ಆ್ಯಪ್ನಗರ

ಎನ್‌ಡಿಎ ಸಹವಾಸ ಬಿಡಿ, ತೇಜಸ್ವಿಯನ್ನು ಆಶೀರ್ವದಿಸಿ - ನಿತೀಶ್‌ಗೆ ದಿಗ್ವಿಜಯ್‌ ಸಿಂಗ್‌ ಸಲಹೆ!

ಬಿಜೆಪಿ-ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಬಿಟ್ಟು ಬಿಡಿ, ತೇಜಸ್ವಿ ಯಾದವ್‌ಗೆ ಆಶೀರ್ವಾದ ಮಾಡಿ. ಬಿಜೆಪಿಯನ್ನು ಬಿಹಾರದಲ್ಲಿ ಬೆಳೆಯಲು ಬಿಡಬೇಡಿ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗ್ವಿಜಯ್‌ ಸಿಂಗ್ ಅವರು ನಿತೀಶ್‌ ಕುಮಾರ್‌ಗೆ ಸಲಹೆ ನೀಡಿದ್ದಾರೆ.

Agencies 11 Nov 2020, 7:25 pm
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗೆ ಸಲಹೆ ನೀಡಿರುವ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಬೆಂಬಲ ನೀಡುವಂತೆ ಸಲಹೆ ನೀಡಿದ್ದಾರೆ.
Vijaya Karnataka Web Digvijay
ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌


ಈ ಕುರಿತು ಸರಣಿ ಟ್ಟೀಟ್‌ಗಳನ್ನು ಮಾಡಿರುವ ಅವರು, ಬಿಜೆಪಿ ತನ್ನ ತಂತ್ರಗಾರಿಕೆಯ ಮೂಲಕ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರ ಶಕ್ತಿ ಕುಂದಿಸಿದೆ ಎಂದು ಆಪಾದಿಸಿದ್ದಾರೆ.

“ಬಿಜೆಪಿ ಬಳ್ಳಿ ಇದ್ದ ಹಾಗೆ. ಒಮ್ಮೆ ಮರ ಒಣಗಲು ಪ್ರಾರಂಭಿಸುತ್ತಿದ್ದಂತೆ ಅದು ಇನ್ನೊಂದು ಮರದ ಬೆಂಬಲವನ್ನು ನೆಚ್ಚಿಕೊಳ್ಳುತ್ತದೆ. ನಿತೀಶ್‌ ಜೀ, ನೀವು ಮತ್ತು ಲಾಲು ಪ್ರಸಾದ್‌ ಯಾದವ್‌ ಒಟ್ಟಿಗೆ ಹೋರಾಡಿದವರು. ಅವರು ಇಂದು ಜೈಲಿಗೆ ಹೋಗಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಬಿಟ್ಟು ಬಿಡಿ, ತೇಜಸ್ವಿಗೆ ಆಶೀರ್ವಾದ ಮಾಡಿ. ಬಳ್ಳಿಯಂಥ ಬಿಜೆಪಿಯನ್ನು ಬಿಹಾರದಲ್ಲಿ ಬೆಳೆಯಲು ಬಿಡಬೇಡಿ,” ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ದಿಗ್ವಿಜಯ್‌ ಸಿಂಗ್‌ ಒತ್ತಾಯಿಸಿದ್ದಾರೆ.

ನಿತೀಶ್‌ ಕುಮಾರ್‌ ಅವರೇ ಸಿಎಂ, ಇದು ನಮ್ಮ ಭರವಸೆ - ಬಿಜೆಪಿ ಸ್ಪಷ್ಟನೆ
ಇದರ ಜೊತೆಗೆ ಬಿಹಾರ ಬಿಟ್ಟು ರಾಷ್ಟ್ರ ರಾಜಕಾರಣ ಪ್ರವೇಶಿಸುವಂತೆಯೂ ನಿತೀಶ್‌ ಕುಮಾರ್‌ಗೆ ದಿಗ್ವಿಜಯ್‌ ಸಿಂಗ್‌ ಕಿವಿಮಾತು ಹೇಳಿದ್ದಾರೆ. “ನಿತೀಶ್‌ ಜೀ, ಬಿಹಾರ ನಿಮ್ಮ ಪಾಲಿಗೆ ಸಣ್ಣದು. ನೀವು ರಾಷ್ಟ್ರ ರಾಜಕಾರಣದಲ್ಲಿ ಕೈಜೋಡಿಸಬೇಕು. ಒಡೆದಾಳುವ ಕೇಂದ್ರದ ನೀತಿಗೆ ಅವಕಾಶ ನೀಡಬೇಡಿ. ಜಾತ್ಯಾತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಸಮಾಜವಾದಿಗಳಿಗೆ ಸಹಾಯ ಮಾಡಿ. ಈ ಸಲಹೆಯನ್ನು ಪರಿಗಣಿಸಿ,” ಎಂದು ರಾಜ್ಯಸಭೆ ಸದಸ್ಯರೂ ಆಗಿರುವ ಸಿಂಗ್‌ ಹೇಳಿದ್ದಾರೆ.

ಇದರ ಜೊತೆಗೆ ಸಿದ್ಧಾಂತಕ್ಕಾಗಿ ಹೋರಾಡುವ ದೇಶದ ಏಕೈಕ ನಾಯಕ ರಾಹುಲ್‌ ಗಾಂಧಿ ಎಂದು ದಿಗ್ವಿಜಯ್‌ ಸಿಂಗ್‌ ಹೊಗಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ