ಆ್ಯಪ್ನಗರ

ರಾಹುಲ್ ಗಾಂಧಿ 'ಸುವರ್ಣ ಸ್ಪರ್ಶ'ಕ್ಕೆ ಪುದುಚೆರಿ ಸರ್ಕಾರವೇ ಪತನ: ಬಿಜೆಪಿ ಲೇವಡಿ

ರಾಹುಲ್ ಗಾಂಧಿ ಪುದುಚೆರಿಗೆ ಕಾಲಿಟ್ಟ ಬಳಿಕ ಅವರ ‘ಸುವರ್ಣ ಸ್ಪರ್ಶ’ದಿಂದ ಸರ್ಕಾರ ಪತನವಾಗಿದೆ ಎಂದು ಮಾಳವೀಯ ಲೇವಡಿ ಮಾಡಿದ್ದಾರೆ. 33 ಸದಸ್ಯ ಬಲದ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯಲ್ಲಿ ಅಲ್ಲಿನ ಸಿಎಂ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ.

TNN 22 Feb 2021, 4:23 pm

ಹೈಲೈಟ್ಸ್‌:

  • ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಪುದುಚೆರಿ ಸಿಎಂ
  • ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ನಿರ್ಗಮಿತ ಸಿಎಂ
  • ರಾಹುಲ್ ಕಾಲಿಟ್ಟ ಬಳಿಕ ಸರ್ಕಾರವೇ ಬಿದ್ದು ಹೋಯ್ತು ಎಂದು ಬಿಜೆಪಿ ಟೀಕೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rahul Gandhi
ರಾಹುಲ್ ಗಾಂಧಿ 'ಸುವರ್ಣ ಸ್ಪರ್ಶ'ಕ್ಕೆ ಪುದುಚೆರಿ ಸರ್ಕಾರವೇ ಪತನ: ಬಿಜೆಪಿ ಲೇವಡಿ
ಹೊಸ ದಿಲ್ಲಿ: ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾದ ಕೂಡಲೇ ಬಿಜೆಪಿ ಪಕ್ಷವು ರಾಹುಲ್ ಗಾಂಧಿ ಕಾಲೆಳೆದಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಕೇವಲ 3 ರಾಜ್ಯಗಳಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ, ಇದು ರಾಹುಲ್ ಗಾಂಧಿ ಸಾಧನೆ ಎಂದು ಬಿಜೆಪಿ ಕುಟುಕಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, ಕಾಂಗ್ರೆಸ್ ಪಕ್ಷ ಇದೀಗ ಕೇವಲ ಪಂಜಾಬ್, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ. ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ತಿಣುಕಾಡುತ್ತಿದೆ. ಗಾಂಧಿ ಪರಿವಾರದ ಯಾರೂ ಮಾಡದ ಸಾಧನೆಯನ್ನು ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಅಮಿತ್ ಮಾಳವೀಯ ಟ್ವೀಟಿಸಿದ್ದಾರೆ.


ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಅಮಿತ್ ಮಾಳವೀಯ ಟ್ವೀಟ್‌ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪುದುಚೆರಿಯಲ್ಲಿ ಮತ್ತೋರ್ವ ಕಾಂಗ್ರೆಸ್‌ ಶಾಸಕ ರಾಜೀನಾಮೆ, ಪತನದತ್ತ ಕೈ ಸರಕಾರ
ರಾಹುಲ್ ಗಾಂಧಿ ಪುದುಚೆರಿಗೆ ಕಾಲಿಟ್ಟ ಬಳಿಕ ಅವರ ‘ಸುವರ್ಣ ಸ್ಪರ್ಶ’ದಿಂದ ಸರ್ಕಾರ ಪತನವಾಗಿದೆ ಎಂದು ಮಾಳವೀಯ ಲೇವಡಿ ಮಾಡಿದ್ದಾರೆ. 33 ಸದಸ್ಯ ಬಲದ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯಲ್ಲಿ ಅಲ್ಲಿನ ಸಿಎಂ ಬಹುಮತ ಸಾಬೀತುಪಡಿಸಲು ವಿಫಲವಾದ ಬೆನ್ನಲ್ಲೇ, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.

ಪುದುಚೆರಿಯಲ್ಲಿ ಸೋಮವಾರ ವಿಶ್ವಾಸಮತ, ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ
ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ನಾರಾಯಣಸಾಮಿ

ಪುದುಚೆರಿಯ ನಿರ್ಗಮಿತ ಸಿಎಂ ವಿ. ನಾರಾಯಣ ಸಾಮಿ, ತಮ್ಮ ಸರ್ಕಾರ ಪತನ ಆಗೋದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಸರ್ಕಾರಕ್ಕೆ ಕೇಂದ್ರದಿಂದ ಅನುದಾನವೇ ಸಿಗಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಸ್ಪೀಕರ್‌ ವಿರುದ್ಧವೂ ನಾರಾಯಣ ಸಾಮಿ ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ