ಆ್ಯಪ್ನಗರ

ಗೋಹತ್ಯೆ, ಕುರಿ ಬಲಿ ಮಾಡಿದರೆ ಗೂಂಡಾ ಕಾಯ್ದೆ

ಬಕ್ರೀದ್ ಹಿನ್ನೆಲೆಯಲ್ಲಿ ಹಸು, ಎಮ್ಮೆ, ಎತ್ತು ಬಲಿ ನೀಡಿದಲ್ಲಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಸಾಂಭಲ್ ಸ್ಥಳೀಯ ಆಡಳಿತ ತಿಳಿಸಿದೆ.

Vijaya Karnataka 2 Sep 2017, 12:04 pm
ಸಾಂಭಲ್: ಬಕ್ರೀದ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ರಿಂದ 4ರವರೆಗೆ ಹಸು, ಎಮ್ಮೆ, ಎತ್ತುಗಳ ಬಲಿ ನೀಡಿದಲ್ಲಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಸಾಂಭಲ್ ಸ್ಥಳೀಯ ಆಡಳಿತ ಪ್ರಕಟಣೆ ನೀಡಿದೆ.
Vijaya Karnataka Web qurbani of cow buffalo camel ox in sambhal to invite gangsters act
ಗೋಹತ್ಯೆ, ಕುರಿ ಬಲಿ ಮಾಡಿದರೆ ಗೂಂಡಾ ಕಾಯ್ದೆ


ಗೂಂಡಾ ಕಾಯ್ದೆಯಡಿ ದೂರು ದಾಖಲಿಸಿದಲ್ಲಿ ಅಂಥವರ ಪ್ರತಿ ಚಲನವಲನದ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬಹುದಾಗಿದೆ. ಅಷ್ಟೇ ಅಲ್ಲ, ಈ ಕಾಯ್ದೆಯಡಿ ವ್ಯಕ್ತಿಯನ್ನು 60 ದಿನದವರೆಗೆ ಬಂಧಿಸಬಹುದಾಗಿದೆ.

ಈ ಕುರಿತು ಸಾಂಭಲ್‌ ಸ್ಥಳೀಯ ಆಡಳಿತ ನೋಟಿಸ್‌ ಕೂಡ ಹೊರಡಿಸಿದೆ. ಅಲ್ಲದೇ ಎಲ್ಲ ಪೊಲೀಸ್‌ ಠಾಣೆಗಳಿಗೂ ಮಾಹಿತಿ ನೀಡಿದ್ದು, ಕಠಿಣ ನಿಗಾ ವಹಿಸುವಂತೆಯೂ ಸೂಚನೆ ನೀಡಿದೆ.

ಸರಕಾರ ಸಿದ್ಧಪಡಿಸಿರುವ ನಿಷೇಧಿತ ಬಲಿ ಪಟ್ಟಿಯಿಂದ ಯಾವುದೇ ಪ್ರಾಣಿಯನ್ನು ಬಲಿ ಕೊಡಬಾರದು. ಈ ಪಟ್ಟಿಯಲ್ಲಿ ಒಂಟೆ ಇಲ್ಲ ಎಂದು ಸಾಂಭಲ್‌ ರಶೀದ್‌ ಖಾನ್‌ ತಿಳಿಸಿದ್ದಾರೆ.

ಕಳೆದ ವರ್ಷ ಒಂದೇ ಒಂದು ಒಂಟೆಯನ್ನು ಈ ಜಿಲ್ಲೆಯಲ್ಲಿ ಬಕ್ರೀದ್‌ ಸಂದರ್ಭ ಬಲಿ ನೀಡಲಾಗಿತ್ತು. ಸಾಂಭಲ್‌ನಲ್ಲಿ ಅತಿ ಹೆಚ್ಚು ಮುಸ್ಲಿಂ ಜನಾಂಗದವರು (ಶೇಕಡ 77.67)ರಷ್ಟು ಮಂದಿ ಇದ್ದಾರೆ.

ಸಮಾಜವಾದಿ ಪಕ್ಷದ ಸರಕಾರದ ಆಡಳಿತವಿದ್ದಾಗ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಠಿಣವಾಗಿ ಜಾರಿಗೆ ತಂದಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

‘qurbani’ of cow, buffalo, camel, ox in sambhal to invite gangsters act

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ