ಆ್ಯಪ್ನಗರ

'ಗಾಂಧಿಯನ್ನು ಕೊಂದಿದ್ದು ಆರ್‌ಎಸ್ಎಸ್' ಹೇಳಿಕೆಗೆ ಬದ್ಧ: ವಿಚಾರಣೆ ಎದುರಿಸಲು ಮುಂದಾದ ರಾಹುಲ್

ಮಹಾತ್ಮ ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧ ಕಲ್ಪಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಏಜೆನ್ಸೀಸ್ 1 Sep 2016, 3:40 pm
ಹೊಸದಿಲ್ಲಿ: ಮಹಾತ್ಮ ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧ ಕಲ್ಪಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೇಳಿಕೆಯಿಂದ ಹಿಂದೆ ಸರಿದಿದ್ದ ರಾಹುಲ್, ಪ್ರಕರಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಇದೀಗ ಮತ್ತೆ, 'ನನ್ನ ಹೇಳಿಕೆಗೆ ಬದ್ಧವಾಗಿದ್ದು, ವಿಚಾರಣೆ ಎದುರಿಸಲು ಸಿದ್ಧ'ವೆಂದು ಗುರುವಾರ ಹೇಳಿದ್ದಾರೆ.
Vijaya Karnataka Web rahul wont retract rss men killed gandhi comment will face trial
'ಗಾಂಧಿಯನ್ನು ಕೊಂದಿದ್ದು ಆರ್‌ಎಸ್ಎಸ್' ಹೇಳಿಕೆಗೆ ಬದ್ಧ: ವಿಚಾರಣೆ ಎದುರಿಸಲು ಮುಂದಾದ ರಾಹುಲ್


'ಗಾಂಧಿಯನ್ನು ಕೊಂದಿದ್ದು ಆರ್‌ಎಸ್ಎಸ್ ಎಂದು 2014ರಲ್ಲಿ ನೀಡಿದ ಹೇಳಿಕೆಗೆ ಬದ್ಧವಾಗಿದ್ದು, ಕೋರ್ಟ್‌ನ ವಿಚಾರಣೆ ನಡೆಸಲು ಸಿದ್ಧವಾಗಿದ್ದೇನೆ. ಪ್ರಕರಣದ ವಿಚಾರಣೆ ರದ್ದುಗೊಳಿಸುವಂತೆ ಆಗ್ರಹಿಸಿ ಸಲ್ಲಿಸಿದ ಮನವಿಯನ್ನು ಹಿಂಪಡೆಯುವೆ,' ಎಂದಿದ್ದಾರೆ.

ಮಹಾರಾಷ್ಟ್ರದ ಭಿವಂಡ್ ಕೋರ್ಟ್‌ನಲ್ಲಿ ಮಾನನಷ್ಟ ಪ್ರಕರಣ ದಾಖಲಾಗಿದ್ದು, ರಾಹುಲ್ ಅಲ್ಲಿಯೇ ವಿಚಾರಣೆ ಎದುರಿಸುತ್ತಾರೆ. ರಾಹುಲ್ ಕೋರ್ಟ್ ಮುಂದೆ ವೈಯಕ್ತಿತವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡುವುದಿಲ್ಲವೆಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಬೇರೆ ಯಾವ ನ್ಯಾಯಾಲಯದ ಆದೇಶಗಳಿಂದಲೂ ಪ್ರಭಾವಿತವಾಗದೇ, ರಾಹುಲ್ ವಿರುದ್ಧ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಲಿದೆ, ಎಂದು ಸುಪ್ರೀಂ ಕೋರ್ಟ್ ಹೇಳಿದೆ.

'ಆರ್‌ಎಸ್ಎಸ್ ವಿರುದ್ಧ ನೀಡಿದ ಹೇಳಿಕೆಗೆ ರಾಹುಲ್ ಬದ್ಧರಾಗಿದ್ದು, ಸುಪ್ರೀಂ ಕೋರ್ಟ್ ಇದನ್ನು ದಾಖಲಿಸಿಕೊಳ್ಳಬೇಕು,' ಎಂದು ಸಿಬಾಲ್ ಕೋರ್ಟ್‌ಗೆ ಮನವಿ ಮಾಡಿದರು.

'ಗಾಂಧಿಯನ್ನು ಕೊಂದಿದ್ದು ಆರ್‌ಎಸ್ಎಸ್ ಕಾರ್ಯಕರ್ತರು,' ಎಂದು ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಹೇಳಿದ್ದರು. ಆದರೆ, 'ಆರ್‌ಎಸ್‌ಎಸ್ ಗಾಂಧಿಯನ್ನು ಕೊಂದಿರುವುದಾಗಿ ನಾನು ಹೇಳಿಲ್ಲ,' ಎಂದು ರಾಹುಲ್ ಕೋರ್ಟ್ ಮುಂದೆ ಯೂ ಟರ್ನ್ ತೆಗೆದುಕೊಂಡ ಪರಿಣಾಮ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಕೈ ಬಿಡುವ ಸಾಧ್ಯತೆ ಇತ್ತು. ಆದರೆ, ಇಂದು ಮತ್ತೆ ನ್ಯಾಯಾಲಯದ ಮುಂದೆ ಹೋರಾಟ ಮುಂದುವರಿಸುವುದಾಗಿ ರಾಹುಲ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ