ಆ್ಯಪ್ನಗರ

ಕಳಪೆ ಆಹಾರ: ಮನೆಯಿಂದಲೇ ಊಟ ತನ್ನಿಯೆಂದ ರೈಲ್ವೆ ಮಂಡಳಿ ಅಧ್ಯಕ್ಷ

ರೈಲಿನಲ್ಲಿ ಪೂರೈಕೆ ಮಾಡುವ ಆಹಾರ ಪದಾರ್ಥಗಳ ಬಗ್ಗೆ ದೂರುಗಳ ಸುರಿಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಇನ್ನು ಮುಂದೆ ಪ್ರಯಾಣದ ಅವಧಿಯಲ್ಲಿ ಬೇಕಾಗುವ ಉಪಹಾರವನ್ನು ಮನೆಯಿಂದಲೇ ತೆಗೆದುಕೊಂಡು ಬನ್ನಿ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ.ಮಿತ್ತಲ್ ಬಿಟ್ಟಿ ಸಲಹೆ ನೀಡಿದ್ದಾರೆ.

Vijaya Karnataka Web 30 Jul 2017, 12:32 pm
ವಾರಾಣಾಸಿ: ರೈಲಿನಲ್ಲಿ ಪೂರೈಕೆ ಮಾಡುವ ಆಹಾರ ಪದಾರ್ಥಗಳ ಬಗ್ಗೆ ದೂರುಗಳ ಸುರಿಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಇನ್ನು ಮುಂದೆ ಪ್ರಯಾಣದ ಅವಧಿಯಲ್ಲಿ ಬೇಕಾಗುವ ಉಪಹಾರವನ್ನು ಮನೆಯಿಂದಲೇ ತೆಗೆದುಕೊಂಡು ಬನ್ನಿ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ.ಮಿತ್ತಲ್ ಬಿಟ್ಟಿ ಸಲಹೆ ನೀಡಿದ್ದಾರೆ.
Vijaya Karnataka Web railway board chairman asks passengers to carry food from home
ಕಳಪೆ ಆಹಾರ: ಮನೆಯಿಂದಲೇ ಊಟ ತನ್ನಿಯೆಂದ ರೈಲ್ವೆ ಮಂಡಳಿ ಅಧ್ಯಕ್ಷ


ಕಳೆದ ಮಂಗಳವಾರ ಪೂರ್ವ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿತರಿಸಲಾದ ಆಹಾರದಲ್ಲಿ ಹಲ್ಲಿ ಪತ್ತೆಯಾದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಡಿಮಿಡಿಯಾದ ಮಿತ್ತಲ್, ಮನೆ ಊಟದ ಗುಣ ಮಟ್ಟಕ್ಕೆ ಪರ್ಯಾಯ ಇಲ್ಲ. ರೈಲಿನಲ್ಲಿ ಪೂರೈಸುವ ಆಹಾರದ ಮೇಲೆ ಅವಲಂಬಿಸದೆ ಮನೆಯಿಂದಲೇ ಊಟ ಕಟ್ಟಿಕೊಂಡು ಬನ್ನಿ ಎಂದಿದ್ದಾರೆ.

ಆಹಾರ ಗುಣ ಮಟ್ಟದ ಬಗ್ಗೆ ಗುತ್ತಿಗೆದಾರರು ರಾಜಿಯಾಗದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಪ್ರತಿದಿನ ರೈಲಿನಲ್ಲಿ ಸಂಚರಿಸುವ 15 ಲಕ್ಷ ಪ್ರಯಾಣಿಕರಿಗೆ ಆಹಾರ ಪೂರೈಕೆ ಮಾಡುವುದು ರೈಲ್ವೆ ಇಲಾಖೆಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆ ಪರಿಹಾರ ಮಾಡಲು ಒಂದು ವರ್ಷದೊಳಗೆ ರೈಲ್ವೆ ಬೇಸ್ ಕಿಚನ್ ಆರಂಭಿಸುತ್ತಿವೆ. ಇ-ಕೇಟರಿಂಗ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಆಹಾರ ಬುಕ್ಕೆ ಮಾಡಲು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ