ಆ್ಯಪ್ನಗರ

ಕೇಂದ್ರದ ಕೃಷಿ ಕಾಯಿದೆಗೆ ತಿರಸ್ಕಾರ, ಪ್ರತ್ಯೇಕ ಹಾದಿ ತುಳಿದ ಪಂಜಾಬ್‌

ಪ್ರತಿಪಕ್ಷಗಳಾದ ಆಮ್‌ ಆದ್ಮಿ ಪಕ್ಷ, ಶಿರೋಮಣಿ ಅಕಾಲಿ ದಳ ಮತ್ತು ಲೋಕ್‌ ಇನ್ಸಾಫ್‌ನ ಶಾಸಕರು ಕೂಡ ರಾಜ್ಯ ಸರಕಾರ ಮಂಡಿಸಿದ ಕೃಷಿ ವಿಧೇಯಕಗಳನ್ನು ಬೆಂಬಲಿಸಿದರೆ, ಬಿಜೆಪಿಯ ಇಬ್ಬರು ಶಾಸಕರು ಸದನದಿಂದ ಹೊರ ಉಳಿದರು.

Agencies 20 Oct 2020, 9:28 pm
ಚಂಡೀಗಢ: ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ತಿರಸ್ಕರಿಸಿರುವ ಪಂಜಾಬ್‌ ವಿಧಾನಸಭೆ, ಪರ್ಯಾಯವಾಗಿ ನಾಲ್ಕು ಪ್ರತ್ಯೇಕ ಕೃಷಿ ವಿಧೇಯಕಗಳಿಗೆ ಮಂಗಳವಾರ ಅನುಮೋದನೆ ನೀಡಿದೆ.
Vijaya Karnataka Web Punjab chief minister Amarinder Singh
ನಿರ್ಣಯ ಮಂಡಿಸಿ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಕ್ಯಾ. ಅಮರಿಂದರ್‌ ಸಿಂಗ್‌


ಇತ್ತೀಚೆಗೆ ಸಂಸತ್‌ ಅನುಮೋದನೆ ಪಡೆದ ಮೂರು ಕೃಷಿ ಕಾಯಿದೆಗಳ ಕುರಿತು ಚರ್ಚಿಸುವುದಕ್ಕಾಗಿಯೇ ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಎರಡು ದಿನಗಳ ವಿಶೇಷ ಅಧಿವೇಶನ ಸೇರಿತ್ತು. ಎರಡನೇ ದಿನದ ಚರ್ಚೆ ವೇಳೆ, ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಕೇಂದ್ರ ಕಾಯಿದೆಗಳ ವಿರುದ್ಧ ನಿರ್ಣಯ ಮಂಡಿಸಿದರು. ಅದಕ್ಕೆ ಸದನ ಸರ್ವಾನುಮತದ ಸಮ್ಮತಿ ಲಭಿಸಿತು. ಬಳಿಕ ರಾಜ್ಯದ ರೈತರ ಹಿತರಕ್ಷಣೆಗೆ ಪೂರಕವಾದ ಪ್ರತ್ಯೇಕ ನಾಲ್ಕು ಕೃಷಿ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.

ಪ್ರತಿಪಕ್ಷಗಳಾದ ಶಿರೋಮಣಿ ಅಕಾಲಿ ದಳ, ಆಮ್‌ ಆದ್ಮಿ ಮತ್ತು ಲೋಕ್‌ ಇನ್ಸಾಫ್‌ನ ಶಾಸಕರು ಕೂಡ ರಾಜ್ಯ ಸರಕಾರ ಮಂಡಿಸಿದ ಕೃಷಿ ವಿಧೇಯಕಗಳನ್ನು ಬೆಂಬಲಿಸಿದರು. ಬಿಜೆಪಿಯ ಇಬ್ಬರು ಶಾಸಕರು ಸದನದಿಂದ ಹೊರ ಉಳಿದರು.

ಕೇಂದ್ರ ಕೃಷಿ ವಿಧೇಯಕದ ವಿರುದ್ಧ ನಿರ್ಣಯ ಮಂಡಿಸಿದ ಕ್ಯಾಪ್ಟನ್‌ ಅಮರೀಂದರ್‌
ರಾಜ್ಯ ಸರಕಾರದ ನೂತನ ವಿಧೇಯಕಗಳ ಪ್ರಕಾರ, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಗೋಧಿ ಅಥವಾ ಭತ್ತ ಖರೀದಿ ಅಥವಾ ಮಾರಾಟ ಮಾಡಿದರೆ, ಅಂಥವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಎರಡೂವರೆ ಎಕರೆ ಒಳಗೆ ಜಮೀನು ಹೊಂದಿರುವ ರೈತರಿಗೆ ಈ ನಿಬಂಧನೆಯಿಂದ ವಿನಾಯಿತಿ ನೀಡಲಾಗಿದೆ. ಕಾಳಸಂತೆಯಲ್ಲಿ ಧಾನ್ಯಗಳನ್ನು ಮಾರಾಟ ಮಾಡುವುದನ್ನು ತಪ್ಪಿಸುವುದಕ್ಕಾಗಿ ಈ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಅಮರಿಂದರ್‌ ಸಿಂಗ್‌ ಸಮರ್ಥನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ