ಆ್ಯಪ್ನಗರ

ರೈಲ್ವೆ ಟಿಕೆಟ್‌ ಹಗರಣ: ಸೈಬರ್‌ ಭದ್ರತೆ ಹೆಚ್ಚಳಕ್ಕೆ ಆದೇಶ

ಟಿಕೆಟ್‌ ಹಗರಣವೊಂದನ್ನು ಸಿಬಿಐ ಬಯಲಿಗೆಳೆದಿರುವ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ಹಾಗೂ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರಗಳಿಗೆ ಸೈಬರ್‌ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವ ಪೀಯೂಶ್‌ ಗೋಯಲ್‌ ನಿರ್ದೇಶಿಸಿದ್ದಾರೆ.

Vijaya Karnataka 29 Dec 2017, 10:25 am

ಹೊಸದಿಲ್ಲಿ: ಟಿಕೆಟ್‌ ಹಗರಣವೊಂದನ್ನು ಸಿಬಿಐ ಬಯಲಿಗೆಳೆದಿರುವ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ಹಾಗೂ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರಗಳಿಗೆ ಸೈಬರ್‌ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವ ಪೀಯೂಶ್‌ ಗೋಯಲ್‌ ನಿರ್ದೇಶಿಸಿದ್ದಾರೆ.

ಐಆರ್‌ಸಿಟಿಸಿಯ ಮಾಜಿ ಉದ್ಯೋಗಿ ಹಾಗೂ ಸಾಫ್ಟ್‌ವೇರ್‌ ಪ್ರೋಗ್ರಾಮರ್‌ ಸೇರಿ ಭ್ರಷ್ಟ ವ್ಯವಸ್ಥೆಯೊಂದನ್ನು ರೂಪಿಸಿದ್ದರು. ಅದರಂತೆ ಏಜೆಂಟ್‌ಗಳು ಒಂದೇ ಕ್ಲಿಕ್‌ಗೆ ನೂರಾರು ತತ್ಕಾಲ್‌ ಟಿಕೆಟ್‌ ಬುಕ್‌ ಮಾಡಬಹುದಾಗಿತ್ತು. ಇದನ್ನು ಪತ್ತೆ ಹಚ್ಚಿದ ಸಿಬಿಐ, ಈ ಸಂಬಂಧ ಇಬ್ಬರನ್ನು ಬಂಧಿಸಿದೆ.

''ಭಾರತೀಯ ರೈಲ್ವೆಯಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿರುವ ಮಾಹಿತಿ ಸಿಕ್ಕಿದೆ. ತನಿಖೆ ಬಳಿಕ ಐಆರ್‌ಸಿಟಿಸಿಯ ಮಾಜಿ ಉದ್ಯೋಗಿ, ಪ್ರಸ್ತುತ ಸಿಬಿಐನೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಅಜಯ್‌ ಗಾರ್ಗ್‌ ಈ ಮೋಸಜಾಲದ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ,'' ಎಂದು ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಟಿಕೆಟ್‌ನ ಕೃತಕ ಕೊರತೆ ಸೃಷ್ಟಿಸುವ ಮೂಲಕ ಪ್ರಾಮಾಣಿಕ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಇಂಥ ಎಲ್ಲ ವಂಚನೆಗಳ ಕುರಿತು ತನಿಖೆ ನಡೆಸಲು ಗೋಯಲ್‌ ಆದೇಶಿಸಿದ್ದಾರೆ.

Vijaya Karnataka Web railways ticketing scam accused had pan india network officials
ರೈಲ್ವೆ ಟಿಕೆಟ್‌ ಹಗರಣ: ಸೈಬರ್‌ ಭದ್ರತೆ ಹೆಚ್ಚಳಕ್ಕೆ ಆದೇಶ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ