ಆ್ಯಪ್ನಗರ

ಪಂಜಾಬ್‌ ಸಿಎಂ ಪತ್ನಿ ಅಕೌಂಟ್‌ಗೆ ಆನ್‌ಲೈನ್‌ ಚೋರರ ಕನ್ನ!

ಇತ್ತೀಚೆಗೆ ಪಟಿಯಾಲ ರಾಜಮನೆತನದ ಗಣ್ಯ ಮಹಿಳೆ, ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರ ಪತ್ನಿಯೂ ಆಗಿರುವ ಹಾಲಿ ಸಂಸದೆ ಪ್ರಣೀತ್‌ ಕೌರ್‌ ಆನ್‌ಲೈನ್‌ ವಂಚಕರ ಮರೆಮೋಸಕ್ಕೆ ಒಳಗಾಗಿ 23 ಲಕ್ಷ ರೂ. ಕಳೆದುಕೊಂಡು ಸುದ್ದಿಯಾಗಿದ್ದಾರೆ.

PTI 8 Aug 2019, 5:00 am
ಚಂಡೀಗಢ: ಆನ್‌ಲೈನ್‌ ವಂಚಕರ ಬಗ್ಗೆ ಎಷ್ಟೆಲ್ಲ ಎಚ್ಚರಿಕೆ ನೀಡುತ್ತಿದ್ದರೂ ಅವರು ಪ್ರಯೋಗಿಸುವ ಹೊಸ ಹೊಸ ದಾಳಗಳಿಗೆ ಬಲಿ ಬೀಳುವವರ ಸಂಖ್ಯೆ ಏರುತ್ತಲೇ ಇದೆ. ಇತ್ತೀಚೆಗೆ ಪಟಿಯಾಲ ರಾಜಮನೆತನದ ಗಣ್ಯ ಮಹಿಳೆ, ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರ ಪತ್ನಿಯೂ ಆಗಿರುವ ಹಾಲಿ ಸಂಸದೆ ಪ್ರಣೀತ್‌ ಕೌರ್‌ ಆನ್‌ಲೈನ್‌ ವಂಚಕರ ಮರೆಮೋಸಕ್ಕೆ ಒಳಗಾಗಿ 23 ಲಕ್ಷ ರೂ. ಕಳೆದುಕೊಂಡು ಸುದ್ದಿಯಾಗಿದ್ದಾರೆ.
Vijaya Karnataka Web kaur


ಕೌರ್‌ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌ ಎಂದು ಪರಿಚಯಿಸಿಕೊಂಡು ವಂಚನೆಗೆ ಗಾಳ ಹಾಕಿದ್ದ. ನಿಮ್ಮ ಸಂಬಳದ ಮೊತ್ತ ಜಮೆ ಮಾಡಬೇಕಿದ್ದು, ಅದಕ್ಕೆ ಅಕೌಂಟ್‌ ನಂಬರ್‌, ಎಟಿಎಂ ಪಿನ್‌, ಸಿವಿಸಿ ನಂಬರ್‌ ಮತ್ತು ಒಟಿಪಿ ತಿಳಿಸುವಂತೆ ಕೇಳಿದ್ದ. ಆತ ಹೇಳಿದ್ದನ್ನು ಮುಗ್ಧವಾಗಿ ನಂಬಿದ ಕೌರ್‌, ಎಲ್ಲ ಮಾಹಿತಿ ರವಾನಿಸಿದ್ದರು. ಅದಾಗಿ ಮರು ಕ್ಷಣವೇ ಅವರ ಅಕೌಂಟ್‌ನಿಂದ 23 ಲಕ್ಷ ರೂ. ಮಂಗಮಾಯವಾಗಿತ್ತು. ಆಗ ಎಚ್ಚತ್ತ ಕೌರ್‌ ಪೊಲೀಸ್‌ ವರಿಷ್ಠರಿಗೆ ದೂರು ನೀಡಿದ್ದರು.

ತ್ವರಿತ ಕಾರ್ಯಾಚರಣೆಗಿಳಿದ ಪೊಲೀಸರು, ಜಾರ್ಖಂಡ್‌ನ ರಾಂಚಿಯ ಜಂತಾರ ಬಡಾವಣೆಯಿಂದ ವಂಚಕ ಅತಾಉಲ್ಲಾ ಅನ್ಸಾರಿ (30) ಎಂಬಾತನನ್ನು ಬಂಧಿಸಿ, ಅಷ್ಟೂ ಹಣ ವಸೂಲಿ ಮಾಡಿದರು. ವಂಚಕ ಅನ್ಸಾರಿಗೆ ತಾನು ಕನ್ನ ಹಾಕಿದ ಖಾತೆಯ ಒಡತಿಯ ಹಿನ್ನೆಲೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ