ಆ್ಯಪ್ನಗರ

ರಾಜಸ್ಥಾನದಲ್ಲಿ ಸಿಬಿಐ ತನಿಖೆಗೆ ಪೂರ್ವಾನುಮತಿ ಕಡ್ಡಾಯ - ಗೆಹ್ಲೋಟ್‌ ಆದೇಶ

ದಿಲ್ಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯಿದೆಯ ಸೆಕ್ಷನ್‌ 3ರ ಅಡಿಯಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡುವ ಮುನ್ನ ರಾಜಸ್ಥಾನ ಸರಕಾರದಿಂದ ಅನುಮತಿ ಅಗತ್ಯ ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ.

Agencies 20 Jul 2020, 11:52 pm
ಜೈಪುರ: ರಾಜಸ್ಥಾನದಲ್ಲಿ ಕುದುರೆ ವ್ಯಾಪಾರ ಕುರಿತ ಕಾಂಗ್ರೆಸ್‌ ಆರೋಪದ ಕುರಿತು ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ ತೀವ್ರಗೊಂಡ ನಡುವೆಯೇ, ಸಿಬಿಐ ತನಿಖೆ ಆರಂಭಿಸಲು ರಾಜ್ಯ ಸರಕಾರದಿಂದ ಒದಗಿಸಲಾಗಿದ್ದ ಸಾರ್ವತ್ರಿಕ ಪೂರ್ವಾನುಮತಿ ನಿಯಮವನ್ನು ಗೆಹ್ಲೋಟ್‌ ಸರಕಾರ ರದ್ದುಪಡಿಸಿದೆ.
Vijaya Karnataka Web gehlot


ನಿರ್ದಿಷ್ಟ ಪ್ರಕರಣಕ್ಕೆ ಅನುಗುಣವಾಗಿ ರಾಜಸ್ಥಾನ ಸರಕಾರದ ಅನುಮತಿ ಪಡೆದೇ ಇನ್ನು ಮುಂದೆ ಸಿಬಿಐ ತನಿಖೆ ಆರಂಭಿಸಬೇಕಿದೆ. ದಿಲ್ಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯಿದೆಯ ಸೆಕ್ಷನ್‌ 3ರ ಅಡಿಯಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡುವ ಮುನ್ನ ಇಂತಹ ಅನುಮತಿ ಅಗತ್ಯ ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ.

ಕ್ರಮಕ್ಕೆ ಆಗ್ರಹ

ರಾಜಸ್ಥಾನ ಕಾಂಗ್ರೆಸ್‌ ನಾಯಕರು ಬಿಜೆಪಿಯ ಘನತೆಗೆ ಕುತ್ತು ತಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನೀಡಿರುವ ದೂರಿನ ಆಧಾರದ ಮೇಲೆ ಕಾಂಗ್ರೆಸ್‌ ನಾಯಕರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಗುಲಾಬ್‌ ಚಾಂದ್‌ ಕಟಾರಿಯಾ ಆಗ್ರಹಿಸಿದ್ದಾರೆ.

ಶೇಖಾವತ್‌ಗೆ ನೋಟಿಸ್‌

ಇನ್ನೊಂದೆಡೆಸರಕಾರವನ್ನು ಪತನಗೊಳಿಸಲು ಶಾಸಕರಿಗೆ ಲಂಚದ ಆಮಿಷ ಒಡ್ಡಿರುವ ಆರೋಪ ಹೊತ್ತಿರುವ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ರಾಜಸ್ಥಾನ ವಿಶೇಷ ತನಿಖಾ ಪೊಲೀಸ್‌ ದಳ (ಎಸ್‌ಓಜಿ) ನೋಟಿಸ್‌ ಜಾರಿಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ