ಆ್ಯಪ್ನಗರ

ಮೂರೇ ನಿಮಿಷದಲ್ಲಿ ರಾಗಾ ಪ್ರೆಸ್‌ಮೀಟ್‌ ಖತಂ !

ಹಲವಾರು ವಿಚಾರದಲ್ಲಿ ಟೀಕೆ, ನಗೆಪಾಟಲಿಗೆ ಗುರಿಯಾಗುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಂಗಳವಾರ 3 ನಿಮಿಷದ ಸುದ್ದಿಗೋಷ್ಠಿ ನಡೆಸಿ ಸುದ್ದಿಯಾಗಿದ್ದಾರೆ.

Mumbai Mirror 14 Jun 2018, 2:06 pm
ಮುಂಬಯಿ: ಹಲವಾರು ವಿಚಾರದಲ್ಲಿ ಟೀಕೆ, ನಗೆಪಾಟಲಿಗೆ ಗುರಿಯಾಗುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಂಗಳವಾರ 3 ನಿಮಿಷದ ಸುದ್ದಿಗೋಷ್ಠಿ ನಡೆಸಿ ಸುದ್ದಿಯಾಗಿದ್ದಾರೆ.
Vijaya Karnataka Web rahul gandhi


ಭಾರತ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕಿರು ಸುದ್ದಿಗೋಷ್ಠಿ ಎಂದೂ ಮಾಧ್ಯಮಗಳು ಇದನ್ನು ಬಣ್ಣಿಸಿ, ವ್ಯಂಗ್ಯಕ್ಕೂ ಗುರಿಯಾಗಿದ್ದಾರೆ.

ಆದರೆ ಈ ವಿಚಾರವನ್ನು ಕಾಂಗ್ರೆಸ್ ಮಾಧ್ಯಮ ವಿಭಾಗ ತಳ್ಳಿಹಾಕಿದ್ದು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಜತೆಗಿನ ಸಭೆ ಬಳಿಕ ಕೆಲ ವಿದ್ಯುನ್ಮಾನ ಮಾಧ್ಯಮ ರಾಹುಲ್‌ ಗಾಂಧಿ ಅವರ ಹೇಳಿಕೆ ಕೇಳಿದೆ. ಈ ವೇಳೆ ರಾಹುಲ್‌ ಗಾಂಧಿ ಅವರು ಚಂದ್ರಾಪುರಕ್ಕೆ ಹೊರಡುವ ಮುನ್ನ ಮಾಧ್ಯಮಕ್ಕೆ ಹೇಳಿಕೆ(ಬೈಟ್‌) ನೀಡುವುದಾಗಿ ಕಾಂಗ್ರೆಸ್‌ ಮಾಧ್ಯಮ ವಿಭಾಗಕ್ಕೆ ತಿಳಿಸಿದ್ದಾರೆ. ಈ ವಿಚಾರದ ಸಂದೇಶ ಮೀಡಿಯಾಗಳಿಗೆ ತಪ್ಪಾಗಿ ರವಾನೆಯಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಅಷ್ಟೇ ಅಲ್ಲದೆ ಬೈಟ್‌ ನೀಡಲು ಗಾರ್ಡನ್‌ ಇರುವ ಜಾಗ ಉತ್ತಮ ಎಂದು ರಾಹುಲ್‌ ಮಾಧ್ಯಮ ವಿಭಾಗಕ್ಕೆ ತಿಳಿಸಿದ್ದಾರೆ. ಆದರೆ ಇದಕ್ಕೆ ಅವರ ಭದ್ರತಾ ಪಡೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿನ ಕ್ಲಬ್‌ನಲ್ಲಿ ಬೈಟ್‌ ನೀಡಲು ವ್ಯವಸ್ಥೆ ಮಾಡಲಾಯಿತು. ಈ ವಿಚಾರ ಹಲವರಿಗೆ ತಲುಪಿಸಲಾಗಿಲ್ಲ ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗ ಹೇಳಿಕೊಂಡಿದೆ.

ಆಗಿದ್ದೇನು?

ಮಂಗಳವಾರ ರಾತ್ರಿ ಬುಧವಾರ ರಾತ್ರಿ 8.30ಕ್ಕೆ ಮುಂಬಯಿ ಕ್ರಿಕೆಟ್‌ ಅಸೋಸಿಯೇನ್‌ನಲ್ಲಿ ರಾಹುಲ್‌ ಗಾಂಧಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂಬ ಸಂದೇಶ ಕಾಂಗ್ರೆಸ್‌ ಮಾಧ್ಯಮ ವಿಭಾಗದಿಂದ ರವಾನೆಯಾಗಿದೆ. ನಿಗದಿತ ಸಮಯಕ್ಕಿಂತ 50ನಿಮಿಷ ತಡವಾಗಿ ಬಂದ ರಾಹುಲ್‌ ಗಾಂಧಿ, 3ನಿಮಿಷದಲ್ಲಿ ಸುದ್ದಿಗೋಷ್ಠಿ ಮುಗಿಸಿ, ಹೊರಟೇ ಬಿಟ್ಟರು. ಮಾಧ್ಯಮದ ಯಾವುದೇ ಪ್ರಶ್ನೆಗೆ ಉತ್ತರಿಸದೇ ನಿರ್ಗಮಿಸಿದ್ದಾರೆ.

2019ಕ್ಕೆ ಯುಪಿಎನಿಂದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಮಾಧ್ಯಮದ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರಿಸಲು ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಲ್ಲ ಪಕ್ಷಗಳು ಒಂದಾಗಿದೆ. ಮಹಾಮೈತ್ರಿ ರಾಜಕೀಯ ಪಕ್ಷಗಳ ಇರಾದೆ ಅಲ್ಲ. ಬದಲಾಗಿ ಜನರ ಅಭಿಮತವೂ ಇದೇ ಆಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ