ಆ್ಯಪ್ನಗರ

ಸಿಎಎ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋದ ರಾಜಸ್ಥಾನ ಸರಕಾರ

​​ಕೆಲವು ವಿಚಾರಗಳಲ್ಲಿ ಕೇಂದ್ರದ ವಿರುದ್ಧ ಅಸಮಾಧಾನವಿದ್ದರೆ ಅದನ್ನು ರಾಜ್ಯಗಳು ಸಂವಿಧಾನದ 131ನೇ ವಿಧಿ ಬಳಸಿಕೊಂಡು ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದಾಗಿದ್ದು, ಈ ಅವಕಾಶವನ್ನೇ ರಾಜಸ್ಥಾನ ಸರಕಾರ ಬಳಸಿಕೊಂಡಿದೆ.

Agencies 16 Mar 2020, 8:36 pm
ಹೊಸದಿಲ್ಲಿ: ಕೇರಳದ ನಂತರ ಈಗ ರಾಜಸ್ಥಾನದ ಕಾಂಗ್ರೆಸ್‌ ಸರಕಾರ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.
Vijaya Karnataka Web Rajasthan Chief Minister Ashok Gehlot


"ಸಿಎಎ ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದೆ. ಇದರ ಜಾರಿಯಿಂದ ಸಮಾನತೆಯಿಂದ ಬದುಕುವ ಮೂಲಭೂತ ಹಕ್ಕಿನ ಉಲ್ಲಂಘನೆ ಆದಂತಾಗಿದೆ. ಕಾಯಿದೆಗೆ ತಡೆ ನೀಡಬೇಕು," ಎಂದು ಅಶೋಕ್‌ ಗೆಹ್ಲೋಟ್‌ ನೇತೃತ್ವದ ರಾಜಸ್ಥಾನ ಸರಕಾರ ಅರ್ಜಿಯಲ್ಲಿ ಕೋರಿಕೊಂಡಿದೆ.

ಕೆಲವು ವಿಚಾರಗಳಲ್ಲಿ ಕೇಂದ್ರದ ವಿರುದ್ಧ ಅಸಮಾಧಾನವಿದ್ದರೆ ಅದನ್ನು ರಾಜ್ಯಗಳು ಸಂವಿಧಾನದ 131ನೇ ವಿಧಿ ಬಳಸಿಕೊಂಡು ಸುಪ್ರೀಂ ಮೊರೆ ಹೋಗಬಹುದಾಗಿದ್ದು, ಈ ಅವಕಾಶವನ್ನೇ ರಾಜಸ್ಥಾನ ಸರಕಾರ ಬಳಸಿಕೊಂಡಿದೆ.

2014ರ ಡಿಸೆಂಬರ್‌ 31ಕ್ಕೂ ಮುನ್ನ ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ನೆಲೆಸಿದ ಹಿಂದೂ, ಸಿಖ್‌, ಬೌದ್ಧ, ಕ್ರಿಶ್ಚಿಯನ್‌, ಜೈನ ಹಾಗೂ ಪಾರ್ಸಿ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡುವುದು ಸಿಎಎ ಕಾಯಿದೆ ಉದ್ದೇಶವಾಗಿದೆ. ಈ ಕಾಯಿದೆಯನ್ನು ಬೆಂಬಲಿಸಿ ಹಾಗೂ ವಿರೋಧಿಸಿ ದೇಶಾದ್ಯಂತ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಇತ್ತೀಚೆಗೆ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಹಿಂಸಾಚಾರ 53 ಜೀವಗಳನ್ನು ಬಲಿ ಪಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ