ಆ್ಯಪ್ನಗರ

ಗೇಟ್ ತೆರೆಯದ್ದಕ್ಕೆ ಕೈ ಕಟ್‌

ರೈಲ್ವೆ ಲೆವೆಲ್‌ ಕ್ರಾಸಿಂಗ್‌ನ ಗೇಟು ತೆರೆಯಲು ನಿರಾಕರಿಸಿದ ಕಾವಲುಗಾರನ ಕೈಗಳನ್ನೇ ಕತ್ತರಿಸಿದ ಘಟನೆ ಉತ್ತರ ದಿಲ್ಲಿಯ ನರೇಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ.

Vijaya Karnataka 18 Sep 2018, 10:04 am
ಹೊಸದಿಲ್ಲಿ: ರೈಲ್ವೆ ಲೆವೆಲ್‌ ಕ್ರಾಸಿಂಗ್‌ನ ಗೇಟು ತೆರೆಯಲು ನಿರಾಕರಿಸಿದ ಕಾವಲುಗಾರನ ಕೈಗಳನ್ನೇ ಕತ್ತರಿಸಿದ ಘಟನೆ ಉತ್ತರ ದಿಲ್ಲಿಯ ನರೇಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
Vijaya Karnataka Web crime_1


ನರೇಲಾ ಮತ್ತು ರಥ್‌ಧಾನ ನಡುವಿನ 19ನೇ ಗೇಟ್‌ ಕಾಯುತ್ತಿದ್ದ ಕುಂದನ್‌ ಪಾಠಕ್‌(28) ರೈಲು ಆಗಮಿಸುವ ಸೂಚನೆ ಪಡೆದು ಗೇಟ್‌ ಹಾಕಿದ್ದರು. ಆಗ ಬೈಕ್‌ನಲ್ಲಿ ಬಂದ ಮೂವರು ಗೇಟು ತೆರೆಯಲು ಒತ್ತಾಯಿಸಿದರು. ನಿರಾಕರಿಸಿದಾಗ ಕೈಗಳನ್ನೇ ಕತ್ತರಿಸಿ ಪರಾರಿಯಾದರು. ಕೂಡಲೇ ಕೆಲವರು ಪಾಠಕ್‌ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೈಗಳನ್ನು ಮರಳಿ ಜತೆಗೂಡಿಸುವ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ