ಆ್ಯಪ್ನಗರ

ಬಿಜೆಪಿಯೇತರ ರಾಜ್ಯಗಳ ಅಭಿವೃದ್ಧಿಗೆ ಮೋದಿ ಕಡೆಗಣನೆ

ಮೋದಿ ಅವರು ಶನಿವಾರ ತ್ರಿಶ್ಶೂರು ಜಿಲ್ಲೆಯ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದ ಸಂದರ್ಭದಲ್ಲಿ ಕೇರಳವನ್ನು ವಾರಾಣಸಿಯಷ್ಟೇ ಪ್ರೀತಿಸುವೆ ಎಂದಿದ್ದರು.

Agencies 10 Jun 2019, 5:00 am
ವಯನಾಡ್‌ : ತಮಗೆ ಕೇರಳವೂ ವಾರಾಣಸಿಯಷ್ಟೇ ಅಚ್ಚುಮೆಚ್ಚು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಕೇವಲ ರಾಜಕೀಯ ತಂತ್ರ. ಏಕೆಂದರೆ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳ ಬಗ್ಗೆ ಅವರು ಮಲತಾಯಿ ಧೋರಣೆ ಹೊಂದಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Vijaya Karnataka Web rahul picks holes in pms kerala dear to me remark accuses him of bias
ಬಿಜೆಪಿಯೇತರ ರಾಜ್ಯಗಳ ಅಭಿವೃದ್ಧಿಗೆ ಮೋದಿ ಕಡೆಗಣನೆ


ಮೂರು ದಿನಗಳ ವಯನಾಡ್‌ ಪ್ರವಾಸದಲ್ಲಿರುವ ರಾಹುಲ್‌ ಭಾನುವಾರವೂ ಕ್ಷೇತ್ರದ ಹಲವೆಡೆ ರೋಡ್‌ ಶೋ ನಡೆಸಿದರು. ಕೊಯಿಕ್ಕೋಡ್‌ ಜಿಲ್ಲೆಯ ಇಂಗಪ್ಪುಳದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ಪ್ರಧಾನಿ ಮೋದಿ ಅವರು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ಸಮಾನ ದೃಷ್ಟಿಯಲ್ಲಿ ನೋಡುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಎಸಗುತ್ತಾರೆ. ಬರೀ ಬಾಯಿಮಾತಿಗಷ್ಟೇ ಕೇರಳವೂ ವಾರಾಣಸಿಯಷ್ಟೇ ಪ್ರಿಯವಾದದ್ದು ಎನ್ನುತ್ತಾರೆ. ವಯನಾಡ್‌ ಅಭಿವೃದ್ಧಿಯಲ್ಲಿ ಅವರಿಂದ ಸಹಕಾರ ಸಿಗುತ್ತದೆ ಎಂದು ಅಪೇಕ್ಷಿಸುವಂತಿಲ್ಲ. ಏಕೆಂದರೆ ಇಲ್ಲಿ ಬಿಜೆಪಿ ಆಡಳಿತದಲ್ಲಿಲ್ಲ,'' ಎಂದು ವಾಗ್ದಾಳಿ ನಡೆಸಿದರು.

ಮೋದಿ ಅವರು ಶನಿವಾರ ತ್ರಿಶ್ಶೂರು ಜಿಲ್ಲೆಯ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದ ಸಂದರ್ಭದಲ್ಲಿ ಕೇರಳವನ್ನು ವಾರಾಣಸಿಯಷ್ಟೇ ಪ್ರೀತಿಸುವೆ ಎಂದಿದ್ದರು.

''ಬಿಜೆಪಿಯು ವರ್ಗಗಳ ಮಧ್ಯೆ ದ್ವೇಷ ಭಾವನೆ ಬಿತ್ತುತ್ತಿದೆ. ಆರೆಸ್ಸೆಸ್‌ ವಿಚಾರಧಾರೆಯನ್ನು ಒಪ್ಪದವರನ್ನು ಭಾರತೀಯರೇ ಅಲ್ಲ ಎಂದು ಬಿಂಬಿಸುತ್ತಿದೆ. ಇಂತಹ ಆರೆಸ್ಸೆಸ್‌ ಹಾಗೂ ಬಿಜೆಪಿ ವಿರುದ್ಧ ಹೋರಾಡಬೇಕಿದೆ,'' ಎಂದೂ ರಾಹುಲ್‌ ಹೇಳಿದರು.


ತನ್ನನ್ನು ಮೊದಲು ಎತ್ತಿಕೊಂಡ ನರ್ಸ್‌ ಭೇಟಿಯಾದ ರಾಹುಲ್‌
ದಿಲ್ಲಿಯ ಆಸ್ಪತ್ರೆಯಲ್ಲಿ ತಾವು ಜನಿಸಿದ ಸಂದರ್ಭದಲ್ಲಿ ಮೊದಲಿಗೆ ಎತ್ತಿಕೊಂಡ 72 ವರ್ಷದ ನರ್ಸ್‌ ರಾಜಮ್ಮ ವವಥಿಲ್‌ ಅವರನ್ನು ರಾಹುಲ್‌ ಗಾಂಧಿ ಭಾನುವಾರ ವಯನಾಡ್‌ನಲ್ಲಿ ಭೇಟಿಯಾಗಿ ಆತ್ಮೀಯತೆ ತೋರಿದರು. 1970ರ ಜೂನ್‌ 19ರಂದು ರಾಹುಲ್‌ ದಿಲ್ಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ್ದಾರೆ. ಆಗ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಜಮ್ಮ ಅವರೇ ಸೋನಿಯಾ ಗಾಂಧಿಯವರಿಗೆ ಹೆರಿಗೆಯಾದ ಬಳಿಕ ಮಗುವನ್ನು ಎತ್ತಿಕೊಂಡು ತಂದೆ ರಾಜೀವ್‌ ಗಾಂಧಿ ಅವರ ಕೈಗೆ ಕೊಟ್ಟಿದ್ದರು. ರಾಹುಲ್‌ ಭೇಟಿಯಿಂದ ಪುಳಕಿತಗೊಂಡ ರಾಜಮ್ಮ ಅವರು, ಕಾಂಗ್ರೆಸ್‌ ಅಧ್ಯಕ್ಷರಿಗೆ ಹಲಸಿನ ಚಿಫ್ಸ್‌ ಹಾಗೂ ಕೇರಳದ ಒಂದಷ್ಟು ಸಿಹಿ ತಿನಿಸುಗಳನ್ನು ನೀಡಿದರು. ರಾಹುಲ್‌, ನಿವೃತ್ತ ದಾದಿಯನ್ನು ಅಪ್ಪಿಕೊಂಡು ಪ್ರೀತಿ ತೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ