ಆ್ಯಪ್ನಗರ

ಎಸ್‌ಪಿ ಸಂಸದ ಅಜಂ ಖಾನ್‌ ವಿರುದ್ಧ ಪುಸ್ತಕ ಕಳವು ಪ್ರಕರಣ, ಪುತ್ರನ ಬಂಧನ

ಡೆಪ್ಯುಟಿ ಸ್ಪೀಕರ್‌ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌ ಒಡೆತನದ ಮೊಹಮ್ಮದ್‌ ಅಲಿ ಜೌಹಾರ್‌ ವಿಶ್ವವಿದ್ಯಾಲಯದ ಮೇಲೆ ...

Vijaya Karnataka Web 1 Aug 2019, 10:10 am
ಲಖನೌ: ಡೆಪ್ಯುಟಿ ಸ್ಪೀಕರ್‌ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌ ಒಡೆತನದ ಮೊಹಮ್ಮದ್‌ ಅಲಿ ಜೌಹಾರ್‌ ವಿಶ್ವವಿದ್ಯಾಲಯದ ಮೇಲೆ ಪೊಲೀಸರು ಹಾಗೂ ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
Vijaya Karnataka Web azam khan


ಸುಮಾರು 9 ಸಾವಿರ ಅಪರೂಪದ ಪುಸಕ್ತಗಳ ಕಳ್ಳತನ ಮಾಡಿ ವಿವಿಯ ಗ್ರಂಥಾಲಯದಲ್ಲಿ ಇರಿಸಿಕೊಳ್ಳಲಾಗಿದೆ ಎಂಬ ಆರೋಪ ಆಧರಿಸಿ ಪೊಲೀಸರು ಈ ದಾಳಿ ಮಾಡಿದ್ದಾರೆ.

ದಾಳಿ ವೇಳೆ 2500 ಕದ್ದ ಪುಸ್ತಕಗಳು ಸಿಕ್ಕಿವೆ. ಪುಸ್ತಕಗಳ ಮೇಲೆ ರಾಮ್‌ಪುರದ ಓರಿಯಂಟಲ್‌ ಕಾಲೇಜಿನ ಸ್ಟ್ಯಾಂಪ್‌ಗಳಿವೆ ಎಂದು ರಾಮ್‌ಪುರ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ಪಾಲ್‌ ಶರ್ಮಾ ಹೇಳಿದ್ದಾರೆ.

ವಿವಿಯ ಕುಲಾಧಿಪತಿಯಾಗಿರುವ ಅಜಂ ಖಾನ್‌ ಅವರ ವಿರುದ್ಧ ಪೊಲೀಸರು ಪುಸ್ತಕ ಕಳವು ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ, ಪೊಲೀಸ್‌ ದಾಳಿಗೆ ಅಡ್ಡಿಪಡಿಸಿದ ಅಜಂಖಾನ್‌ ಪುತ್ರ ಹಾಗೂ ಶಾಸಕ ಅಬ್ದುಲ್ಲಾ ಅಜಂ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ