ಆ್ಯಪ್ನಗರ

ಕುಡಿದು ಇಂಗ್ಲಿಷ್ ಗ್ರ್ಯಾಮರ್ ಸರಿ ಇಲ್ಲವೆಂದು ತಗಾದೆ: ವ್ಯಕ್ತಿ ಕೊಲೆ​

ಕುಡಿದ ಮತ್ತಿನಲ್ಲಿ ಮಾತನಾಡಿದ ಇಂಗ್ಲೀಷ್‌ಗೆ ವ್ಯಕ್ತಿ ಬಲಿಯಾಗಿದೆ.

Samayam Malayalam 11 May 2018, 4:05 pm
ಅಲಿಮಾಪಲ್ಲಿ: ಇಂಗ್ಲಿಷ್‌ ಮಾತನಾಡುವ ವೇಳೆ ವ್ಯಾಕರಣ ದೋಷ ಉಂಟಾಗಿದ್ದಕ್ಕೆ ವ್ಯಕ್ತಿಯೋರ್ವನ ಜೀವ ಬಲಿಯಾಗಿದೆ.
Vijaya Karnataka Web drunk


ಅಲ್ಲಿಂಪಲ್ಲಿಯ ಆಶೀಶ್‌ ವಿಲಿಯಂ ಮೃತ ದುರ್ದೈವಿ. ಅಲ್ಲಿಂಪಲ್ಲಿಯ ಅಟೋರಿಕ್ಷಾ ಚಾಲಕ ದಿನೇಸನ್‌ ಹಾಗೂ ಆಶೀಶ್‌ ವಿಲಿಯಂ ಪರಸ್ಪರ ಒಂದೇ ಬಾರ್‌ನಲ್ಲಿ ಕುಡಿದಿದ್ದಾರೆ. ಕುಡಿದ ಬಳಿಕ ಆಶೀಶ್‌ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾನೆ. ಈ ವೇಳೆ ಆದ ವ್ಯಾಕರಣ ದೋಷ ಆಗಿರುವ ಬಗ್ಗೆ ದಿನೇಸನ್‌, ಆಶೀಶ್‌ಗೆ ಹೇಳಿದ್ದಾನೆ. ಇದಕ್ಕೆ ಕಿವಿಗೊಡದ ಆಶೀಶ್‌, ಬಾರ್‌ನಿಂದ ತೆರಳಿ ಅಲ್ಲಿಂಪಲ್ಲಿ ಬಸ್‌ ನಿಲ್ದಾಣಕ್ಕೆ ಬಂದಿದ್ದಾನೆ.

ಹಿಂದಿನಿಂದ ಬಂದ ದಿನೇಸನ್‌, ಮರದ ದಿಮ್ಮಿಯಿಂದ ಆಶೀಶ್‌ನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಬಲವಾದ ಪೆಟ್ಟು ಬಿದ್ದ ಪರಿಣಾಮ ಆಶೀಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿ ಘಟನೆ ನಡೆದಿದ್ದು, ದಿನೇಸನ್‌ನ್ನುಹೊಸದುರ್ಗ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕುಡಿದ ಮತ್ತಿನಲ್ಲಾದ ವ್ಯಾಕರಣ ದೋಷ, ಅಮಾಯಕನ ಜೀವ ಬಲಿತೆಗೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ