ಆ್ಯಪ್ನಗರ

'ನಾವಿಲ್ಲಿ ಒತ್ತೆಯಾಳುಗಳಾಗಿದ್ದೇವೆ': ರಾಜಸ್ಥಾನ ಸಿಎಂ ಗೆಹ್ಲೋಟ್‌ ವಿರುದ್ಧ ಬಿಟಿಪಿ ಶಾಸಕನ ಆಕ್ರೋಶ

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಉದ್ಭವಿಸಿದ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ಕೇವಲ ಕಾಂಗ್ರೆಸ್‌ ಶಾಸಕರಷ್ಟೇ ಅಲ್ಲದೇ, ಸರಕಾರಕ್ಕೆ ಬೆಂಬಲ ನೀಡಿದ ಶಾಸಕರಿಗೂ ಸಮಸ್ಯೆಯಾಗುತ್ತಿದೆ ಎಂದುಸ ಸ್ವತಃ ಶಾಸಕರೇ ಆರೋಪಿಸುತ್ತಿದ್ದು, ನಮ್ಮನ್ನು ಒತ್ತೆಯಾಳುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಬಿಟಿಪಿ ಶಾಸಕ ಆರೋಪಿಸಿದ್ದಾರೆ.

ANI 14 Jul 2020, 5:12 pm
ಜೈಪುರ: ರಾಜಸ್ಥಾನ‌ದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ಸಿಎಂ ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ನಡುವಿನ ಭಿನ್ನಮತದಲ್ಲಿ ಕಾಂಗ್ರೆಸ್‌ಗೆ ಪ್ರಮುಖವಾಗಿದ್ದ ಇಬ್ಬರು ಶಾಸಕರನ್ನು ಹೊಂದಿದ ಪ್ರಾದೇಶಿಕ ಪಕ್ಷ ಭಾರತೀಯ ಟ್ರೈಬಲ್‌ ಪಕ್ಷ ಕಾಂಗ್ರೆಸ್‌ ಜೊತೆಗಿನ ಮೈತ್ರಿಯನ್ನು ಮಂಗಳವಾರ ಕಡಿತಗೊಳಿಸಿದೆ. ಬಿಟಿಪಿಯ ಇಬ್ಬರು ಶಾಸಕರ ಪೈಕಿ ಓರ್ವ ಶಾಸಕ ನಮ್ಮನ್ನು ಒತ್ತೆಯಾಳುಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web rajasthan crisis bhartiya tribal party mla rajkumar roat alleges hostage like situation
'ನಾವಿಲ್ಲಿ ಒತ್ತೆಯಾಳುಗಳಾಗಿದ್ದೇವೆ': ರಾಜಸ್ಥಾನ ಸಿಎಂ ಗೆಹ್ಲೋಟ್‌ ವಿರುದ್ಧ ಬಿಟಿಪಿ ಶಾಸಕನ ಆಕ್ರೋಶ


ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕೊರಾಸಿ ವಿಧಾನಸಭಾ ಕ್ಷೇತ್ರದ ಬಿಟಿಪಿ ಶಾಸಕ ರಾಜಕುಮಾರ್‌ ರೋಟ್‌, ಸದ್ಯದ ಪರಿಸ್ಥಿತಿ ನಾವು ಒತ್ತೆಯಾಳುಗಳಾದರೆ ಹೇಗಿರುತ್ತದೆಯೋ ಅದೇ ರೀತಿ ಇದೆ. ಕಳೆದ ಮೂರು ದಿನಗಳಿಂದ ನಾವು ಎಂಎಲ್‌ಎ ಕ್ವಾಟರ್ಸ್‌ನಲ್ಲಿದ್ದೇವೆ. ಬಹಳಷ್ಟು ಜನ ನಮ್ಮ ಜೊತೆ ಬನ್ನಿ.. ನಮ್ಮ ಜೊತೆ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.


ನಾನು ನನ್ನ ಕ್ಷೇತ್ರಕ್ಕೆ ಹೋಗುತ್ತಿದ್ದರೂ ನನ್ನನ್ನು ಮೂರ್ನಾಲ್ಕು ಪೊಲೀಸ್‌ ಜೀಪ್‌ಗಳು ಹಿಂಬಾಲಿಸುತ್ತವೆ. ಪೊಲೀಸರು ನನ್ನ ಕಾರನ್ನು ಮುಂದೆ ಹೋಗಲು ಬಿಡಲಿಲ್ಲ. ನನ್ನನ್ನು ಸುತ್ತುವರೆದು, ನನ್ನ ಕಾರ್‌ ಕೀಯನ್ನು ಕೂಡ ತೆಗೆದುಕೊಂಡಿದ್ದಾರೆ. ಎರಡು ಕಡೆಯಿಂದಲೂ ಪೊಲೀಸರು ನನ್ನನ್ನು ತಡೆದು ನಿಲ್ಲಿಸಿದ್ದರು. ಇದು ಪೊಲೀಸರ ದುರ್ವರ್ತನೆಯನ್ನು ತೋರಿಸುತ್ತದೆ ಎಂದು ಶಾಸಕ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಸೋನಿಯಾ ಗಾಂಧಿ ಭೇಟಿ ಮಾಡಿ ಚರ್ಚಿಸಿದ ಪ್ರಿಯಾಂಕಾ ಗಾಂಧಿ!

ಸೋಮವಾರ ಭಾರತೀಯ ಟ್ರೈಬಲ್‌ ಪಕ್ಷದ ಅಧ್ಯಕ್ಷ ಮಹೇಶ್‌ ಬಾಯ್‌ ವಾಸವ ತಮ್ಮ ಶಾಸಕರಿಗೆ ಪತ್ರ ಬರೆದಿದ್ದು, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ತಟಸ್ಥವಾಗಿರುವಂತೆ ಸೂಚಿಸಿದ್ದರು. ವಿಶ್ವಾಸಮತ ಯಾಚನೆಗೆ ಗೈರಾಗಿ ಎಂದು ಪತ್ರದಲ್ಲಿ ತಿಳಿಸಿದ್ದರು. ಇದಾದ ನಂತರವೂ ಇಬ್ಬರು ಶಾಸಕರು ನಾವು ಗೆಹ್ಲೋಟ್‌ಗೆ ಬೆಂಬಲ ನೀಡುತ್ತೇವೆ. ಒಂದಿಷ್ಟು ಗೊಂದಲ ಆಗಿದೆ ಎಂದು ಹೇಳಿದ್ದರು.

ಡಿಸಿಎಂ ಪಟ್ಟ, ಅಧ್ಯಕ್ಷ ಹುದ್ದೆ ಕಳೆದುಕೊಂಡ ಪೈಲಟ್: ಸೆಣೆಸಾಟದಲ್ಲಿ ಇನ್ನೂ ಗೆದ್ದಿಲ್ಲ ಗೆಹ್ಲೋಟ್!

ಕಳೆದ ಮೂರು ದಿನಗಳಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಸರಕಾರ ಪತನವಾಗುವ ಮುನ್ಸೂಚನೆ ಕಂಡುಬರುತ್ತಿದೆ. ಈಗಾಗಲೇ ಸಚಿನ್‌ ಪೈಲಟ್‌ರನ್ನು ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು, ಕ್ಷಣ ಕ್ಷಣಕ್ಕೂ ರಾಜಸ್ಥಾನ ರಾಜಕೀಯ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ.

ಸಚಿನ್ ಪೈಲಟ್‌ರನ್ನು ಹುದ್ದೆಯಿಂದ ಕೆಳಗಿಳಿಸುವ ಗೆಹ್ಲೋಟ್ ತೀರ್ಮಾನಕ್ಕೆ ರಾಜ್ಯಪಾಲರಿಂದ ಅಸ್ತು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ