ಆ್ಯಪ್ನಗರ

ದಕ್ಷಿಣ ಕರಾವಳಿಗಷ್ಟೇ ಸೀಮಿತವಾಗಿರುವ ಮುಂಗಾರು ಮಳೆ

ನಿರ್ದಿಷ್ಟವಾಗಿ ಕರ್ನಾಟಕದ ಮಂಗಳೂರು, ಮೈಸೂರು, ಕೇರಳದ ಕಡಲೂರು ಭಾಗಗಳಲ್ಲಿ ಮಾತ್ರ ಕೃಷಿ ಚಟುವಟಿಕೆ ಶುರುವಾಗಿದೆ.

Agencies 17 Jun 2019, 5:00 am
ಹೊಸದಿಲ್ಲಿ: ವಾರದ ಹಿಂದೆಯೇ ಕೇರಳ ಪ್ರವೇಶಿಸಿರುವ ಮುಂಗಾರು ದಕ್ಷಿಣದ ರಾಜ್ಯಗಳನ್ನೇ ಇನ್ನೂ ಪೂರ್ತಿಯಾಗಿ ವ್ಯಾಪಿಸಿಲ್ಲ. ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಾತ್ರ ಮುಂಗಾರು ಮಳೆ ಸಿಂಚನ ಮುಂದುವರಿದಿದೆ.
Vijaya Karnataka Web rainfall deficiency hits 43 pc monsoon progress likely in the next 2 3 days
ದಕ್ಷಿಣ ಕರಾವಳಿಗಷ್ಟೇ ಸೀಮಿತವಾಗಿರುವ ಮುಂಗಾರು ಮಳೆ


ನಿರ್ದಿಷ್ಟವಾಗಿ ಕರ್ನಾಟಕದ ಮಂಗಳೂರು, ಮೈಸೂರು, ಕೇರಳದ ಕಡಲೂರು ಭಾಗಗಳಲ್ಲಿ ಮಾತ್ರ ಕೃಷಿ ಚಟುವಟಿಕೆ ಶುರುವಾಗಿದೆ. ಒಳನಾಡುಗಳಲ್ಲಿ ಒಣ ಹವೆ ಮುಂದುವರಿದಿದೆ. ಮಹಾರಾಷ್ಟ್ರದಿಂದ ಗುಜರಾತ್‌ವರೆಗಿನ ದಕ್ಷಿಣ ಕರಾವಳಿ ಭಾಗದಲ್ಲಿ 'ವಾಯು' ಚಂಡಮಾರುತದಿಂದ ಮಳೆ ಸುರಿದಿದೆಯೇ ವಿನಾ ಮುಂಗಾರು ಪ್ರವೇಶವಾಗಿಲ್ಲ. ಈಗ 'ವಾಯು' ಚಂಡಮಾರುತ ದುರ್ಬಲಗೊಂಡಿರುವುದರಿಂದ ನೈರುತ್ಯ ಮುಂಗಾರು ಮಾರುತ ಮುಂದಿನ ಒಂದೆರಡು ದಿನಗಳಲ್ಲಿ ಇಡೀ ದೇಶ ವ್ಯಾಪಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ನಿರೀಕ್ಷೆ ಮಾಡಿದೆ.

ಮತ್ತೊಮ್ಮೆ ಪಥ ಬದಲಿಸಿ ವಾಪಸ್‌ ಬಂದಿರುವ 'ವಾಯು' ಚಂಡಮಾರುತ ಸೋಮವಾರ ಮಧ್ಯರಾತ್ರಿ ವೇಳೆಗೆ ಗುಜರಾತ್‌ ಕರಾವಳಿಯನ್ನು ದಾಟುವ ನಿರೀಕ್ಷೆ ಇದೆ. ಚಂಡಮಾರುತ ದಾಟಿ ಹೋದ ನಂತರ ಮುಂಗಾರು ಮಾರುತಗಳು ಅರಬ್ಬಿ ಸಮುದ್ರದತ್ತ ದಾಂಗುಡಿ ಇಡುವುದರೊಂದಿಗೆ ಮುಂಗಾರು ಚುರುಕುಗೊಳ್ಳಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಸಿಡಿಲಿಗೆ ನಾಲ್ವರು ಬಲಿ

ಛತ್ತೀಸ್‌ಗಢದಲ್ಲಿ ಮಳೆ ಸಂಬಂಧಿ ಅವಘಡಕ್ಕೆ ಭಾನುವಾರ ನಾಲ್ವರು ಬಲಿಯಾಗಿದ್ದಾರೆ. ಬಲರಾಮಪುರ ಜಿಲ್ಲೆಯ ಧನ್‌ಧಾಪುರ-ಶಿವಪುರ ಗ್ರಾಮದಲ್ಲಿ ಇಬ್ಬರು ಸೋದರರು ಮತ್ತು ಕೊರಬಾದ ಜಿಲ್ಗಾ ನವಾದ್ಹಿ ಗ್ರಾಮದಲ್ಲಿ ಇಬ್ಬರು ಬಾಲಕಿಯರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಶಿವಪುರ ಗ್ರಾಮದ ಸೋದರ ಬಾಲಕರು ಮಾವಿನ ಕಾಯಿ ಕೀಳುವಾಗ ಸಿಡಿಲಿಗೆ ಬಲಿಯಾದರೆ, ನವಾದ್ಹಿ ಗ್ರಾಮದ ಸೋದರ ಸಂಬಂಧಿ ಬಾಲಕಿಯರಿಬ್ಬರು ತಮ್ಮ ತೋಟದ ಮನೆ ಹಿತ್ತಲಿನಲ್ಲಿ ಸ್ನಾನ ಮಾಡುತ್ತಿದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


*ದೇಶದಲ್ಲಿ ಶೇ.43ರಷ್ಟು ಮುಂಗಾರು ಕೊರತೆ
* ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಶೇ.59ರಷ್ಟು ಮಳೆ ಕೊರತೆ
* ಈಶಾನ್ಯ ಭಾರತದಲ್ಲಿ ಶೇ.47ರಷ್ಟು ಮಳೆ ಕೊರತೆ
*ದಕ್ಷಿಣ ರಾಜ್ಯಗಳ ಆಣೆಕಟ್ಟುಗಳಲ್ಲಿ ನೀರಿನ ಮಟ್ಟ ದಶಕದ ದಾಖಲೆಯ ಮಟ್ಟಕ್ಕೆ ಕುಸಿತ
*ಜಾರ್ಖಂಡ್‌, ಬಿಹಾರ, ಒಡಿಶಾ ಸೇರಿದಂತೆ ಪೂರ್ವ ಭಾಗದ ಹಲವು ರಾಜ್ಯಗಳಲ್ಲಿ ಬಿಸಿ ಗಾಳಿಯ ಆರ್ಭಟ
* ಬಿಹಾರದಲ್ಲಿ ಬಿಸಿಗಾಳಿಗೆ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ