ಆ್ಯಪ್ನಗರ

ಉದ್ಧವ್‌ಗೆ ರಾಹುಲ್‌ ಶುಭಾಶಯ: ರಾಜಕೀಯವಿಲ್ಲ ಎಂದ ಶಿವಸೇನೆ

ಲೋಕಸಭೆ ಕಲಾಪದಲ್ಲಿ ಪ್ರಧಾನಿಯ ಆಲಂಗಿನದಂತಹ ಅಚ್ಚರಿಯ ನಡೆಗಳ ಮೂಲಕ ದೇಶದ ಗಮನ ಸೆಳೆಯುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅನಿರೀಕ್ಷಿತ ನಡೆಯ ಮೂಲಕ ರಾಜಕೀಯ ವಲಯದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

Vijaya Karnataka 28 Jul 2018, 9:40 am
ಮುಂಬಯಿ: ಲೋಕಸಭೆ ಕಲಾಪದಲ್ಲಿ ಪ್ರಧಾನಿಯ ಆಲಂಗಿನದಂತಹ ಅಚ್ಚರಿಯ ನಡೆಗಳ ಮೂಲಕ ದೇಶದ ಗಮನ ಸೆಳೆಯುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅನಿರೀಕ್ಷಿತ ನಡೆಯ ಮೂಲಕ ರಾಜಕೀಯ ವಲಯದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
Vijaya Karnataka Web Rahul Gandhi 1


ಶುಕ್ರವಾರ 58ನೇ ಜನುಮದಿನ ಆಚರಿಸಿಕೊಂಡ ಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ಅವರಿಗೆ ರಾಹುಲ್‌ ಗಾಂಧಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

''ಶ್ರೀ ಉದ್ಧವ್‌ ಠಾಕ್ರೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ಹರ್ಷ ದೊರೆಯಲೆಂದು ಶುಭ ಕೋರುತ್ತೇನೆ,'' ಎಂದು ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ಮತ್ತು ಕಾಂಗ್ರೆಸ್‌ ಇದರಲ್ಲಿ ರಾಜಕೀಯ ಅರ್ಥ ಕಲ್ಪಿಸುವಂಥದ್ದೇನೂ ಇಲ್ಲ ಎಂದು ಸ್ಪಷ್ಟಪಡಿಸಿವೆ.

''ಉದ್ಧವ್‌ ಅವರಿಗೆ ದೇಶದ ವಿವಿಧ ಭಾಗಗಳಿಂದ ಮತ್ತು ಹೊರಗಿನಿಂದಲೂ ಶುಭಾಶಯಗಳು ಬಂದಿವೆ. ರಾಹುಲ್‌ ಗಾಂಧಿ ಬಹಿರಂಗವಾಗಿಯೇ ಶುಭ ಹಾರೈಸಿ ಟ್ವೀಟ್‌ ಮಾಡಿದ್ದಾರೆ,'' ಎಂದು ಶಿವಸೇನೆ ಮುಖಂಡ ಸಂಜಯ್‌ ರಾವುತ್‌ ಹೇಳಿದ್ದಾರೆ.

ನಿಗೂಢ ನಡೆ: ಬಿಜೆಪಿ ಜತೆ ಶಿವಸೇನೆಯ ಸಂಬಂಧ ಮುರಿದು ಬೀಳುವ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ನಾಯಕನ ನಡೆ ಕುತೂಹಲ ಮೂಡಿಸಿದೆ.

ಮೋದಿಯಿಂದಲೂ ಶುಭ ಹಾರೈಕೆ: ಈ ಮಧ್ಯೆ, ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೂ ಉದ್ಧವ್‌ಗೆ ಶುಭ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ