ಆ್ಯಪ್ನಗರ

ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್‌ ನಿಧನ: 'ದುಃಖದ ದಿನ' ಎಂದ ರಾಹುಲ್‌-ಪ್ರಿಯಾಂಕ ಗಾಂಧಿ!

ಇದು ದುಃಖದ ದಿನ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿದ್ದರು. ಕಾಂಗ್ರೆಸ್‌ ಪಕ್ಷ ಅತ್ಯಂತ ಕಷ್ಟದ ಸಮಯದಲ್ಲೂ ಜೊತೆಗೆ ನಿಂತ ಅವರು ಪಕ್ಷಕ್ಕಾಗಿ ಜೀವಿಸಿದರು ಹಾಗೂ ಪಕ್ಷವೇ ಅವರ ಉಸಿರು ಆಗಿತ್ತು ಎಂದು ರಾಹುಲ್‌ ಗಾಂಧಿ ಅಹ್ಮದ್‌ ಪಟೇಲ್‌ ನಿಧನ ಸಂಬಂಧ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

Vijaya Karnataka Web 25 Nov 2020, 7:53 am
ಹೊಸದಿಲ್ಲಿ: ಒಂದು ತಿಂಗಳ ಹಿಂದೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್ ಅವರು ನಿಧನರಾಗಿದ್ದಾರೆ. ಸೋನಿಯಾ ಗಾಂಧಿ ಆಪ್ತ ಎಂದೇ ಬಿಂಬಿತವಾಗಿದ್ದ ಕಾಂಗ್ರೆಸ್‌ನ ನಿಷ್ಠಾವಂತ ನಾಯಕ ಬುಧವಾರ ಮುಂಜಾನೆ 3.30ರ ಸುಮಾರಿಗೆ ನಿಧನರಾಗಿದ್ದಾರೆ.
Vijaya Karnataka Web ahmed patel
File photo


71 ವರ್ಷ ವಯಸ್ಸಿನ ಅಹ್ಮದ್‌ ಪಟೇಲ್ ಅವರು ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರಾದರೂ, ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಇದೀಗ ಅವರ ನಿಧನದ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಮುಖ ನಾಯಕರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ಇದು ನೋವಿನ ದಿನ ಎಂದು ಅಹ್ಮದ್‌ ಪಟೇಲ್‌ ಜೊತೆಗಿದ್ದ ಸಂಬಂಧವನ್ನು ತೋರಿಸಿಕೊಟ್ಟಿದ್ದಾರೆ.

ಸೋನಿಯಾ ಗಾಂಧಿ ಆಪ್ತರಾಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್‌ ಇನ್ನಿಲ್ಲ..!

"ಇದು ದುಃಖದ ದಿನ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿದ್ದರು. ಕಾಂಗ್ರೆಸ್‌ ಪಕ್ಷ ಅತ್ಯಂತ ಕಷ್ಟದ ಸಮಯದಲ್ಲೂ ಜೊತೆಗೆ ನಿಂತ ಅವರು ಪಕ್ಷಕ್ಕಾಗಿ ಜೀವಿಸಿದರು ಹಾಗೂ ಪಕ್ಷವೇ ಅವರ ಉಸಿರು ಆಗಿತ್ತು ಎಂದು ರಾಹುಲ್‌ ಗಾಂಧಿ ತಿಳಿಸಿದರು. ಇನ್ನು ಅವರು ಪಕ್ಷದ ಅಪಾರ ಆಸ್ತಿಯಾಗಿದ್ದರು ಎಂದು ರಾಹುಲ್‌ ಸಂತಾಪ ಸೂಚಿಸಿದ್ದಾರೆ. ಅವರು ಕುಟುಂಬಸ್ಥರಾದ ಫೈಸಲ್, ಮುಮ್ತಾಜ್ ಹಾಗೂ ಸಮಸ್ತ ಕುಟುಂಬಕ್ಕೆ ನನ್ನ ಪ್ರೀತಿ ಮತ್ತು ಸಂತಾಪವಿದೆ ಎಂದು ಹೇಳಿದ್ದಾರೆ.


ಇನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಕೂಡ ಅಹ್ಮದ್‌ ಪಟೇಲ್‌ ನಿಧನಕ್ಕೆ ಮಿಡಿದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಅಹ್ಮದ್ ಪಟೇಲ್‌ ಒಬ್ಬ ಬುದ್ಧಿವಂತ ಮತ್ತು ಅನುಭವಿ ಸಹೋದ್ಯೋಗಿ ಮಾತ್ರವಲ್ಲದೇ, ನಾನು ಸಲಹೆ ಮತ್ತು ಸಲಹೆಗಳಿಗಾಗಿ ನಿರಂತರವಾಗಿ ಅವರತ್ತ ಮುಖಮಾಡುತ್ತಿದ್ದ ವ್ಯಕ್ತಿಯಾಗಿದ್ದರು. ಅವರು ಸ್ಥಿರ, ನಿಷ್ಠಾವಂತ ಮತ್ತು ಕೊನೆಯವರೆಗೂ ನಂಬಲರ್ಹ ವ್ಯಕ್ತಿಯಾಗಿದ್ದು ನಮ್ಮೆಲ್ಲರ ಜೊತೆ ನಿರಂತರವಾಗಿ ನಿಲ್ಲುತ್ತಿದ್ದರು. ಅವರ ನಿಧನವು ಅಪಾರ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ