ಕಾಂಗ್ರೆಸ್ನಿಂದ ನವಜೋತ್ ಸಿಂಗ್ ಸಿಧು ಉಚ್ಚಾಟನೆಗೆ ಹೆಚ್ಚಿದ ಒತ್ತಡ
ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ನಾಲ್ವರು ಸಚಿವರು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ. ಈ ಮೂಲಕ ಸಿಧು ಉಚ್ಚಾಟನೆಗೆ ದಿನದಿಂದ ದಿನಕ್ಕೆ ಒತ್ತಡ ಜಾಸ್ತಿಯಾಗುತ್ತಿದೆ.
Agencies 13 May 2021, 5:50 pm
ಹೈಲೈಟ್ಸ್:
- ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ನಾಲ್ವರು ಸಚಿವರಿಂದ ಕಾಂಗ್ರೆಸ್ ಹೈಕಮಾಂಡ್ಗೆ ಮನವಿ
- ಈ ಹಿಂದೆಯೂ ಮೂವರು ಸಚಿವರಿಂದ ಸಿಧು ಅಮಾನತಿಗೆ ಮನವಿ
- ಈ ಮೂಲಕ ಸಿಧು ಉಚ್ಚಾಟನೆಗೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ.
ಚಂಡೀಗಢ: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ನಾಲ್ವರು ಸಚಿವರು ಹೈಕಮಾಂಡ್ಗೆ ಮನವಿ ಮಾಡಿದ್ದಾರೆ. ಈ ಹಿಂದೆಯೂ ಮೂವರು ಸಚಿವರು ಮನವಿ ಮಾಡಿದ್ದರು. ಈ ಮೂಲಕ ಸಿಧು ಉಚ್ಚಾಟನೆಗೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಗುರಿಯಾಗಿಸಿ ಸಿಧು ಪದೇ ಪದೇ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಎಎಪಿ ಪ್ರಚೋದನೆ ನೀಡುತ್ತಿರುವ ಸಾಧ್ಯತೆಯೂ ಇದೆ ಎಂದು ಸಚಿವರಾದ ಬಲ್ಬೀರ್ ಸಿಧು, ವಿಜಯ್ ಇಂದರ್ ಸಿಂಗ್ಲಾ, ಭಾರತ್ ಭೂಷಣ್ ಆಶು ಮತ್ತು ಗುರ್ಪ್ರೀತ್ ಸಿಂಗ್ ಕಂಗರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮೂವರು ಸಚಿವರಾದ ಬ್ರಹ್ಮ್ ಮೊಹಿಂದ್ರ, ಸುಂದರ್ ಶ್ಯಾಮ್ ಅರೋರಾ ಮತ್ತು ಸಾಧು ಸಿಂಗ್ ಧರ್ಮ್ಸತ್ ಕೂಡ ಸಿಧು ವಿರುದ್ಧ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿಯ ಮೇಲಿನ ‘ಪ್ರಚೋದನಕಾರಿ ಮತ್ತು ಉದ್ದೇಶಿತ’ ದಾಳಿಗಳು ಕಾಂಗ್ರೆಸ್ನ ‘ವಿಪತ್ತಿಗೆ ಆಹ್ವಾನ’ ಎಂದು ಇವರು ಬಣ್ಣಿಸಿದ್ದಾರೆ.
"ಸಿಧು ಅವರನ್ನು ತಕ್ಷಣವೇ ಪಕ್ಷದಿಂದ ವಜಾ ಮಾಡಬೇಕು. ಪಂಜಾಬ್ ಕಾಂಗ್ರೆಸ್ನಲ್ಲಿನ ಅವರ ನಿರಂತರ ಉಪಸ್ಥಿತಿಯು, ಪಕ್ಷದ ರಾಜ್ಯ ಘಟಕದಲ್ಲಿ ಅವ್ಯವಸ್ಥೆಯನ್ನು ಉಂಟು ಮಾಡುತ್ತಿದೆ. ಮತ್ತು ಚುನಾವಣೆಗೆ ಸಜ್ಜಾಗುತ್ತಿರುವಾಗ ಗಮನವನ್ನು ಬೇರೆಡೆ ಸೆಳೆಯುತ್ತಿದೆ," ಎಂದು ಹೇಳಲಾಗಿದೆ.
ಮುಖ್ಯಮಂತ್ರಿಯ ಮೇಲೆ ಸಿಧು ಅವರ 'ಉದ್ದೇಶಿತ' ದಾಳಿಗಳು ಎಎಪಿ ಅಥವಾ ಬಿಜೆಪಿ ಮುಖಂಡರ ಉತ್ತೇಜನವೂ ಇರಬಹುದು ಎಂದು ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ತಮ್ಮ ಪ್ರಭಾವ ಹೆಚ್ಚಿಸಲು, ಆಡಳಿತ ಪಕ್ಷದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಹೀಗೆ ಮಾಡುತ್ತಿರಬಹುದು ಎಂದು ಅವರುಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಕ್ಯಾ. ಅಮರಿಂದರ್ ಸಿಂಗ್ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಈ ಕಾರಣಕ್ಕೆ ಸಿಧು ಆರಂಭದಲ್ಲಿ ಪಡೆದಿದ್ದ ಸಚಿವ ಸ್ಥಾನವನ್ನೂ ತೊರೆದಿದ್ದರು. ಹೀಗಿದ್ದೂ ಇಬ್ಬರ ನಡುವಿನ ತಿಕ್ಕಾಟ ಮಾತ್ರ ಇನ್ನೂ ನಿಂತಿಲ್ಲ.
ಈ ಹಿಂದೆ ಮೂವರು ಸಚಿವರಾದ ಬ್ರಹ್ಮ್ ಮೊಹಿಂದ್ರ, ಸುಂದರ್ ಶ್ಯಾಮ್ ಅರೋರಾ ಮತ್ತು ಸಾಧು ಸಿಂಗ್ ಧರ್ಮ್ಸತ್ ಕೂಡ ಸಿಧು ವಿರುದ್ಧ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿಯ ಮೇಲಿನ ‘ಪ್ರಚೋದನಕಾರಿ ಮತ್ತು ಉದ್ದೇಶಿತ’ ದಾಳಿಗಳು ಕಾಂಗ್ರೆಸ್ನ ‘ವಿಪತ್ತಿಗೆ ಆಹ್ವಾನ’ ಎಂದು ಇವರು ಬಣ್ಣಿಸಿದ್ದಾರೆ.
"ಸಿಧು ಅವರನ್ನು ತಕ್ಷಣವೇ ಪಕ್ಷದಿಂದ ವಜಾ ಮಾಡಬೇಕು. ಪಂಜಾಬ್ ಕಾಂಗ್ರೆಸ್ನಲ್ಲಿನ ಅವರ ನಿರಂತರ ಉಪಸ್ಥಿತಿಯು, ಪಕ್ಷದ ರಾಜ್ಯ ಘಟಕದಲ್ಲಿ ಅವ್ಯವಸ್ಥೆಯನ್ನು ಉಂಟು ಮಾಡುತ್ತಿದೆ. ಮತ್ತು ಚುನಾವಣೆಗೆ ಸಜ್ಜಾಗುತ್ತಿರುವಾಗ ಗಮನವನ್ನು ಬೇರೆಡೆ ಸೆಳೆಯುತ್ತಿದೆ," ಎಂದು ಹೇಳಲಾಗಿದೆ.
ಮುಖ್ಯಮಂತ್ರಿಯ ಮೇಲೆ ಸಿಧು ಅವರ 'ಉದ್ದೇಶಿತ' ದಾಳಿಗಳು ಎಎಪಿ ಅಥವಾ ಬಿಜೆಪಿ ಮುಖಂಡರ ಉತ್ತೇಜನವೂ ಇರಬಹುದು ಎಂದು ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ತಮ್ಮ ಪ್ರಭಾವ ಹೆಚ್ಚಿಸಲು, ಆಡಳಿತ ಪಕ್ಷದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಹೀಗೆ ಮಾಡುತ್ತಿರಬಹುದು ಎಂದು ಅವರುಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಕ್ಯಾ. ಅಮರಿಂದರ್ ಸಿಂಗ್ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಈ ಕಾರಣಕ್ಕೆ ಸಿಧು ಆರಂಭದಲ್ಲಿ ಪಡೆದಿದ್ದ ಸಚಿವ ಸ್ಥಾನವನ್ನೂ ತೊರೆದಿದ್ದರು. ಹೀಗಿದ್ದೂ ಇಬ್ಬರ ನಡುವಿನ ತಿಕ್ಕಾಟ ಮಾತ್ರ ಇನ್ನೂ ನಿಂತಿಲ್ಲ.