ಆ್ಯಪ್ನಗರ

ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿನ್‌ ಪೈಲಟ್‌ ಸುದ್ದಿಗೋಷ್ಠಿ; ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟಿಗೆ ಕ್ಲೈಮ್ಯಾಕ್ಸ್‌ ಸಾಧ್ಯತೆ

ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಕೊನೆ ಹಂತಕ್ಕೆ ಬಂದು ನಿಂತಿದ್ದು, ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿನ್‌ ಪೈಲಟ್‌ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇಡೀ ರಾಷ್ಟ್ರದ ಕಣ್ಣು ಸುದ್ದಿಗೋಷ್ಠಿ ಮೇಲೆ ನೆಟ್ಟಿದ್ದು, ಪೈಲಟ್‌ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.

Agencies 14 Jul 2020, 11:47 pm
ಜೈಪುರ: ರಾಜಸ್ಥಾನದಲ್ಲಿ ಭುಗಿಲೆದ್ದಿರುವ ರಾಜಕೀಯ ಅಸ್ತಿರತೆಗೆ ಬುಧವಾರ ಕ್ಲೈಮ್ಯಾಕ್ಸ್‌ ಸಿಗುವ ಸಾಧ್ಯತೆ ಇದ್ದು, ಬೆಳಗ್ಗೆ 10 ಗಂಟೆಗೆ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಸುದ್ದಿಗೋಷ್ಠಿ ಕರೆದಿದ್ದಾರೆ. ಇಡೀ ರಾಷ್ಟ್ರದ ಕಣ್ಣು ಸುದ್ದಿಗೋಷ್ಠಿ ಮೇಲಿದ್ದು, ಪೈಲಟ್‌ ಮುಂದಿನ ನಡೆ ಏನಾಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.
Vijaya Karnataka Web rajasthan crisis sachin pilot will hold a press conference at 10 am wednesday
ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿನ್‌ ಪೈಲಟ್‌ ಸುದ್ದಿಗೋಷ್ಠಿ; ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟಿಗೆ ಕ್ಲೈಮ್ಯಾಕ್ಸ್‌ ಸಾಧ್ಯತೆ


ಮಂಗಳವಾರ ಮಧ್ಯಾಹ್ನದೊತ್ತಿಗೆ‌ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಹಾಗೂ ರಾಜಸ್ಥಾನ ಡಿಸಿಎಂ ಸ್ಥಾನದಿಂದ ಸಚಿನ್‌ ಪೈಲಟ್‌ರನ್ನು ಕಾಂಗ್ರೆಸ್‌ ಹೈಕಮಾಂಡ್‌ ವಜಾಗೊಳಿಸಿತ್ತು. ಇದರ ಬೆನ್ನಲ್ಲಿಯೇ ಪೈಲಟ್‌ ಟ್ವೀಟ್‌ ಮಾಡಿ ಸತ್ಯದ ಮೇಲೆ ದೌರ್ಜನ್ಯ ಎಸಗಬಹುದು ಹೊರತು ಸೋಲಿಸಲು ಆಗಲ್ಲ ಎಂದು ಹೇಳಿದ್ದರು.

ಆ ಟ್ವೀಟ್‌ ಮಾಡಿ ಕೆಲವೇ ಗಂಟೆಗಳಲ್ಲಿ ತಮ್ಮ ಬೆಂಬಲಿಗರಿಗೆ ಧನ್ಯವಾದಗಳನ್ನು ಕೂಡ ಸಚಿನ್‌ ಪೈಲಟ್‌ ಮಾಡಿದ್ದರು. ಇದು ಎರಡು ದಿನದ ರಾಜಕೀಯ ಬೆಳವಣಿಗೆಯಲ್ಲಿ ಅವರ ಮೊದಲ ಸಾರ್ವಜನಿಕ ಪ್ರತಿಕ್ರಿಯೆಯಾಗಿತ್ತು. ಕಾಂಗ್ರೆಸ್‌ ಹಾಗೂ ಸಚಿನ್‌ ಪೈಲಟ್‌ ನಡುವಿನ ಸಂಬಂಧ ಈಗ ಪೂರ್ತಿ ಹಳಸಿದೆ.

"ಕಾಂಗ್ರೆಸ್‌ನಲ್ಲಿ ಸಾಮರ್ಥ್ಯಕ್ಕೆ ಬೆಲೆ ಇಲ್ಲ": ರಾಜಸ್ಥಾನದಲ್ಲಿ ಪೈಲಟ್‌ ವಜಾಕ್ಕೆ ಸಿಂಧಿಯಾ ಟೀಕೆ

ಆದರೆ, ಅಧಿಕೃತವಾಗಿ ಕಾಂಗ್ರೆಸ್‌ನಿಂದ ಹೊರಹೋಗುತ್ತಿದ್ದೇನೆಂದು ಹೇಳಲು ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿನ್‌ ಪೈಲಟ್‌ ಸುದ್ದಿಗೋಷ್ಠಿ ಕರೆದಿದ್ದು, ಅವರ ಮುಂದಿನ ನಡೆ ಏನಾಗಿರಲಿದೆ ಎಂಬ ಕುತೂಹಲ ಕಾಡುತ್ತಿದೆ. ಜ್ಯೋತಿರಾಧಿತ್ಯ ಸಿಂಧಿಯಾ ರೀತಿ ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದ್ದರೂ, ಹೊಸ ಪಕ್ಷ ಕಟ್ಟುವ ಬಗ್ಗೆಯೂ ಮಾತುಗಳು ವ್ಯಕ್ತವಾಗುತ್ತಿವೆ.

'ಸಚಿನ್‌ ಪೈಲಟ್‌ ಕಡೆಗಣನೆಯಿಂದ ಬೇಸರವಾಗಿದೆ': ಉರಿಯೋ ಬೆಂಕಿಗೆ ತುಪ್ಪ ಸುರಿದ್ರಾ ಸಿಂಧಿಯಾ..?

2018ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಸಚಿನ್‌ ಪೈಲಟ್‌ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ತನ್ನ ಸಂಪ್ರದಾಯದಂತೆ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ಗೆ ಮಣೆ ಹಾಕಿತ್ತು. ಅಲ್ಲಿಂದ ಭುಗಿಲೆದ್ದಿದ್ದ ಭಿನ್ನಮತ 2 ವರ್ಷದ ನಂತರ ಭಾನುವಾರ ಸ್ಫೋಟಗೊಂಡಿತ್ತು. ಈಗ ಬುಧವಾರ ಅದಕ್ಕೆ ಕ್ಲೈಮ್ಯಾಕ್ಸ್‌ ಸಿಗುವ ಸಾಧ್ಯತೆ ಇದೆ.

ಮಧ್ಯಪ್ರದೇಶದ ನಂತರ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಬಿಗ್‌ ಶಾಕ್‌..! ಸಿಂಧಿಯಾ ಹಾದಿಯಲ್ಲಿ ನಡೀತಾರಾ ಪೈಲಟ್‌..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ