ಆ್ಯಪ್ನಗರ

'ಜೈ ಶ್ರೀರಾಮ್‌' ಬರೆದ ಬೈಕಲ್ಲಿ ಹೆಲ್ಮೆಟ್‌ ಇಲ್ಲದೆ ರಾಹುಲ್‌ ಟ್ರಿಪ್ಲ್‌ ರೈಡ್!

ಮಧ್ಯ ಪ್ರದೇಶದಲ್ಲಿ ರೈತರ ಪ್ರತಿಭಟನೆ ವೇಳೆ ಗೋಲಿಬಾರ್ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಏಜೆನ್ಸೀಸ್ 9 Jun 2017, 4:29 pm
ಜೈಪುರ್: ಮಧ್ಯ ಪ್ರದೇಶದಲ್ಲಿ ರೈತರ ಪ್ರತಿಭಟನೆ ವೇಳೆ ಗೋಲಿಬಾರ್ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
Vijaya Karnataka Web rahul disobay the traffic rules in rajastan
'ಜೈ ಶ್ರೀರಾಮ್‌' ಬರೆದ ಬೈಕಲ್ಲಿ ಹೆಲ್ಮೆಟ್‌ ಇಲ್ಲದೆ ರಾಹುಲ್‌ ಟ್ರಿಪ್ಲ್‌ ರೈಡ್!


ರಾಜಸ್ಥಾನದಿಂದ ರಾಹುಲ್ ಗಾಂಧಿ ತಮ್ಮ ಬೆಂಬಲಿಗರ ಜೊತೆ ಬೈಕ್‌ ಮೇಲೆ ಹೆಲ್ಮೆಟ್‌ ಧರಿಸದೇ ಮೂವರ ಜತೆ ಕುಳಿತು ಮಧ್ಯಪ್ರದೇಶದ ಗಡಿವರೆಗೆ ತೆರಳಿದ್ದರು. ಆದರೆ ನಿಯಮಾನುಸಾರ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಸವಾರಿ ಮಾಡುವುದು ತಪ್ಪು ಅಲ್ಲದೇ ಹಿಂಬದಿ ಸವಾರನೂ ಬೈಕ್‌ನಲ್ಲಿ ಪ್ರಯಾಣಿಸಬೇಕಾದರೆ ಹೆಲ್ಮೆಟ್‌ ಧರಿಸಬೇಕು. ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವ ರಾಹುಲ್ ಹಾಗೂ ಮೂವರು ಬೈಕ್‌ ಸಂಚಾರ ನಡೆಸಿದ್ದಾರೆ.

ರಾಜಸ್ಥಾನದ ಭಿಲ್ವಾರಾದ ಕಾಂಗ್ರೆಸ್ ಶಾಸಕ ಧೀರಜ್ ಗುಜ್ಜರ್ ಬೈಕ್ ರೈಡ್‌ ಮಾಡುತ್ತಿದ್ದು, ಮಧ್ಯದಲ್ಲಿ ರಾಹುಲ್ ಹಾಗೂ ಹಿಂದೆ ಮತ್ತೋರ್ವ ಕುಳಿತಿದ್ದಾರೆ. ಬೈಕ್‌ನಲ್ಲಿದ್ದ ಯಾರೂ ಕೂಡ ಹೆಲ್ಮೆಟ್ ಧರಿಸಿಲ್ಲ.

ಭಗವದ್ಗೀತೆ ಆಯ್ತು ಇದೀಗ ಜೈ ಶ್ರೀರಾಮ್‌ ಬೈಕ್‌!:

ಕೆಲ ದಿನಗಳ ಹಿಂದೆಯಷ್ಟೇ ತಗಾನು ಭಗವದ್ಗೀತೆ ಓದುವುದಾಗಿ ಹೇಳಿದ್ದ ರಾಹುಲ್‌ ಗಾಂಧಿ ಇದೀಗ ತಾನು ಪ್ರಯಾಣಿಸಿದ್ದ ಬೈಕ್‌ನ ಹಿಂಭಾಗದ ನಂಬರ್ ಪ್ಲೇಟ್‌ನಲ್ಲಿ 'ಶ್ರೀರಾಮ' ಎಂದು ಬರೆದಿರುವುದು ಕಂಡುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ