ಆ್ಯಪ್ನಗರ

ಕರ್ನಾಟಕಕ್ಕೆ ಶುಕ್ರವಾರ ಹಿಂಗಾರು ಮಾರುತ ಪ್ರವೇಶ: ಭಾರಿ ಮಳೆ ಸಾಧ್ಯತೆ

ಹಿಂಗಾರು ಮಳೆಗೆ ಕಾರಣವಾಗುವ ಈಶಾನ್ಯ ಮಾರುತಗಳು ಗುರುವಾರ ದಕ್ಷಿಣ ಭಾರತದ ತೀರ ಪ್ರವೇಶಿಸಿದ್ದು, ಇನ್ನು 24 ಗಂಟೆಗಳಲ್ಲಿ ಒಳನಾಡಿಗೆ ವಿಸ್ತರಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ...

Vijaya Karnataka 2 Nov 2018, 5:30 am
ಚೆನ್ನೈ: ಹಿಂಗಾರು ಮಳೆಗೆ ಕಾರಣವಾಗುವ ಈಶಾನ್ಯ ಮಾರುತಗಳು ಗುರುವಾರ ದಕ್ಷಿಣ ಭಾರತದ ತೀರ ಪ್ರವೇಶಿಸಿದ್ದು, ಇನ್ನು 24 ಗಂಟೆಗಳಲ್ಲಿ ಒಳನಾಡಿಗೆ ವಿಸ್ತರಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Vijaya Karnataka Web ಮಳೆ ಮುನ್ಸೂಚನೆ
ಮಳೆ ಮುನ್ಸೂಚನೆ


ಈ ಬಾರಿ ಈಶಾನ್ಯ ಮಾರುತಗಳು ವಾಡಿಗೆಕಿಂತಲೂ ಹೆಚ್ಚಿನ ಮಳೆ ಸುರಿಸುವ ಸಾಧ್ಯತೆಯಿದೆ. ಶುಕ್ರವಾರದ ವೇಳೆಗೆ ಹಿಂಗಾರು ಮಾರುತಗಳು ಕೇರಳ, ಆಂಧ್ರಪ್ರದೇಶದ ರಾಯಲಸೀಮ ಮತ್ತು ದಕ್ಷಿಣ ಕರ್ನಾಟಕ ಪ್ರವೇಶಿಸಲಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಒಂದು ತಿಂಗಳು ತಡವಾಗಿ ಹಿಂಗಾರು ಮಾರುತ ಪ್ರವೇಶವಾಗಿದ್ದರೂ, ಉಳಿದ ಎರಡು ತಿಂಗಳಲ್ಲಿ ಸಾಕಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿ ಬಂದಿದೆ. ಹಿಂಗಾರು ಮಳೆ ಕೂಡ ತಡವಾದರೂ ಎಂದಿನ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದೆ.

ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ