ಆ್ಯಪ್ನಗರ

ಸಂತಾಪ ಸೂಚಿಸಲು ಹೋಗಿ ಪೇಚಿಗೆ ಸಿಲುಕಿದ ರಾಹುಲ್‌ ಗಾಂಧಿ!

ದಿವಂಗತ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್‌ಗೆ ಸಂತಾಪ ಸೂಚಿಸಲು ಹೋಗಿ ನೆಟಿಜನ್‌ಗಳ ಟ್ರೋಲ್‌ಗೆ ಕಾರಣವಾಗಿದ್ದಾರೆ.

ET Online 17 Sep 2017, 6:40 pm
ಹೊಸದಿಲ್ಲಿ: ಸದಾ ತಪ್ಪು ಹೇಳಿಕೆ, ತಪ್ಪು ಟ್ವೀಟ್‌ ನಿಂದಲೇ ಫೇಮಸ್‌ ಆಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪೇಚಿಗೆ ಸಿಲುಕಿದ್ದು, ದಿವಂಗತ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್‌ಗೆ ಸಂತಾಪ ಸೂಚಿಸಲು ಹೋಗಿ ನೆಟಿಜನ್‌ಗಳ ಟ್ರೋಲ್‌ಗೆ ಕಾರಣವಾಗಿದ್ದಾರೆ.
Vijaya Karnataka Web rahul gandhi goofs up again terms marshal of iaf arjan singh air marshal
ಸಂತಾಪ ಸೂಚಿಸಲು ಹೋಗಿ ಪೇಚಿಗೆ ಸಿಲುಕಿದ ರಾಹುಲ್‌ ಗಾಂಧಿ!


ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್ ಟ್ವೀಟ್ ಮಾಡಿದ್ದು ಅದರಲ್ಲಿ 'ಏರ್ ಮಾರ್ಷಲ್' ಎಂದು ಬರೆದಿದ್ದಾರೆ. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಏರ್‌ ಮಾರ್ಷಲ್‌ಗೂ ಮಾರ್ಷಲ್‌ಗೂ ಇರುವ ವ್ಯತ್ಯಾಸ ತಿಳಿಯುವುದಿಲ್ಲವೇ ಎಂದು ಹಲವರು ರಾಹುಲ್‌ರನ್ನು ಜರಿದಿದ್ದಾರೆ.



ರಾಹುಲ್‌ ತಮ್ಮ ಟ್ವೀಟ್‌ನಲ್ಲಿ ''ಸೈನಿಕ ಮತ್ತು ರಾಜತಾಂತ್ರಿಕ ಶ್ರೇಷ್ಠತೆಯ, ವಾಯುಪಡೆಯ ಏರ್ ಮಾರ್ಷಲ್ ಅರ್ಜನ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಭಾರತ ನಿಜವಾದ ಹಿರೋವನ್ನು ಕಳೆದುಕೊಂಡಿದೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಆದರೆ ಏರ್ ಮಾರ್ಷಲ್ 3 ಸ್ಟಾರ್ ಶ್ರೇಣಿಯವರಾಗಿದ್ದರೆ, ಮಾರ್ಷಲ್ 5 ಸ್ಟಾರ್ ಶ್ರೇಣಿಯ ಹುದ್ದೆಯಾಗಿದೆ. ಹೀಗಾಗಿ ಹಲವು ಟ್ವಿಟರಾತಿಗಳು ರಾಹುಲ್‌ಗೆ ಮಂಗಳಾರತಿ ಮಾಡಿದ್ದಾರೆ.

ತೀವ್ರ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಶನಿವಾರದಂದು ಕೊನೆಯುಸಿರೆಳೆದಿದ್ದರು. ಇವರ ನಿಧನಕ್ಕೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

rahul gandhi goofs up again, terms marshal of iaf arjan singh air marshal

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ