ಆ್ಯಪ್ನಗರ

ಕೈಲಾಸ ಮಾನಸ ಸರೋವರ ಯಾತ್ರೆಗೆ ರಾಹುಲ್‌ ಸಿದ್ಧತೆ

ಈ ತಿಂಗಳ ಅಂತ್ಯದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀರ್ಮಾನಿಸಿದ್ದಾರೆ...

Vijaya Karnataka 30 Aug 2018, 10:47 am
ಹೊಸದಿಲ್ಲಿ: ಈ ತಿಂಗಳ ಅಂತ್ಯದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀರ್ಮಾನಿಸಿದ್ದಾರೆ. ಕೈಲಾಸ ಯಾತ್ರೆ ಸೆಪ್ಟೆಂಬರ್‌ 8ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ರಾಹುಲ್‌ ಶಿವನ ದರ್ಶನ ಪಡೆಯಲಿದ್ದಾರೆ.
Vijaya Karnataka Web rahul


ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಏಪ್ರಿಲ್‌ನಲ್ಲಿ ನಡೆದ 'ಜನ ಆಕ್ರೋಶ್‌ ರಾರ‍ಯಲಿ' ಮತ್ತು ಗುಜರಾತ್‌, ಕರ್ನಾಟಕ ಚುನಾವಣೆ ರಾರ‍ಯಲಿಗಳಲ್ಲಿ ತಾನು ಶಿವ ಭಕ್ತನೆಂದು ಭಾವನಾತ್ಮಕವಾಗಿ ಹೇಳಿದ್ದರು. ಜತೆಗೆ ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ವಿಮಾನ ಅಪಘಾತದಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಂಡ ಸಮಯದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಅಭಿಲಾಷೆ ವ್ಯಕ್ತಪಡಿಸಿದ್ದರು. ರಾಹುಲ್‌ ಪ್ರಯಾಣಿಸುತ್ತಿದ್ದ ವಿಮಾನ ಕೆಲವು ನಿಮಿಷಗಳ ಕಾಲ ರೆಡಾರ್‌ ಸಂಪರ್ಕ ಕಡಿತಗೊಂಡು ಆತಂಕ ಸೃಷ್ಟಿಸಿತ್ತು.

ಗುಜರಾತ್‌ ಮತ್ತು ಕರ್ನಾಟಕ ಚುನಾವಣೆ ಸಂದರ್ಭಗಳಲ್ಲಿ ರುದ್ರಾಕ್ಷಿ ಧರಿಸಿ, ಶಿವ ದೇಗುಲಗಳಿಗೆ ಭೇಟಿ ನೀಡಿ, ತಾವು ಶಿವಭಕ್ತರೆಂದು ರಾಹುಲ್‌ ಬಿಂಬಿಸಿಕೊಂಡಿದ್ದರು.2015ರಲ್ಲಿ ಅವರು ಕೇದರ್‌ನಾಥ್‌ಗೆ ಪಾದಯಾತ್ರೆ ಕೈಗೊಂಡಿದ್ದರು.

ರಾಹುಲ್‌ ಕೈಲಾಸ ಯಾತ್ರೆ ಕುರಿತು ಇದುವರೆಗೂ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ. ಯಾತ್ರೆ ಚೀನಾ ಮೂಲಕ ಹಾದುಹೋಗುವುದರಿಂದ ಇಲಾಖೆಯಿಂದ ಮೊದಲೇ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ