ಹೊಸದಿಲ್ಲಿ: ಚೌಕೀದಾರ್ ಚೋರ್ ಹೈ ಅಂತ ಸುಪ್ರೀಂ ಕೋರ್ಟೇ ಹೇಳಿದೆ ಎಂದು ತಪ್ಪಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೊನೆಗೂ ಕ್ಷಮೆ ಯಾಚಿಸಲು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವುದಕ್ಕಾಗಿ ಮತ್ತು ಮತದಾರರ ಹಾದಿ ತಪ್ಪಿಸುವುದಕ್ಕಾಗಿಯೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ನ್ಯಾಯಾಲಯದ ಮೊರೆ ಹೋಗಿತ್ತು.
ಈ ಮೊದಲು ಎರಡು ಬಾರಿಯೂ ಅವರು ವಿಷಾದ ವ್ಯಕ್ತಪಡಿಸಿ, ನ್ಯಾಯಾಂಗ ನಿಂದನೆ ಆರೋಪದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು. ಈ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿದ್ದು ಸಾಕಾಗುವುದಿಲ್ಲ. ತಪ್ಪು ಒಪ್ಪಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು.
ವಿಷಾದ ಸೂಚಿಸುವುದಕ್ಕಾಗಿ 22 ಪುಟಗಳ ಅಫಿದವಿತ್ ಬಳಸಿಕೊಳ್ಳಬೇಕಾಯಿತೇ ಎಂದು ನ್ಯಾಯಾಲಯವು ರಾಹುಲ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಒಂದು ಕಡೆ ರಾಹುಲ್ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ, ಮತ್ತೊಂದು ಕಡೆ ನ್ಯಾಯಾಂಗ ನಿಂದನೆಯಾಗುವಂಥ ಹೇಳಿಕೆ ನೀಡಿಯೇ ಇಲ್ಲ ಎನ್ನುತ್ತಾರೆ ಎಂದಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು, ವಿಷಾದ ಎಂಬ ಪದವನ್ನು ಆವರಣದಲ್ಲಿ (ಬ್ರಾಕೆಟ್) ಬರೆದಿರುವ ಅರ್ಥವಾದರೂ ಏನು ಎಂದು ಪ್ರಶ್ನಿಸಿತು.
ರಾಹುಲ್ ಗಾಂಧಿ ಪರ ವಾದಿಸುತ್ತಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ರಾಹುಲ್ ಸಲ್ಲಿಸಿರುವ ಅಫಿದವಿತ್ನಲ್ಲಿ ದೋಷಗಳಿವೆ. ಸರಿಪಡಿಸಿ, ಸೋಮವಾರದೊಳಗೆ ಪುನಃ ಸಲ್ಲಿಸುವುದಾಗಿಯೂ, ರಾಹುಲ್ ಕ್ಷಮೆ ಕೇಳುತ್ತಾರೆ ಎಂದೂ ತಿಳಿಸಿದರು.
ಚೌಕೀದಾರ ಕಳ್ಳ ಅಂತ ಸುಪ್ರೀಂ ಕೋರ್ಟೇ ಹೇಳಿದೆ ಎನ್ನುತ್ತಾ ಚುನಾವಣಾ ಭಾಷಣಗಳಲ್ಲಿ, ಹೋದಲ್ಲೆಲ್ಲಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲಾಗಿತ್ತು. ಈ ಮೊದಲು ವಿಚಾರಣೆ ಸಂದರ್ಭದಲ್ಲಿ ಎರಡು ಬಾರಿಯೂ ಕ್ಷಮೆ ಕೇಳಲು ನಿರಾಕರಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದಷ್ಟೇ ಹೇಳಿದ್ದರು. ಮಾತಿನ ಭರದಲ್ಲಿ, ಚುನಾವಣೆಯ ಗಡಿಬಿಡಿಯಲ್ಲಿ ಇಂಥ ಹೇಳಿಕೆ ನೀಡಿರುವುದಾಗಿ ಸಮರ್ಥಿಸಿಕೊಂಡಿದ್ದರು.
ಆದರೆ, ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿರಿಸಿದ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ಮುಖ್ಯಸ್ಥರು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತೀವ್ರವಾಗಿ ಕಿಡಿ ಕಾರಿದ ಸುಪ್ರೀಂ ಕೋರ್ಟ್, ಮೇಲ್ಮನವಿಯಲ್ಲಿ ಒಂದು ರೀತಿ, ನ್ಯಾಯಾಲಯದಲ್ಲಿ ಒಂದು ರೀತಿ ನುಡಿಯುತ್ತಿದ್ದು, ತಪ್ಪು ಒಪ್ಪಿಕೊಳ್ಳುವಂತೆ ಸೂಚಿಸಿತು.
ಹೊಸದಾಗಿ ಅಫಿದವಿತ್ ಸಲ್ಲಿಸಲು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದು, ಕ್ಷಮೆ ಯಾಚಿಸಲು ಸಿದ್ಧರಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ತಮ್ಮ ರಾಜಕೀಯ ನಿಲುವು ತಮ್ಮೊಳಗೇ ಇರಲಿ, ನ್ಯಾಯಾಲಯವನ್ನು ಇದಕ್ಕೆ ಎಳೆದು ತರುವುದು ಬೇಡ ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.
ಏಪ್ರಿಲ್ 22ರಂದು ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ತಮ್ಮ ರಾಜಕೀಯ ಭಾಷಣದ ಅಭಿಪ್ರಾಯಕ್ಕೆ ನ್ಯಾಯಾಲಯವನ್ನು ಎಳೆದು ತರುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ್ದರು.
ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ತಮ್ಮ ಅಫಿದವಿತ್ ಸಲ್ಲಿಸಿದ ರಾಹುಲ್, ಚೌಕೀದಾರ್ ಚೋರ್ ಹೈ ಎಂದು ನ್ಯಾಯಾಲಯವು ಎಲ್ಲೂ ಹೇಳಿಲ್ಲ ಎಂದಿದ್ದರು. ಈ ಕುರಿತ ಮುಂದಿನ ವಿಚಾರಣೆ ಮೇ 6ಕ್ಕೆ ನಿಗದಿಯಾಗಿದೆ.
ಈ ಮೊದಲು ಎರಡು ಬಾರಿಯೂ ಅವರು ವಿಷಾದ ವ್ಯಕ್ತಪಡಿಸಿ, ನ್ಯಾಯಾಂಗ ನಿಂದನೆ ಆರೋಪದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು. ಈ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿದ್ದು ಸಾಕಾಗುವುದಿಲ್ಲ. ತಪ್ಪು ಒಪ್ಪಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು.
ವಿಷಾದ ಸೂಚಿಸುವುದಕ್ಕಾಗಿ 22 ಪುಟಗಳ ಅಫಿದವಿತ್ ಬಳಸಿಕೊಳ್ಳಬೇಕಾಯಿತೇ ಎಂದು ನ್ಯಾಯಾಲಯವು ರಾಹುಲ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಒಂದು ಕಡೆ ರಾಹುಲ್ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ, ಮತ್ತೊಂದು ಕಡೆ ನ್ಯಾಯಾಂಗ ನಿಂದನೆಯಾಗುವಂಥ ಹೇಳಿಕೆ ನೀಡಿಯೇ ಇಲ್ಲ ಎನ್ನುತ್ತಾರೆ ಎಂದಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು, ವಿಷಾದ ಎಂಬ ಪದವನ್ನು ಆವರಣದಲ್ಲಿ (ಬ್ರಾಕೆಟ್) ಬರೆದಿರುವ ಅರ್ಥವಾದರೂ ಏನು ಎಂದು ಪ್ರಶ್ನಿಸಿತು.
ರಾಹುಲ್ ಗಾಂಧಿ ಪರ ವಾದಿಸುತ್ತಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ರಾಹುಲ್ ಸಲ್ಲಿಸಿರುವ ಅಫಿದವಿತ್ನಲ್ಲಿ ದೋಷಗಳಿವೆ. ಸರಿಪಡಿಸಿ, ಸೋಮವಾರದೊಳಗೆ ಪುನಃ ಸಲ್ಲಿಸುವುದಾಗಿಯೂ, ರಾಹುಲ್ ಕ್ಷಮೆ ಕೇಳುತ್ತಾರೆ ಎಂದೂ ತಿಳಿಸಿದರು.
ಚೌಕೀದಾರ ಕಳ್ಳ ಅಂತ ಸುಪ್ರೀಂ ಕೋರ್ಟೇ ಹೇಳಿದೆ ಎನ್ನುತ್ತಾ ಚುನಾವಣಾ ಭಾಷಣಗಳಲ್ಲಿ, ಹೋದಲ್ಲೆಲ್ಲಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲಾಗಿತ್ತು. ಈ ಮೊದಲು ವಿಚಾರಣೆ ಸಂದರ್ಭದಲ್ಲಿ ಎರಡು ಬಾರಿಯೂ ಕ್ಷಮೆ ಕೇಳಲು ನಿರಾಕರಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದಷ್ಟೇ ಹೇಳಿದ್ದರು. ಮಾತಿನ ಭರದಲ್ಲಿ, ಚುನಾವಣೆಯ ಗಡಿಬಿಡಿಯಲ್ಲಿ ಇಂಥ ಹೇಳಿಕೆ ನೀಡಿರುವುದಾಗಿ ಸಮರ್ಥಿಸಿಕೊಂಡಿದ್ದರು.
ಆದರೆ, ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿರಿಸಿದ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ಮುಖ್ಯಸ್ಥರು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತೀವ್ರವಾಗಿ ಕಿಡಿ ಕಾರಿದ ಸುಪ್ರೀಂ ಕೋರ್ಟ್, ಮೇಲ್ಮನವಿಯಲ್ಲಿ ಒಂದು ರೀತಿ, ನ್ಯಾಯಾಲಯದಲ್ಲಿ ಒಂದು ರೀತಿ ನುಡಿಯುತ್ತಿದ್ದು, ತಪ್ಪು ಒಪ್ಪಿಕೊಳ್ಳುವಂತೆ ಸೂಚಿಸಿತು.
ಹೊಸದಾಗಿ ಅಫಿದವಿತ್ ಸಲ್ಲಿಸಲು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದು, ಕ್ಷಮೆ ಯಾಚಿಸಲು ಸಿದ್ಧರಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ತಮ್ಮ ರಾಜಕೀಯ ನಿಲುವು ತಮ್ಮೊಳಗೇ ಇರಲಿ, ನ್ಯಾಯಾಲಯವನ್ನು ಇದಕ್ಕೆ ಎಳೆದು ತರುವುದು ಬೇಡ ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.
ಏಪ್ರಿಲ್ 22ರಂದು ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ತಮ್ಮ ರಾಜಕೀಯ ಭಾಷಣದ ಅಭಿಪ್ರಾಯಕ್ಕೆ ನ್ಯಾಯಾಲಯವನ್ನು ಎಳೆದು ತರುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ್ದರು.
ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ತಮ್ಮ ಅಫಿದವಿತ್ ಸಲ್ಲಿಸಿದ ರಾಹುಲ್, ಚೌಕೀದಾರ್ ಚೋರ್ ಹೈ ಎಂದು ನ್ಯಾಯಾಲಯವು ಎಲ್ಲೂ ಹೇಳಿಲ್ಲ ಎಂದಿದ್ದರು. ಈ ಕುರಿತ ಮುಂದಿನ ವಿಚಾರಣೆ ಮೇ 6ಕ್ಕೆ ನಿಗದಿಯಾಗಿದೆ.