ಆ್ಯಪ್ನಗರ

ಸಚಿವರ ಮನೆಗೇ ನುಗ್ಗಿತು ಮಳೆ ನೀರು..! ಮಾಡಿದ್ದುಣ್ಣೋ ಮಹರಾಯ ಎನ್ನುತ್ತಿದ್ದಾರೆ ನೆಟ್ಟಿಗರು..!

ನಾವು ಯಾರಿಗಾದ್ರೂ ಕೆಟ್ಟದು ಮಾಡಿದರೆ, ಅದು ನಮಗೇ ಆಗುತ್ತದೆ ಎಂದು ಸಂದೇಶ ಸಾರುತ್ತಿದೆಯಾ ಪ್ರಕೃತಿ? ಹಾಗಂತಾ ಪ್ರಶ್ನಿಸುತ್ತಿದ್ಧಾರೆ ನೆಟ್ಟಿಗರು..! ಬಿಹಾರ ಸಚಿವರ ಮನೆಗೆ ನೀರು ನುಗ್ಗಿದ ಘಟನೆ ನೆಟ್ಟಿಗರನ್ನು ಕುಟುಕುವಂತೆ ಮಾಡಿದೆ.

ANI 29 Jun 2020, 1:35 pm

ಹೈಲೈಟ್ಸ್‌:

  • ಬಿಹಾರದ ರಸ್ತೆ ನಿರ್ಮಾಣ ಸಚಿವರ ಮನೆಗೆ ನುಗ್ಗಿದ ನೀರು
  • ಬಿಹಾರದ ರಸ್ತೆಗಳಲ್ಲೂ ತುಂಬಿದೆ ಪ್ರವಾಹದ ನೀರು
  • ಸಚಿವರ ಮನೆಗೆ ನೀರು ನುಗ್ಗಿದ್ದಕ್ಕೆ ಕುಟುಕಿದ ನೆಟ್ಟಿಗರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web minister
ಸಚಿವರ ಮನೆಗೇ ನುಗ್ಗಿತು ಮಳೆ ನೀರು..! ಮಾಡಿದ್ದುಣ್ಣೋ ಮಹರಾಯ ಎನ್ನುತ್ತಿದ್ಧಾರೆ ನೆಟ್ಟಿಗರು..!
ಪಾಟ್ನಾ (ಬಿಹಾರ): ಭಾರೀ ಮಳೆಗೆ ಸಾಕ್ಷಿಯಾಗಿರುವ ಬಿಹಾರ ರಾಜ್ಯದಲ್ಲಿ ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪಾಟ್ನಾದಲ್ಲಂತೂ ರಸ್ತೆಯಲ್ಲೇ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ನಡುವೆ, ಇದೇ ಪ್ರವಾಹದ ನೀರು ಬಿಹಾರದ ರಸ್ತೆ ನಿರ್ಮಾಣ ಸಚಿವರ ಮನೆಗೇ ನುಗ್ಗಿದೆ..! ಸಚಿವ ನಂದ ಕಿಶೋರ್ ಯಾದವ್ ಅವರ ಮನೆಗೆ ನೀರು ನುಗ್ಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ಎಲ್ಲೋ ಒಂದು ಕಡೆ ಚರಂಡಿ ಕಟ್ಟಿಕೊಂಡಿತ್ತು. ಹೀಗಾಗಿ, ಈ ರೀತಿ ಆಗಿದೆ ಎಂದಿದ್ದಾರೆ.
ಸಚಿವರಿಗೆ ಝಾಡಿಸಿದ ನೆಟ್ಟಿಗರು..!

ಸಚಿವರ ಮನೆಗೇ ನೀರು ನುಗ್ಗಿರೋದು ನೆಟ್ಟಿಗರಿಗೆ ತಮಾಷೆಯ ವಸ್ತುವಾಗಿ ಪರಿಣಮಿಸಿದೆ. ‘ನೀವು ಮಾಡಿದ್ದೇ ನಿಮಗೂ ಆಗಿದೆ’ ಅನ್ನೋ ರೀತಿಯಲ್ಲಿ ಟ್ವೀಟ್‌ಗಳು ಓಡಾಡುತ್ತಿವೆ..! ರಸ್ತೆ ನಿರ್ಮಾಣ ಸಚಿವರು ಯಾವ ರೀತಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ ಅನ್ನೋದಕ್ಕೆ ಅವರ ಮನೆಯೇ ಸಾಕ್ಷಿ ಎಂದೂ ಜನರು ಕುಟುಕಿದ್ದಾರೆ.

ಮಳೆಗಾಲದ ಸಿದ್ದತೆ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು, ಕನಿಷ್ಟ ಅವರ ಮನೆಯನ್ನಾದ್ರೂ ಮಳೆಗಾಲಕ್ಕೆ ಸಜ್ಜುಗೊಳಿಸಿಕೊಳ್ಳಬಹುದಿತ್ತು ಎಂದು ಮಾತಿನಲ್ಲೇ ತಿವಿದಿದ್ದಾರೆ. ಸಚಿವರಂಥಾ ದೊಡ್ಡ ಜನರ ಮನೆಗಳ ಪರಿಸ್ಥಿತಿಯೇ ಹೀಗಾದ್ರೆ, ನಮ್ಮಂಥಾ ಸಾಮಾನ್ಯರ ಸ್ಥಿತಿ ಏನಾಗಬೇಕಡ ಊಹಿಸಿ ಎಂದೂ ಕೆಲವರು ಟೀಕಿಸಿದ್ದಾರೆ.

ಬಿಹಾರ: ಮಳೆಯಿಂದಾಗಿ 3 ದಿನದಿಂದ ಮನೆಯಲ್ಲಿದ್ದ ಡಿಸಿಎಂ ಸುಶೀಲ್‌ ಮೋದಿ ಕುಟುಂಬ ರಕ್ಷಣೆ

ರಸ್ತೆಗಳಲ್ಲಿ ಪ್ರವಾಹದ ರೀತಿ ನೀರು ನಿಲ್ಲುತ್ತಿದೆ. ಇದು ರಸ್ತೆ ಕಾಮಗಾರಿಯ ರೀತಿ ನೀತಿಯನ್ನು ತೋರಿಸುತ್ತಿದೆ. ಕಳಪೆ ಕಾಮಗಾರಿಯ ರಸ್ತೆಯಲ್ಲಿ ಪ್ರವಾಹದ ನೀರು ನಿಂತು ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಕೃತಿ ಈ ರಸ್ತೆಗಳನ್ನು ನಿರ್ಮಿಸಿದವರ ಮನೆಗೇ ನೀರು ನುಗ್ಗಿಸಿದೆ ಎಂದೂ ಕೆಲವರು ಟೀಕಿಸಿದ್ದಾರೆ.

ಬಿಹಾರ, ಉ.ಪ್ರದೇಶದಲ್ಲಿ ಕುಂಭದ್ರೋಣ ಮಳೆ: 4 ದಿನದಲ್ಲಿ100 ಜನ ಸಾವು!







ಸಂತ್ರಸ್ತ ಪ್ರದೇಶಗಳ ವೀಕ್ಷಣೆ ವೇಳೆ ಸಂಸದರಿದ್ದ ದೋಣಿ ಪಲ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ