ಆ್ಯಪ್ನಗರ

ಉಗ್ರ ಕೃತ್ಯಕ್ಕೆ ಹಣ: ದಿಲ್ಲಿ, ಕಣಿವೆಯಲ್ಲಿ NIA ದಾಳಿ

ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಮತ್ತು ಪಾಕ್ ಮೂಲದ ಉಗ್ರರಿಗೆ ಹಣ ಹರಿದು ಬರುತ್ತಿರುವ ಸಂಬಂಧ ಹುರಿಯತ್ ಸದಸ್ಯರ ಪ್ರದೇಶಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ.

ಟೈಮ್ಸ್ ಆಫ್ ಇಂಡಿಯಾ 3 Jun 2017, 1:12 pm
ಹೊಸದಿಲ್ಲಿ: ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಮತ್ತು ಪಾಕಿಸ್ತಾನ ಮೂಲದ ಉಗ್ರರಿಗೆ ಹಣ ಹರಿದು ಬರುತ್ತಿರುವ ಸಂಬಂಧ ದಿಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕಾರ್ಯಾಚರಣೆ ಆರಂಭಿಸಿದೆ.
Vijaya Karnataka Web raids in kashmir delhi over terror funding in valley
ಉಗ್ರ ಕೃತ್ಯಕ್ಕೆ ಹಣ: ದಿಲ್ಲಿ, ಕಣಿವೆಯಲ್ಲಿ NIA ದಾಳಿ


ಒಟ್ಟು 21 ಪ್ರದೇಶಗಳಲ್ಲಿ, ಕಾಶ್ಮೀರದ 14 ಮತ್ತು ದಿಲ್ಲಿಯ 7 ಸ್ಥಳಗಳ ಮೇಲೆ ಶನಿವಾರ ಬೆಳಗ್ಗೆ ಎನ್‌ಐಎ ದಾಳಿ ನಡೆಸಿದೆ. ಪ್ರಮುಖವಾಗಿ ಹುರಿಯತ್ ಸದಸ್ಯರು ನೆಲೆಸಿರುವ ಕಡೆಗಳಲ್ಲಿ ಮತ್ತು ಶಂಕಿತ ಹವಾಲಾ ದಂಧೆ ನಡೆಸುತ್ತಿರುವವರ ಪ್ರದೇಶಗಳಲ್ಲಿ ತನಿಖೆ ನಡೆಸಲಾಗಿದೆ ಎಂದು ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್ ತಿಳಿಸಿದ್ದಾರೆ.

ಪೂರ್ವಭಾವಿ ತನಿಖೆಯು ಉಗ್ರ ದೇಣಿಗೆ, ಹುರಿಯತ್‌ ನಾಯಕರ ಜತೆ ಅಕ್ರಮ ವ್ಯವಹಾರ ಮತ್ತಿತರ ರಾಷ್ಟ್ರದ್ರೋಹ ಚಟುವಟಿಕೆಗಳ ತನಿಖೆಯಾಗಿ ಪರಿವರ್ತನೆಗೊಳಿಸಿದ ನಂತರ ನಡೆಸಿದ ಕಾರ್ಯಾಚರಣೆ ಇದಾಗಿದೆ.

ದಿಲ್ಲಿಯ ಗ್ರೇಟರ್ ಕೈಲಾಶ್, ಪಿತಮ್‌ಪುರ ಮತ್ತು ಚಾಂದಿನಿ ಚೌಕ್‌ನ ಬಲ್ಲಿಮಾರನ್‌ನಲ್ಲಿ ಕಾರ್ಯಾಚರಣೆ ನಡೆಸಿದೆ. ಕಾಶ್ಮೀರದ ವಸತಿ ಪ್ರದೇಶದಲ್ಲಿ ಈಗಾಗಲೇ 1.25 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಹುರಿಯತ್ ನಾಯಕರಾದ ನಯಿಮ್ ಖಾನ್, ಫಾರೂಕ್ ಅಹ್ಮದ್ ದಾರ್ ಮತ್ತು ಜಾವೇದ್ ಅಹ್ಮದ್ ಬಾಬಾ ಅವರನ್ನು ಎನ್‌ಐಎ ತನಿಖೆಗೆ ಒಳಪಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ