ಆ್ಯಪ್ನಗರ

ರಾಹುಲ್‌ ದಿಕ್ಕೆಟ್ಟ ನಾಯಕ ಎಂದ ಜಾವಡೇಕರ್

ರಾಜಸ್ಥಾನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ರಫೇಲ್‌ ಡೀಲ್‌ ವಿಷಯದಲ್ಲಿದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ "ದಿಕ್ಕೆಟ್ಟ ನಾಯಕ, ಎಂದು ಜರಿದಿದ್ದಾರೆ.

Vijaya Karnataka 25 Sep 2018, 10:14 am
ಜೈಪುರ್: ರಾಜಸ್ಥಾನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ರಫೇಲ್‌ ಡೀಲ್‌ ವಿಷಯದಲ್ಲಿದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ "ದಿಕ್ಕೆಟ್ಟ ನಾಯಕ, ಎಂದು ಜರಿದಿದ್ದಾರೆ.
Vijaya Karnataka Web Rahul Gandhi 1


ರಫೇಲ್‌ ಒಪ್ಪಂದದ ವಿಷಯದಲ್ಲಿನಿಖರ ಮಾಹಿತಿ ಇರದೇ ರಾಹುಲ್‌ ಬಾಯಿಗೆ ಬಂದದ್ದನ್ನು ಮಾತಾಡುತ್ತಿದ್ದಾರೆ. ಸುಳ್ಳು ಆರೋಪಗಳ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಬಹುದು ಎನ್ನುವ ಯೋಚನೆ ಅವರದ್ದು, ಆದರೆ ಅದು ನಡೆಯುವುದಿಲ್ಲಎಂದು ಗುಡುಗಿದರು. ಅ-ಕಾರವಿಲ್ಲದೇ ದಿಕ್ಕೆಟ್ಟಿರುವ ಅವರು ಏನೇ ಬಡಬಡಿಸಿದರೂ ಮರಳಿ ಅಧಿಕಾರ ಹಿಡಿಯುವ ಸಾಧ್ಯತೆ ಖಂಡಿತ ಇಲ್ಲ ಎಂದರು.

ಕಳೆದ ನಾಲ್ಕುವರೆ ವರ್ಷಗಳ ಆಡಳಿತಾವಧಿಯಲ್ಲಿಕೇಂದ್ರ ಸರಕಾರದ ಒಬ್ಬರೇ ಒಬ್ಬ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ. ಸರಕಾರವೂ ಪರಿಶುದ್ಧವಾಗಿದೆ. ರಾಹುಲ್‌ ಕೇವಲ ಸುಳ್ಳುಗಳ ಮೂಲಕ ಮೋದಿ ಆಡಳಿತವನ್ನು ಮಲೀನಗೊಳಿಸಲು ನೋಡುತ್ತಿದ್ದಾರೆ ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ