿಎಂ ಎಂದರೆ ಕಾಮನ್ ಮ್ಯಾನ್" ಎಂದಿರುವ ಮನ್, ತಮಗೆ ಸಿಎಂ ಸ್ಥಾನ ದೊರೆತರೂ ಸಾಮಾನ್ಯ ವ್ಯಕ್ತಿಯಂತೆಯೇ ಇರುವುದಾಗಿ ಹೇಳಿದ್ದಾರೆ. ಸಿಎಂ ಪದವಿ ತಮ್ಮಲ್ಲಿ ಅಹಂಕಾರ ಮೂಡಿಸುವುದಿಲ್ಲ. ಕೀರ್ತಿ ಎನ್ನುವುದು ಯಾವಾಗಲೂ ತಮ್ಮ ಜೀವನದ ಭಾಗವಾಗಿದೆ ಎಂದು ಹೇಳಿಕೊಂಡಿದ್ದಾರೆ.
elections

ಈ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಅಧಿಕಾರಕ್ಕೆ ಬಂದರೆ ಆಮ್ ಆದ್ಮಿ ಪಕ್ಷ ಇತಿಹಾಸ ಬರೆಯಲಿದೆ. ಪಂಜಾಬ್‌ನಲ್ಲಿ 2017ರ ಚುನಾವಣೆಯಲ್ಲಷ್ಟೇ ಪದಾರ್ಪಣೆ ಮಾಡಿದ್ದ ಎಎಪಿ, ಮೊದಲ ಚುನಾವಣೆಯಲ್ಲಿಯೇ 20 ಸೀಟುಗಳಲ್ಲಿ ಗೆದ್ದು ಗಮನ ಸೆಳೆದಿತ್ತು. ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಇದುವರೆಗೂ ಅಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮನ್ ಅವರನ್ನು ಜನರಿಂದಲೇ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ