ಆ್ಯಪ್ನಗರ

ಮುಂಬಯಿ ದುರಂತ: ದಸರಾ ಹಬ್ಬ ರದ್ದು

ಇಲ್ಲಿನ ಚತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ನಲ್ಲಿ ದಸರಾ ಹಬ್ಬದ ಸಂಭ್ರಮ ಆಚರಣೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ರೈಲ್ವೇ ಸಿಬ್ಬಂದಿಗಳು ಶುಕ್ರವಾರ ಎಲ್ಫಿನ್‌ಸ್ಟೋನ್‌ ರೈಲ್ವೆ ನಿಲ್ದಾಣದಲ್ಲಿ ನಡೆದ ದುರಂತ ಬಳಿಕ ಈ ಕಾರ್ಯಕ್ರಮ ನಡೆಸದಂತೆ ತೀರ್ಮಾನಿಸಿದ್ದಾರೆ.

TNN 30 Sep 2017, 5:48 pm
ಮುಂಬಯಿ: ಇಲ್ಲಿನ ಚತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ನಲ್ಲಿ ದಸರಾ ಹಬ್ಬದ ಸಂಭ್ರಮ ಆಚರಣೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ರೈಲ್ವೇ ಸಿಬ್ಬಂದಿಗಳು ಶುಕ್ರವಾರ ಎಲ್ಫಿನ್‌ಸ್ಟೋನ್‌ ರೈಲ್ವೆ ನಿಲ್ದಾಣದಲ್ಲಿ ನಡೆದ ದುರಂತ ಬಳಿಕ ಈ ಕಾರ್ಯಕ್ರಮ ನಡೆಸದಂತೆ ತೀರ್ಮಾನಿಸಿದ್ದಾರೆ.
Vijaya Karnataka Web railways not celebrating dussehra
ಮುಂಬಯಿ ದುರಂತ: ದಸರಾ ಹಬ್ಬ ರದ್ದು


ಎಲ್ಫಿನ್‌ಸ್ಟೋನ್‌ ಪ್ರಕರಣದ ಬಳಿಕ ಶುಕ್ರವಾರ ರಾತ್ರಿ ಮುಂಬಯಿ ನಿವಾಸಿಗಳು ಸಾವಿರಾರು ಸಂಖ್ಯೆಯಲ್ಲಿ ರೈಲ್ವೇ ಬ್ರಿಡ್ಜ್‌ ಸುತ್ತ ಮೇಣದ ಬತ್ತಿ ಹಿಡಿದು ಶಾಂತಿ ಮೆರವಣಿಗೆ ನಡೆಸಲಾಗಿತ್ತು.

ಈ ಎಲ್ಲಾ ಬೆಳವಣಿಗೆ ಬಳಿಕ ರೈಲ್ವೇ ಸಿಬ್ಬಂದಿ ಸಹ ದಸರಾ ಹಬ್ಬ ಆಚರಿಸದಂತೆ ಒಟ್ಟಾಗಿ ತೀರ್ಮಾನಕ್ಕೆ ಬಂದಿದ್ದು, ಕಾಲ್ತುಳಿತದಂತಹ ಪ್ರಕರಣದಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ ಎಂದು ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ರವೀಂದ್ರ ಭಕರ್ ಹೇಳಿದರು.

ಸೆಂಟ್ರಲ್ ರೈಲ್ವೆಯ ಉದ್ಯೋಗಿಗಳು ಉತ್ಸವವನ್ನು ಆಚರಿಸುತ್ತಿಲ್ಲ, ಇದು ರೈಲ್ವೆ ಉದ್ಯೋಗಿಗಳು ಮತ್ತು ಅಧಿಕಾರಿಗಳು ಸ್ವತಃ ತೆಗೆದುಕೊಂಡ ತೀರ್ಮಾನವಾಗಿದೆ ಎಂದು ಕೇಂದ್ರ ರೈಲ್ವೆ ಮುಖ್ಯ ವಕ್ತಾರ ಸುನಿಲ್ ಉದಾಸಿ ತಿಳಿಸಿದ್ದಾರೆ.

ಎಲ್ಫಿನ್‌ಸ್ಟೋನ್‌ ರಸ್ತೆ ನಿಲ್ದಾಣದ ಮೇಲ್ಸೇತುವೆಯಲ್ಲಿ ಉಂಟಾದ ಕಾಲ್ತುಳಿತ ದುರಂತದಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಕೆಲವು ಮಂದಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ