ಆ್ಯಪ್ನಗರ

ರಾಹುಲ್‌ ಗಾಂಧಿ ದೇಶದ ದೊಡ್ಡ ಜೋಕರ್‌: ಚಂದ್ರಶೇಖರ್‌ ರಾವ್‌

ಕಾಂಗ್ರೆಸ್‌ ಅಧ್ಯಕ್ಷರ ಮೇಲೆ ಟಿಆರ್‌ಎಸ್‌ ಮುಖ್ಯಸ್ಥರ ದಾಳಿ

Vijaya Karnataka Web 6 Sep 2018, 6:16 pm
ಹೊಸದಿಲ್ಲಿ: ಇಡೀ ದೇಶವೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಜೋಕರ್‌ ಇದ್ದಂತೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್‌ (ಕೆಸಿಆರ್‌) ತಿಳಿಸಿದ್ದಾರೆ.
Vijaya Karnataka Web ಚಂದ್ರಶೇಖರ ರಾವ್‌
ಚಂದ್ರಶೇಖರ ರಾವ್‌


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವ್‌, ಪ್ರಧಾನಿ ಮೋದಿಯನ್ನು ರಾಹುಲ್‌ ಹೇಗೆ ತಬ್ಬಿಕೊಂಡ ಎಂಬುದು ಎಲ್ಲರಿಗೂ ಗೊತ್ತಿದೆ. ಜೋಕರ್‌ ಮಾದರಿಯಲ್ಲಿ ಅವರು ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.

ದಿಲ್ಲಿಯ ಸುಲ್ತಾನರ ಮಾದರಿಯಲ್ಲಿ ರಾಹುಲ್‌ ಆಡಳಿತ ನಡೆಸುತ್ತಾರೆ. ಹೀಗಾಗಿ ನಾವು ದಿಲ್ಲಿಯ ಅಥವಾ ಕಾಂಗ್ರೆಸ್‌ನ ಗುಲಾಮರಾಗಬೇಕಾಗಿಲ್ಲ. ಇದು ರಾಜ್ಯದ ಜನರಲ್ಲಿ ನನ್ನ ಮನವಿ ಎಂದು ಅವರು ಹೇಳಿದರು.

ತೆಲಂಗಾಣಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ತೆಲಂಗಾಣದಲ್ಲಿಯೇ ತೆಗೆದುಕೊಳ್ಳಬೇಕು. ಕಾಂಗ್ರೆಸ್‌ ಪಕ್ಷ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಕಾಂಗ್ರೆಸ್‌ ನಮಗೆ ಪ್ರಮುಖ ಪ್ರತಿಪಕ್ಷ ಎಂದು ರಾವ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ