ಆ್ಯಪ್ನಗರ

ಬಾಬ್ರಿ ಮಸೀದಿ ಇತ್ತೆಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ!

ಹಿಂದೂಗಳ ಪಾಲಿಗೆ ಅಯೋಧ್ಯೆ ರಾಮನ ಜನ್ಮಸ್ಥಳವಾಗಿದೆ. ಇದು ಧರ್ಮದ ಶ್ರದ್ಧೆ ಮತ್ತು ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದೆ.

PTI 15 Aug 2019, 5:00 am
ಹೊಸದಿಲ್ಲಿ: ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಳ ಎಂಬುದು ಕೋಟ್ಯಂತರ ಹಿಂದೂಗಳ ಧರ್ಮಶ್ರದ್ಧೆ ಹಾಗೂ ನಂಬಿಕೆಗೆ ಸಂಬಂಧಿಸಿದ್ದಾಗಿದೆ ಎಂದು 'ರಾಮ ಲಲ್ಲಾ ವಿರಾಜಮಾನ್‌' ಸ್ರುಪೀಂ ಕೋರ್ಟ್‌ನಲ್ಲಿ ಬುಧವಾರ ವಾದಿಸಿದೆ. ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಆರನೇ ದಿನವಾದ ಬುಧವಾರ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ಒಡೆತನ ಪ್ರಕರಣದ ವಿಚಾರಣೆ ನಡೆಸಿತು. 'ರಾಮ ಲಲ್ಲಾ ವಿರಾಜಮಾನ್‌' ಪರ ವಕೀಲ ಸಿ.ಎಸ್‌. ವೈದ್ಯನಾಥನ್‌, ''ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿದ್ದ ಎಂಬುದನ್ನು ಪುರಾಣಗಳು ಹೇಳುತ್ತವೆ. 1608ರಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದ ವಿದೇಶಿ ವ್ಯಾಪಾರಿ ವಿಲಿಯಂ ಫಿಂಚ್‌ ಎಂಬಾತ ತನ್ನ ಪುಸ್ತಕ 'ಅರ್ಲಿ ಟ್ರಾವೆಲ್ಸ್‌ ಟು ಇಂಡಿಯಾ'ದಲ್ಲಿ ಅಯೋಧ್ಯೆಯಲ್ಲಿ ಒಂದು ಅರಮನೆ ಆಕಾರದ ಕಟ್ಟಡವಿದ್ದು, ಅದು ರಾಮನ ಜನ್ಮಸ್ಥಳವಾಗಿತ್ತು ಎಂಬುದಾಗಿ ಜನ ಭಾವಿಸುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ್ದ. ಇದರರ್ಥ ಶತಮಾನಗಳಿಂದಲೂ ಹಿಂದೂಗಳ ಪಾಲಿಗೆ ಅಯೋಧ್ಯೆ ರಾಮನ ಜನ್ಮಸ್ಥಳವಾಗಿದೆ. ಇದು ಧರ್ಮದ ಶ್ರದ್ಧೆ ಮತ್ತು ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದೆ,'' ಎಂದು ವಾದಿಸಿದರು.
Vijaya Karnataka Web SupremeCourtofIndia


ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠವು, ವಿವಾದಿತ ಕಟ್ಟಡವನ್ನು ಬಾಬ್ರಿ ಮಸೀದಿ ಎಂದು ಯಾವಾಗ ಕರೆಯಲಾಯಿತು ಎಂದು ಪ್ರಶ್ನಿಸಿದಾಗ ವಕೀಲ ವೈದ್ಯನಾಥನ್‌, ''19ನೇ ಶತಮಾನಕ್ಕೂ ಮೊದಲು ಇದು ಬಾಬ್ರಿ ಮಸೀದಿಯೇ ಆಗಿತ್ತು ಎಂದು ಸಾಕ್ಷೀಕರಿಸಲು ಖಚಿತ ದಾಖಲೆಗಳಿಲ್ಲ,'' ಎಂದರು. ಈ ಹಂತದಲ್ಲಿ ವೈದ್ಯನಾಥನ್‌ ಹಾಗೂ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್‌ ಧಾವನ್‌ ನಡುವೆ ಬಿರುಸಿನ ವಾದ-ವಿವಾದಗಳೂ ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ