ಆ್ಯಪ್ನಗರ

ಶಾಸಕರ ಅನರ್ಹತೆ ಬಗ್ಗೆ ಹೈ ಕೋರ್ಟ್‌ನಿಂದ ಇಂದು ತೀರ್ಪು? ಸರಕಾರ ಉಳಿವಿನ ಬಗ್ಗೆ ಕುತೂಹಲ!

ಇಂದು ರಾಜಸ್ಥಾನದ ರಾಜಕೀಯ ಹೈಡ್ರಾಮಕ್ಕೆ ಬೀಳುತ್ತಾ ಬ್ರೇಕ್‌? ಬಂಡಾಯ ಶಾಸಕರು ಹಾಗೂ ಸರಕಾರದ ಅಳಿವು ಉಳಿವಿನ ನಿರ್ಧಾರಕ್ಕೆ ಕ್ಷಣಗಣನೆ. ಹೈ ಕೋರ್ಟ್‌ ನೀಡುವ ಆದೇಶದತ್ತ ಎಲ್ಲರ ಚಿತ್ತ.

TIMESOFINDIA.COM 21 Jul 2020, 9:10 am
ಜೈಪುರ: ರಾಜಸ್ಥಾನದ ಸರಕಾರ ಅಳಿವು-ಉಳಿವನ್ನು ನಿರ್ಧರಿಸಲಿರುವ ಬಂಡಾಯ ಶಾಸಕರ ಅನರ್ಹತೆ ಕುರಿತ ತೀರ್ಪನ್ನು ಹೈಕೋರ್ಟ್‌ ಮಂಗಳವಾರ ಪ್ರಕಟಿಸುವ ಸಾಧ್ಯತೆಯಿದೆ. ಈ ಮಧ್ಯೆ, ಶಾಸಕರ ವಿರುದ್ಧ ಕ್ರಮ ಜರುಗಿಸದಂತೆ ಹೈಕೋರ್ಟ್‌ ಜುಲೈ 21ರ ಸಂಜೆ 5.30ರವರೆಗೆ ನೀಡಿದ್ದ ತಡೆಯ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರ ಮುಂದಿನ ನಡೆಯು ಕುತೂಹಲ ಮೂಡಿಸಿದೆ.
Vijaya Karnataka Web 69663320


ಸೋಮವಾರ ಅನರ್ಹತೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ವಾದ ಪ್ರತಿವಾದ ನಡೆದಿದ್ದು, ಮಂಗಳವಾರ ಇದಕ್ಕೊಂದು ಅಂತ್ಯ ಹಾಡುವ ಬಗ್ಗೆ ಜಡ್ಜ್‌ಗಳು ಸುಳಿವು ಕೊಟ್ಟಿದ್ದರು. ಈ ಹಿನ್ನೆಲೆ ಇಂದು ಮತ್ತೆ ಸಚಿನ್‌ ಪೈಲಟ್‌ ಹಾಗೂ ಅವರ ಬಣದ ಅರ್ಜಿಯನ್ನ ಹೈ ಕೋರ್ಟ್‌ ಅಲಿಸಿ ಅಂತ್ಯ ಹಾಡುವ ಸಾಧ್ಯತೆ ಇದೆ.

ಇನ್ನೊಂದು ಕಡೆ ಸರಕಾರ ಉರುಳುವ ಭಯದಲ್ಲಿರುವ ಅಶೋಕ್‌ ಗೆಹ್ಲೋಟ್‌, ಸಚಿನ್‌ ಸೇರಿ ಬಂಡಾಯವೆದ್ದಿರುವ ಶಾಸಕರ ಮನವೊಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮತ್ತೊಂದು ಸುತ್ತಿನ ಸಿಎಲ್‌ಪಿ ಸಭೆ ಇಂದು ಹನ್ನೊಂದು ಗಂಟೆಗೆ ನಡೆಯಲಿದೆ.

ಮುಂಬಯಿ ಜಡ್ಜ್‌ಗಳಿಗೆ 50 ಸಾವಿರ ರೂ. ಕನ್ನಡಕ ಭತ್ಯೆ ನೀಡಿದ ಮಹಾ ಸರಕಾರ!

ಕಳೆದ ಒಂದು ವಾರಗಳಿಂದ ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಕ್ಕೆ ಇಂದು ತೆರೆ ಬೀಳಲಿದ್ದು ಯಾವ ರೀತಿಯ ತೀರ್ಪು ಬರಬಹುದು ಎನ್ನುವ ಲೆಕ್ಕಚಾರಗಳು ಶುರುವಾಗಿದೆ. ಸಚಿನ್‌ ಪೈಲಟ್‌ ಹಾಗೂ ಬಂಡಾಯ ಶಾಸಕರ ಪರ ಹರೀಶ್‌ ಸಾಳ್ವೆ ಹಾಗೂ ಸ್ಪೀಕರ್‌ ಪರ ಅಶೋಕ್‌ ಮನು ಸಿಂಘ್ವಿ ವಾದ ಮಂಡಿಸುತ್ತಿರುವುದು ಈ ಕೇಸ್‌ ಇನ್ನಷ್ಟು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ