ಆ್ಯಪ್ನಗರ

ಎರಡು ಕೋಟಿ ರೂ. ಬಂಪರ್‌ ಬಹುಮಾನ ಗೆದ್ದ ಪೇದೆ

ಹೋಶಿಯಾರ್‌ಪುರದ ಸದರ್‌ ಪೊಲೀಸ್‌ ಠಾಣೆಯ ಪೇದೆ ಅಶೋಕ್‌ ಕುಮಾರ್‌ ಬಹುಮಾನ ಗೆದ್ದ ಅದೃಷ್ಟಶಾಲಿ.

Vijaya Karnataka 21 Jan 2019, 9:36 am
ಹೋಶಿಯಾರ್‌ಪುರ: ಪಂಜಾಬ್‌ ರಾಜ್ಯ ಲಕ್ಕಿ ಬಂಪರ್‌ ಡ್ರಾನಲ್ಲಿ ಪೊಲೀಸ್‌ ಪೇದೆಯೊಬ್ಬರು ಬರೋಬ್ಬರಿ ಎರಡು ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.
Vijaya Karnataka Web POLICE


ಹೋಶಿಯಾರ್‌ಪುರದ ಸದರ್‌ ಪೊಲೀಸ್‌ ಠಾಣೆಯ ಪೇದೆ ಅಶೋಕ್‌ ಕುಮಾರ್‌ ಬಹುಮಾನ ಗೆದ್ದ ಅದೃಷ್ಟಶಾಲಿ.

''ಲಾಟರಿ ಟಿಕೆಟ್‌ ಏಜೆಂಟ್‌ ಒಬ್ಬರು ಠಾಣೆಗೆ ಬಂದಿದ್ದರು. ಈ ವೇಳೆ ನಾನು ಲಾಟರಿ ಖರೀದಿಸಿದ್ದೆ. ನಿಮಗೆ ಎರಡು ಕೋಟಿ ರೂ. ಬಹುಮಾನ ಬಂದಿದೆ ಎಂದು ಬುಧವಾರ ಸಂಜೆ ನನ್ನ ಮೊಬೈಲ್‌ಗೆ ಮೆಸೇಜ್‌ ಬಂತು. ಆ ಸಮಯದಲ್ಲಿ ನಾನು ಮನೆಯಲ್ಲಿದ್ದೆ. ಲಾಟರಿ ಟಿಕೆಟ್‌ ಅನ್ನು ಠಾಣೆಯಲ್ಲಿ ಇಟ್ಟಿದ್ದೆ. ಓಡಿಬಂದು ನೋಡಿದಾಗ, ಬಹುಮಾನ ಬಂದ ಲಾಟರಿ ನಂಬರ್‌ ಮತ್ತು ನಾನು ಖರೀದಿ ಮಾಡಿದ ಲಾಟರಿ ನಂಬರ್‌ ತಾಳೆಯಾಯಿತು. ಇದು ನಿಜಕ್ಕೂ ನನ್ನಲ್ಲಿ ಅಚ್ಚರಿ ಮತ್ತು ಸಂಭ್ರಮ ಉಂಟುಮಾಡಿತು,'' ಎಂದು ಅಶೋಕ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಅಶೋಕ್‌, ಒಂಬತ್ತು ವರ್ಷಗಳ ಹಿಂದೆ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ