ಆ್ಯಪ್ನಗರ

ಕೊರೊನಾ ಸೋಂಕಿತರಿಗೆ ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆ ಆರಂಭಿಸಿದ ಪಂಜಾಬ್‌!

ಭಾರತೀಯ ವೈದ್ಯರು ಕೊರೊನಾ ವೈರಸ್‌ಗೆ ಸುಧಾರಿತ ಚಿಕಿತ್ಸೆ ಆರಂಭಿಸಿದ್ದಾರೆ. ಕೊರೊನಾ ವೈರಸ್‌ ಸೋಂಕಿತ ರೋಗಿಯನ್ನು ಗುಣಪಡಿಸಲು ಪ್ಲಾಸ್ಮಾ ಚಿಕಿತ್ಸೆ ಆರಂಭಿಸಲು ದೇಶದಲ್ಲೇ ಮೊದಲ ಬಾರಿಗೆ ಪಂಜಾಬ್‌ ಸರಕಾರ ಒಪ್ಪಿಗೆ ನೀಡಿದೆ.

Vijaya Karnataka Web 18 Apr 2020, 1:47 pm
ನವದೆಹಲಿ: ಕೊರೊನಾ ವೈರಸ್‌ ಇದುವರೆಗೆ ನಿರ್ಧಿಷ್ಟ ಚಿಕಿತ್ಸಾ ವಿಧಾನ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿಯೇ, ಈ ಸೋಂಕು ವಿಶ್ವಾದ್ಯಂತ ಮರಣಮೃದಂಗ ಭಾರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ವೈದ್ಯರು ಸುಧಾರಿತ ಚಿಕಿತ್ಸೆ ನೀಡುವುದನ್ನು ಆರಂಭಿಸಿದ್ದಾರೆ.
Vijaya Karnataka Web blood plasma


ಕೊರೊನಾ ವೈರಸ್‌ ಸೋಂಕಿತ ರೋಗಿಯನ್ನು ಗುಣಪಡಿಸಲು ಪ್ಲಾಸ್ಮಾ ಚಿಕಿತ್ಸೆ ಆರಂಭಿಸಲು ದೇಶದಲ್ಲೇ ಮೊದಲ ಬಾರಿಗೆ ಪಂಜಾಬ್‌ ಸರಕಾರ ಒಪ್ಪಿಗೆ ನೀಡಿದೆ. ಪಂಜಾಬ್ನ ಲೂದಿಯಾನದ ಖಾಸಗಿ ಆಸ್ಪತ್ರೆ ಒಂದರಲ್ಲಿ ಪ್ಲಾಸ್ಮಾ ಚಿಕಿತ್ಸೆಯೊಂದಿಗೆ ತನ್ನ ಮೊದಲ ಪ್ರಯೋಗವನ್ನು ಪ್ರಾರಂಭಿಸಿದೆ. ಲುಧಿಯಾನದ ಖಾಸಗಿ ಆಸ್ಪತ್ರೆಯ ವೈದ್ಯರು ವೈರಸ್ ಸೋಂಕಿಗೆ ಒಳಗಾದ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆಯನ್ನು ನಡೆಸಲಿದ್ದಾರೆ.

ಪಂಜಾಬ್‌ ರಾಜ್ಯವ್ಯಾಪಿ ವೈರಸ್ ಪ್ರಕರಣಗಳ ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿರುವ ಸಿಧು ಅವರು ಟ್ವೀಟ್‌ ಮಾಡಿದ್ದಾರೆ. ಮೊಹಾಲಿಯಲ್ಲಿ ಒಬ್ಬ ಯುವಕ ಸಂಪೂರ್ಣವಾಗಿ ಗುಣವಾಗಿದ್ದು, ಆತನನ್ನು ಲೂಧಿಯಾನದ ಖಾಸಗಿ ಆಸ್ಪತ್ರೆಗೆ ರವಾನಿಸುತ್ತಿದೆ. ಈ ಯುವಕನ ಪ್ಲಾಸ್ಮಾವವನ್ನು ಬಳಸಿಕೊಂಡು ಇತರೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಹೊಸ ಪ್ರಯತ್ನ ಆರಂಭಿಸಲಾಗಿದೆ.

ಪ್ರವಾಹ, ಕೊರೊನಾದಿಂದ ತೀವ್ರ ಸಂಕಷ್ಟದಲ್ಲಿ ರೈತ, ನೇಗಿಲು ಹಿಡಿಯಲು ಅನ್ನದಾತ ಹಿಂದೇಟು

ವ್ಯಕ್ತಿಯು ಕೊರೊನಾ ಪಾಸಿಟಿವ್ ಆಗಿದ್ದರೆ ಮಾತ್ರ ಚಿಕಿತ್ಸೆಯು ಕಾರ್ಯನಿರ್ವಹಿಸುತ್ತದೆ. ಐಜಿಜಿ ಎನ್ನುವುದು ಇಮ್ಯುನೊಗ್ಲೋಬಿಲಿನ್‌ಗಳ ಒಂದು ವರ್ಗವಾಗಿದ್ದು, ಇದು ಮಾನವನ ದೇಹದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಪ್ರತಿಕಾಯವಾಗಿದೆ. ಇದು ದೇಹಕ್ಕೆ ಪ್ರವೇಶಿಸಿದ ರೋಗಕಾರಕ ಅಣುಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ.

ಪ್ಲಾಸ್ಮಾ ಥೆರಪಿಯಲ್ಲಿ, ಸೋಂಕಿನಿಂದ ಗುಣಮುಖರಾದ ರೋಗಿಗಳಿಂದ ರಕ್ತದ ದ್ರವ ಭಾಗವನ್ನು ಸಂಗ್ರಹಿಸಲಾಗುತ್ತದೆ ಏಕೆಂದರೆ ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಪ್ರತಿಕಾಯಗಳನ್ನು ಹೊಂದಿರುತ್ತದೆ ಎನ್ನಲಾಗಿದೆ. ಈ ಪ್ಲಾಸ್ಮಾವನ್ನು ಸೋಂಕಿತ ವ್ಯಕ್ತಿಯ ಮೇಲೆ ವ್ಯಕ್ತಿಗೆ ನೀಡಲಾಗುತ್ತದೆ.

ಮನರಂಜನೆಗೆ ಕೊರೊನಾ ಕೊಡಲಿಪೆಟ್ಟು: ಸೆಟ್‌ಟಾಪ್‌ ಬಾಕ್ಸ್‌, ಕೇಬಲ್‌ ವಯರ್‌ ಪೂರೈಕೆ ಸ್ಥಗಿತ

ಈ ಹಿಂದೆ ಕಾಣಿಸಿಕೊಂಡಿದ್ದ ಎಚ್‌1ಎನ್‌1, ಸಾರ್ಸ್‌, ಮೆರ್ಸ್‌ ಮೊದಲಾದ ಸೋಂಕುಗಳಿಗೂ ಕೂಡ ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಯೋಗ ಮಾಡಲಾಗಿತ್ತು.

ಪ್ಲಾಸ್ಮಾ ಚಿಕಿತ್ಸೆ ಎಂದರೇನು? ಅದನ್ನು ಹೇಗೆ ಮಾಡಲಾಗುತ್ತದೆ?
ಒಬ್ಬ ವ್ಯಕ್ತಿಯು ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದಾಗ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿಕಾಯವನ್ನು ಅಭಿವೃದ್ಧಿಪಡಿಸುತ್ತದೆ. ಈ ಪ್ರತಿಕಾಯಗಳು ಆ ನಿರ್ದಿಷ್ಟ ಸೂಕ್ಷ್ಮಾಣುಜೀವಿಗಳ ವಿರುದ್ಧ ಆಜೀವ ರೋಗನಿರೋಧಕ ಶಕ್ತಿ ಅಥವಾ ಅಲ್ಪಾವಧಿಯ ರಕ್ಷಣೆ ನೀಡುತ್ತದೆ. ಕೊರೊನಾ ವೈರಸ್‌ನಿಂದ ಚೇತರಿಸಿಕೊಳ್ಳುವ ರೋಗಿಗಳಲ್ಲಿಯೂ ಆ ವೈರಸ್ ವಿರುದ್ಧ ಹೋಓರಾಡಬಲ್ಲ ಪ್ರತಿಕಾಯಗಳನ್ನು ಅಭಿವೃದ್ಧಿಯಾಗುತ್ತದೆ. ಪ್ಲಾಸ್ಮಾದಲ್ಲಿ ಇರುವ ಈ ಪ್ರತಿಕಾಯಗಳನ್ನೇ ಚಿಕಿತ್ಸೆಗೆ ಬಳಸಲಾಗುತ್ತದೆ.

ಚೇತರಿಸಿಕೊಂಡ ರೋಗಿಯಿಂದ ಪ್ಲಾಸ್ಮಾ ಬಳಸಿ ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಬಹುದು?
ಒಬ್ಬ ದಾನಿಗಳಿಂದ ನಾವು ಸಂಗ್ರಹಿಸುವ ಪ್ಲಾಸ್ಮಾದ ಪ್ರಮಾಣವನ್ನು ಅವಲಂಬಿಸಿದೆ. ಒಬ್ಬರಿಂದ ಪಡೆಯುವ ಪ್ಲಾಸ್ಮಾದಿಂದ, ಕನಿಷ್ಠ ಇಬ್ಬರು ಮತ್ತು ಗರಿಷ್ಠ ಐದು ರೋಗಿಗಳನ್ನು ಉಳಿಸಬಹುದು. ಒಬ್ಬ ರೋಗಿಯನ್ನು ಗುಣಪಡಿಸಲು ಸುಮಾರು 200-250 ಮಿಲಿ ಲೀಟರ್‌ ಅಗತ್ಯವಿದೆ. ಅಂತಹ ಸಂದರ್ಭಗಳಲ್ಲಿ ಚೇತರಿಕೆ ವೇಗವಾಗಿರುತ್ತದೆ. ಅಧ್ಯಯನದ ಆಧಾರದ ಮೇಲೆ, ಯುಎಸ್ ಮತ್ತು ಚೀನಾದಲ್ಲಿ ಕಂಡುಬರುವಂತೆ, ಚೇತರಿಕೆಯ ಅವಧಿ ಮೂರರಿಂದ ಏಳು ದಿನಗಳಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ