ಹೈದರಾಬಾದ್: ಕೇರಳದ ವಯನಾಡ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೆಲುವು ಸಾಧಿಸಿರುವುದಕ್ಕೆ ಕಾರಣ ಆ ಕ್ಷೇತ್ರದಲ್ಲಿ ಶೇ.40ರಷ್ಟಿರುವ ಮುಸ್ಲಿಂ ಮತದಾರರು ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ''ಕಾಂಗ್ರೆಸ್ ಈಗಲೂ ಮುಸ್ಲಿಂ ಸಮುದಾಯವನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದೆಯೇ ವಿನಾ ಆ ಸಮುದಾಯವರಿಗಾಗಿ ಏನನ್ನೂ ಮಾಡುತ್ತಿಲ್ಲ. ಕಾಂಗ್ರೆಸ್ ಈಗ ಸಂಪೂರ್ಣ ಬಲಹೀನವಾಗಿದೆ. ಕಠಿಣ ಪರಿಶ್ರಮದಿಂದ ಪಕ್ಷ ಬೆಳೆಸುವ ಸಾಮರ್ಥ್ಯವನ್ನೂ ಉಳಿಸಿಕೊಂಡಿಲ್ಲ,'' ಎಂದು ಟೀಕಿಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿರೋಧ ತೋರಿರುವುದು ಪ್ರಾದೇಶಿಕ ಪಕ್ಷಗಳೇ ವಿನಾ ರಾಷ್ಟ್ರೀಯ ಪಕ್ಷಗಳಲ್ಲ ಎಂದು ಒವೈಸಿ ಹೇಳಿದರು.
ವಯನಾಡ್ನಲ್ಲಿ ರಾಹುಲ್ ಗೆದ್ದಿದ್ದು ಮುಸ್ಲಿಂ ಮತಗಳಿಂದ ಎಂದ ಒವೈಸಿ
ಕಾಂಗ್ರೆಸ್ ಈಗ ಸಂಪೂರ್ಣ ಬಲಹೀನವಾಗಿದೆ. ಕಠಿಣ ಪರಿಶ್ರಮದಿಂದ ಪಕ್ಷ ಬೆಳೆಸುವ ಸಾಮರ್ಥ್ಯವನ್ನೂ ಉಳಿಸಿಕೊಂಡಿಲ್ಲ ಎಂದು ಒವೈಸಿ ಟೀಕಿಸಿದರು.
PTI 11 Jun 2019, 5:00 am