ಆ್ಯಪ್ನಗರ

ರಾಯಿಸ್‌ ಪ್ರಮೋಷನ್‌ ಅವಾಂತರ : ಶಾರೂಖ್‌ಗೆ ಸಮನ್ಸ್‌

ರಾಯಿಸ್‌ ಚಲನಚಿತ್ರದ ಪ್ರಚಾರ ಕಾರ್ಯದ, ವಡೋದರಾ ರೈಲ್ವೇ ಸ್ಟೇಷನ್‌ನಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳನ್ನು ದಾಖಲಿಸುವಂತೆ ಕೋರಿ ರಯೀಸ್‌ ...

ಏಜೆನ್ಸೀಸ್ 29 Mar 2017, 9:48 am

ವಡೋದರಾ: ರಾಯಿಸ್‌ ಚಲನಚಿತ್ರದ ಪ್ರಚಾರ ಕಾರ್ಯದ, ವಡೋದರಾ ರೈಲ್ವೇ ಸ್ಟೇಷನ್‌ನಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳನ್ನು ದಾಖಲಿಸುವಂತೆ ಕೋರಿ ರಯೀಸ್‌ ಚಿತ್ರದ ನಾಯಕ ನಟ ಶಾರೂಖ್‌ಖಾನ್‌ ಹಾಗೂ ಸಹ-ನಿರ್ಮಾಪಕ ಸಂಸ್ಥೆ 'ಎಕ್ಸೆಲ್‌ ಎಂಟರ್ಟೇನ್‌ಮೆಂಟ್‌'ಗೆ ಸಮನ್ಸ್‌ ಜಾರಿಯಾಗಿದೆ.

ಈ ವರ್ಷ ಜನವರಿ 23ರಂದು ರಾಯಿಸ್‌ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ, ಫರೀದ್‌ ಖಾನ್‌ ಪಠಾನ್‌ ಎಂಬ ವ್ಯಕ್ತಿ ಸಾವಿಗೀಡಾಗಿದ್ದರು. ಅಂದು ಶಾರೂಖ್‌ ಖಾನ್‌ 'ಆಗಸ್ಟ್‌ ಕ್ರಾಂತಿ ಎಕ್ಸ್‌ಪ್ರೆಸ್‌' ರೈಲಿನಲ್ಲಿ ಮುಂಬಯಿಯಿಂದ ದೆಹಲಿಗೆ ಹೊರಟಿದ್ದರು.

Vijaya Karnataka Web raees promotion summons to shahrukh
ರಾಯಿಸ್‌ ಪ್ರಮೋಷನ್‌ ಅವಾಂತರ : ಶಾರೂಖ್‌ಗೆ ಸಮನ್ಸ್‌


ತಮ್ಮ ನೆಚ್ಚಿನ ನಾಯಕ ನಟನ ದರ್ಶನ ಪಡೆಯುವುದಕ್ಕಾಗಿ ವಡೋದರಾ ರೈಲ್ವೇ ಸ್ಟೇಷನ್‌ನಲ್ಲಿ ಜನ ಕಿಕ್ಕಿರಿದು ಜಮಾಯಿಸಿದ್ದರು. ಆ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿ ಪರೀದ್‌ ಸಾವಿಗೀಡಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ