ಆ್ಯಪ್ನಗರ

ಮೈತ್ರಿಕೂಟದ ನಾಯಕರನ್ನು ಘೋಷಿಸಿ: ರಾಹುಲ್‌ಗೆ ಶಾ ಸವಾಲು

ರಾಜಸ್ಥಾನದ ಜೈಪುರದಲ್ಲಿ ನಡೆದ ಶಕ್ತಿ ಕೇಂದ್ರ ಸಮ್ಮೇಳನದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಶಾ, ಬಿಜೆಪಿ ವಿರುದ್ಧ ಕಟ್ಟಿಕೊಂಡಿರುವ ಮಹಾಘಟಬಂಧನ್ ಕೇವಲ ಮೋದಿ ಹಠಾವೋ ಎಂಬ ಘೋಷಣೆಯೊಂದಿಗೆ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು ಮತ್ತು ಮೊದಲು ಮೈತ್ರಿಕೂಟದ ನಾಯಕರು ಯಾರು ಎಂದು ರಾಹುಲ್ ಗಾಂಧಿ ಅವರು ಘೋಷಿಸಲಿ ಎಂದು ಹೇಳಿದರು.

TIMESOFINDIA.COM 18 Feb 2019, 3:14 pm
ಜೈಪುರ: ನೀವು ರಚಿಸಿಕೊಂಡಿರುವ ಮಹಾ ಮೈತ್ರಿಕೂಟದ ನಾಯಕರು ಯಾರೆಂದು ಘೋಷಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.
Vijaya Karnataka Web Amith Shah 2


ರಾಜಸ್ಥಾನದ ಜೈಪುರದಲ್ಲಿ ನಡೆದ ಶಕ್ತಿ ಕೇಂದ್ರ ಸಮ್ಮೇಳನದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಬಿಜೆಪಿ ವಿರುದ್ಧ ಕಟ್ಟಿಕೊಂಡಿರುವ ಮಹಾಘಟಬಂಧನ್ ಕೇವಲ ಮೋದಿ ಹಠಾವೋ ಎಂಬ ಘೋಷಣೆಯೊಂದಿಗೆ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು ಮತ್ತು ಮೊದಲು ಮೈತ್ರಿಕೂಟದ ನಾಯಕರು ಯಾರು ಎಂದು ರಾಹುಲ್ ಗಾಂಧಿ ಅವರು ಘೋಷಿಸಲಿ ಎಂದು ಹೇಳಿದರು.

ಪುಲ್ವಾಮಾ ಉಗ್ರ ದಾಳಿಯನ್ನು ಪ್ರಸ್ತಾಪಿಸಿದ ಅವರು, ಯೋಧರ ಬಲಿದಾನ ವ್ಯರ್ಥವಾಗಲು ಮೋದಿ ಸರಕಾರ ಅವಕಾಶ ಕೊಡುವುದಿಲ್ಲ. ಉಗ್ರವಾದದ ವಿರುದ್ಧ ನಾವು ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದ್ದೇವೆ ಎಂದರು.

ಬಿಜೆಪಿಯವರು ಸೋತರೆ ನಿರಾಶರಾಗುವುದಿಲ್ಲ ಮತ್ತು ಗೆದ್ದರೆ ಉಬ್ಬಿ ಹೋಗುವುದಿಲ್ಲ. ನಾವು ಕೇವಲ ಜನರಿಗೆ ಸೇವೆ ಮಾಡಲು ರಾಜಕೀಯದಲ್ಲಿದ್ದೇವೆ. 2019ರ ಲೋಕಸಭಾ ಚುನಾವಣೆ ದೇಶ ಮತ್ತು ಬಿಜೆಪಿ ಪಾಲಿಗೆ ಬಹಳ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಕೂಡ ಇದೇ ಪ್ರಶ್ನೆ ಎತ್ತಿದ್ದ ಶಾ, ನಮ್ಮ ನಾಯಕರು ಯಾರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ. ಅವರು ಚುನಾವಣೆಯಲ್ಲಿ ಗೆದ್ದರೆ ಏನಾಗುತ್ತದೆ ಗೊತ್ತೇ? ಸೋಮವಾರ ಮಾಯಾವತಿ , ಅಖಿಲೇಶ್ ಯಾದವ್ ಮಂಗಳವಾರ, ಬುಧವಾರಕ್ಕೆ ಮಮತಾ ಬ್ಯಾನರ್ಜಿ, ಗುರುವಾರ ಶರದ್ ಪವಾರ್, ಶುಕ್ರವಾರ ದೇವೇಗೌಡ ಪ್ರಧಾನಿಯಾದರೆ, ಶನಿವಾರ ಎಂಕೆ ಸ್ಟಾಲಿನ್ ಪ್ರಧಾನಿಯಾಗುತ್ತಾರೆ ಮತ್ತು ಭಾನುವಾರ ಇಡೀ ದೇಶಕ್ಕೆ ರಜಾ ದಿನ' ಎಂದು ವ್ಯಂಗ್ಯವಾಡಿದ್ದರು. ಜತೆಗೆ ಅವರಿಗೆ ಕೇವಲ ಅಧಿಕಾರದ ಚಿಂತೆ, ಆದರೆ, ಅವರಲ್ಲಿ ನಾಯಕ ಇಲ್ಲ ಮತ್ತು ಅದನ್ನು ನಡೆಸಲು ನೀತಿಯೂ ಇಲ್ಲ ಎಂದು ಟೀಕಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ